ETV Bharat / state

ಸಚಿವರ ಮನೆಗೆ ಹೋಗಿ ಲಸಿಕೆ ನೀಡಿದ ಅಧಿಕಾರಿಗೆ ನೋಟಿಸ್​ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ!

ಕೃಷಿ ಸಚಿವ ಬಿ.ಸಿ ಪಾಟೀಲ್​ ಮನೆಯಲ್ಲಿ ಹೆಚ್ಚು ಜನಕ್ಕೆ ಲಸಿಕೆ ಹಾಕಬಹುದು ಎನ್ನುವ ಉದ್ದೇಶಕ್ಕಾಗಿ ಅವರ ಮನೆಗೆ ಆ್ಯಂಬುಲನ್ಸ್​ ಸಮೇತ ಹೋಗಿದ್ದೆವು. ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಕಾಂದರ್ ತಿಳಿಸಿದ್ದಾರೆ.

author img

By

Published : Mar 2, 2021, 10:39 PM IST

Updated : Mar 2, 2021, 11:02 PM IST

notice-to-hirekere-health-officer-for-provide-vaccine-to-b-c-patil
ತಾಲೂಕು ಆರೋಗ್ಯಾಧಿಕಾರಿ ಡಾ.ಮಕಾಂದರ್

ಹಾವೇರಿ: ಸಚಿವ ಬಿ.ಸಿ.ಪಾಟೀಲ್ ವೈದ್ಯಕೀಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಕೋವಿಡ್​ ಲಸಿಕೆ ಹಾಕಿಸಿಕೊಂಡಿರುವ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಗೆ, ಜಿಲ್ಲಾ ಆರೋಗ್ಯಾಧಿಕಾರಿ ಕಾರಣ ಕೇಳಿ ನೋಟಿಸ್​ ನೀಡಿದ್ದಾರೆ.

ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ರಾಜೇಂದ್ರ ದೊಡ್ಡಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದರ್‌ಗೆ ನೋಟಿಸ್​ ನೀಡಿ ಉತ್ತರಿಸುವಂತೆ ಸೂಚಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಮಕಾಂದರ್

ಓದಿ: ಮನೆಯಲ್ಲೇ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಬಿ.ಸಿ. ಪಾಟೀಲ್ ಕೊಟ್ಟ ಕಾರಣ ಹೀಗಿದೆ..

ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಮುಂಜಾನೆ ಐದು ಸಿಬ್ಬಂದಿ ಜೊತೆ ಸಚಿವರ ಮನೆಗೆ ತೆರಳಿ ಬಿ.ಸಿ.ಪಾಟೀಲ್ ಮತ್ತು ಅವರ ಪತ್ನಿಗೆ ಕೊರೊನಾ ಲಸಿಕೆ ಹಾಕಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಾ.ಮಕಾಂದರ್, ಕೃಷಿ ಸಚಿವರ ಮನೆಯಲ್ಲಿ ಹೆಚ್ಚು ಜನಕ್ಕೆ ಲಸಿಕೆ ಹಾಕಬಹುದೆಂಬ ಉದ್ದೇಶಕ್ಕಾಗಿ ಅವರ ಮನೆಗೆ ಆ್ಯಂಬುಲನ್ಸ್​ ಸಮೇತ ಹೋಗಿದ್ದೆವು. ಬೇರೆ ಉದ್ದೇಶ ಇರಲಿಲ್ಲ. ಈ ರೀತಿ ಮನೆಗೆ ಹೋಗಿ ಹಾಕುವ ನಿಯಮ ಇಲ್ಲ. ಆದರೂ ಸಹ ತಾವು ನಿಯಮ ಉಲ್ಲಂಘಿಸಿ ಹೋಗಿರುವುದಾಗಿ ತಿಳಿಸಿದ್ದಾರೆ.

ಹಾವೇರಿ: ಸಚಿವ ಬಿ.ಸಿ.ಪಾಟೀಲ್ ವೈದ್ಯಕೀಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಕೋವಿಡ್​ ಲಸಿಕೆ ಹಾಕಿಸಿಕೊಂಡಿರುವ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಗೆ, ಜಿಲ್ಲಾ ಆರೋಗ್ಯಾಧಿಕಾರಿ ಕಾರಣ ಕೇಳಿ ನೋಟಿಸ್​ ನೀಡಿದ್ದಾರೆ.

ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿಯಾದ ಡಾ.ರಾಜೇಂದ್ರ ದೊಡ್ಡಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದರ್‌ಗೆ ನೋಟಿಸ್​ ನೀಡಿ ಉತ್ತರಿಸುವಂತೆ ಸೂಚಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಮಕಾಂದರ್

ಓದಿ: ಮನೆಯಲ್ಲೇ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಬಿ.ಸಿ. ಪಾಟೀಲ್ ಕೊಟ್ಟ ಕಾರಣ ಹೀಗಿದೆ..

ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಮುಂಜಾನೆ ಐದು ಸಿಬ್ಬಂದಿ ಜೊತೆ ಸಚಿವರ ಮನೆಗೆ ತೆರಳಿ ಬಿ.ಸಿ.ಪಾಟೀಲ್ ಮತ್ತು ಅವರ ಪತ್ನಿಗೆ ಕೊರೊನಾ ಲಸಿಕೆ ಹಾಕಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಾ.ಮಕಾಂದರ್, ಕೃಷಿ ಸಚಿವರ ಮನೆಯಲ್ಲಿ ಹೆಚ್ಚು ಜನಕ್ಕೆ ಲಸಿಕೆ ಹಾಕಬಹುದೆಂಬ ಉದ್ದೇಶಕ್ಕಾಗಿ ಅವರ ಮನೆಗೆ ಆ್ಯಂಬುಲನ್ಸ್​ ಸಮೇತ ಹೋಗಿದ್ದೆವು. ಬೇರೆ ಉದ್ದೇಶ ಇರಲಿಲ್ಲ. ಈ ರೀತಿ ಮನೆಗೆ ಹೋಗಿ ಹಾಕುವ ನಿಯಮ ಇಲ್ಲ. ಆದರೂ ಸಹ ತಾವು ನಿಯಮ ಉಲ್ಲಂಘಿಸಿ ಹೋಗಿರುವುದಾಗಿ ತಿಳಿಸಿದ್ದಾರೆ.

Last Updated : Mar 2, 2021, 11:02 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.