ETV Bharat / state

ಕಲಬುರಗಿ ಸಿಎಎ ವಿರುದ್ಧ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆತರಲಾಗಿದೆ: ಶಿವರಾಜ್ ಪಾಟೀಲ್

author img

By

Published : Jan 24, 2020, 5:55 AM IST

ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದ್ದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದ್ದು, ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ನಡೆದ ಸಿಎಎ ವಿರುದ್ಧದ ಸಮಾವೇಶದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ‌.

Kalburgi BJP President Comment on Anti CAA Protest
ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಲಿಕಯ್ಯ ಗುತ್ತೆದಾರ

ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳವಾರ ನಗರದಲ್ಲಿ ನಡೆದ ಬೃಹತ್​ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ‌.

ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಲಿಕಯ್ಯ ಗುತ್ತೆದಾರ

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದಾರೆ. ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದರು.

ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸೋ ಕೆಲಸ ನಡೀತಿದೆ. ಪೌರತ್ವ ಮಸೂದೆಯನ್ನು ಹಿಂದೆ ನೆಹರು ತಂದಿದ್ದರು. ಆದರೆ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಈಗ ಪಿತೂರಿ ಮಾಡಲಾಗ್ತಿದೆ. ಮುಸ್ಲಿಂರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ, ಇದನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳವಾರ ನಗರದಲ್ಲಿ ನಡೆದ ಬೃಹತ್​ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ‌.

ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಲಿಕಯ್ಯ ಗುತ್ತೆದಾರ

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದಾರೆ. ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದರು.

ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸೋ ಕೆಲಸ ನಡೀತಿದೆ. ಪೌರತ್ವ ಮಸೂದೆಯನ್ನು ಹಿಂದೆ ನೆಹರು ತಂದಿದ್ದರು. ಆದರೆ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಈಗ ಪಿತೂರಿ ಮಾಡಲಾಗ್ತಿದೆ. ಮುಸ್ಲಿಂರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ, ಇದನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

Intro:ಕಲಬುರಗಿ: ಮಂಗಳವಾರ ನಗರದಲ್ಲಿ ನಡೆದ ಪೌರತ್ವ ವಿರೋಧಿ ರಾಷ್ಟ್ರಮಟ್ಟದ ಸಮಾವೇಶ ರಾಜಕೀಯ ಪ್ರೇರಿತವಾಗಿದ್ದು, ದುಡ್ಡು ಕೊಟ್ಟು ಜನರನ್ನು ಕರೆಸಿ ಸಮಾವೇಶ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ‌.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದಾರೆ. ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದರು. ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸೋ ಕೆಲಸ ನಡೀತಿದೆ. ಪೌರತ್ವ ಮಸೂದೆಯನ್ನು ಹಿಂದೆ ನೆಹರೂ ತಂದಿದ್ದರು. ಆದರೆ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಈಗ ಪಿತೂರಿ ಮಾಡಲಾಗ್ತಿದೆ. ಮುಸ್ಲಿಂರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ, ಇದನ್ನು ಅಸ್ಪಸಂಖ್ಯಾತ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಗುತ್ತೇದಾರ ಹೇಳಿದರು.

ಬಳೆ ಯಾರು ತೊಡಿಸ್ತಾರೆ ಮುಂದೆ ಗೊತ್ತಾಗಲಿದೆ:

ಮಂಗಳವಾರ ನಡೆದ ಪೌರತ್ವ ವಿರೋಧಿ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ವರ್ತನೆಗೆ ಮಾಲಿಕಯ್ಯ ಗುತ್ತೆದಾರ ಖಂಡಿಸಿದ್ದಾರೆ. ಅಮಿತ್ ಶಾ ಮತ್ತು ಮೋದಿ ಪುಕ್ಕಲರು, ಅವರಿಗೆ ಬಳೆ ತೊಡಿಸೋದಾಗಿ ಹೇಳಿ ಬಳೆ ಪ್ರದರ್ಶನ ಮಾಡಿದ ನಾಸೀರ್ ಹುಸೇನ್ ಓರ್ವ ಸಂಸ್ಕೃತಿ ಇರಲಾರದ ವ್ಯಕ್ತಿ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ. ರಾಷ್ಟ್ರ ನಾಯಕರ ಬಗ್ಗೆ ಅಗೌರವದಿಂದ ಮಾತನಾಡಿದ್ದಾನೆ. ಯಾರು ಯಾರಿಗೆ ಬಳೆ ತೊಡಿಸುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆತನ ಬಗ್ಗೆ ಮಾತನಾಡಿ ದೊಡ್ಡ ಲೀಡರ್ ಮಾಡಲು ಹೋಗೋದಿಲ್ಲ ಎಂದು ನಾಸೀರ್ ಹುಸೇನ್ ವರ್ತನೆಯನ್ನು ಗುತ್ತೆದಾರ ಖಂಡಿಸಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.