ETV Bharat / state

ಅಸಡ್ಡೆ ತೋರಿದರೆ ಎತ್ತಂಗಡಿ: ಜಿಲ್ಲಾಧಿಕಾರಿಗಳಿಗೆ ಆರ್​. ಅಶೋಕ್ ಖಡಕ್​​​​ ಎಚ್ಚರಿಕೆ

ಹಣದ ಕೊರತೆ ಬರದೆ ಇರೋ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈಗಾಗಲೇ ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡ್ತಿದ್ದೇವೆ. ಅಧಿಕಾರಿಗಳು ಫಿಲ್ಡ್​​​ಗೆ ಇಳಿದು ಕೆಲಸ ಮಾಡಬೇಕು, ಮನೆಯಲ್ಲೇ ಕುಳಿತು ಕೆಲಸ ಮಾಡಿದರೆ ಮುಲಾಜಿಲ್ಲದೆ ಮನೆಗೆ ಕಳುಹಿಸುತ್ತೇನೆ ಎಂದು ಕಂದಾಯ ಸಚಿವ ಆರ್​ ಅಶೋಕ್​​ ಎಚ್ಚರಿಕೆ ನೀಡಿದ್ದಾರೆ.

author img

By

Published : Oct 16, 2020, 1:04 PM IST

if- you are lazy we will transfer: R Ashok strictly warn to DC's
ಜಿಲ್ಲಾಧಿಕಾರಿಗಳಿಗೆ ಅಶೋಕ್ ಖಡಕ್​​​​ ಎಚ್ಚರಿಕೆ

ಕಲಬುರಗಿ: ಮನೆಯಲ್ಲೇ ಕುಳಿತು ಕೆಲಸ ಮಾಡಿದ್ರೆ ಮುಲಾಜಿಲ್ಲದೆ ಮನೆಗೇ ಕಳುಹಿಸುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹಣದ ಕೊರತೆ ಬರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡ್ತಿದ್ದೇವೆ. ಅಧಿಕಾರಿಗಳು ಫೀಲ್ಡ್​​​ಗೆ ಇಳಿದು ಕೆಲಸ ಮಾಡಬೇಕು, ಮನೆಯಲ್ಲೇ ಕುಳಿತು ಕೆಲಸ ಮಾಡುವಂತಿಲ್ಲ ಎಂದರು.

ಕಲಬುರಗಿ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ವೇಳೆ ಡಿಸಿಗಳಿಗೆ ಸಚಿವ ಆರ್ ಅಶೋಕ್​ ಖಡಕ್​ ಸೂಚನೆ

ಅಲ್ಲದೆ ಸೋಮಾರಿತನ ಮಾಡಿದರೆ ಅಂತಹವರನ್ನು ಎತ್ತಂಗಡಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ವಿರೋಧ ಮಾಡುವುದೇ ಪ್ರತಿಪಕ್ಷದವರ ಕೆಲಸ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ತಿರುಗೇಟು ನೀಡಿದ್ದಾರೆ.

ಕಲಬುರಗಿ: ಮನೆಯಲ್ಲೇ ಕುಳಿತು ಕೆಲಸ ಮಾಡಿದ್ರೆ ಮುಲಾಜಿಲ್ಲದೆ ಮನೆಗೇ ಕಳುಹಿಸುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹಣದ ಕೊರತೆ ಬರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡ್ತಿದ್ದೇವೆ. ಅಧಿಕಾರಿಗಳು ಫೀಲ್ಡ್​​​ಗೆ ಇಳಿದು ಕೆಲಸ ಮಾಡಬೇಕು, ಮನೆಯಲ್ಲೇ ಕುಳಿತು ಕೆಲಸ ಮಾಡುವಂತಿಲ್ಲ ಎಂದರು.

ಕಲಬುರಗಿ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ವೇಳೆ ಡಿಸಿಗಳಿಗೆ ಸಚಿವ ಆರ್ ಅಶೋಕ್​ ಖಡಕ್​ ಸೂಚನೆ

ಅಲ್ಲದೆ ಸೋಮಾರಿತನ ಮಾಡಿದರೆ ಅಂತಹವರನ್ನು ಎತ್ತಂಗಡಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ವಿರೋಧ ಮಾಡುವುದೇ ಪ್ರತಿಪಕ್ಷದವರ ಕೆಲಸ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.