ETV Bharat / state

ನನ್ನ ಮಗ ಸ್ನೇಹಿತರಿಗೆ ಬ್ರೆಡ್, ಬಿಸ್ಕೆಟ್​ ತರಲು ಹೋಗಿದ್ದ, ಅವನ ಬಗ್ಗೆ ಏನೆನೋ ಮಾತಾಡ್ಬೇಡಿ...ಕಣ್ಣೀರಿಟ್ಟು ಮನವಿ ಮಾಡಿದ ನವೀನ್​​ ತಾಯಿ

author img

By

Published : Mar 9, 2022, 3:36 PM IST

Updated : Mar 9, 2022, 6:01 PM IST

ಉಕ್ರೇನ್​ನಲ್ಲಿ ಬಾಂಬ್​ ದಾಳಿಗೆ ಬಲಿಯಾದ ಮೆಡಿಕಲ್​ ವಿದ್ಯಾರ್ಥಿ ನವೀನ್​ ನಿವಾಸಕ್ಕೆ ಇಂದು ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆತನ ಬಗ್ಗೆ ಟ್ರೋಲ್​ ಪೇಜ್​ನಲ್ಲಿ ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿದರು. ನವೀನ್​ ತಾಯಿ ಸಹ ತಮ್ಮ ಮಗನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನಾಡಬೇಡಿ ಟ್ರೋಲಿಗರಿಗೆ ಕೈಮುಗಿದು ಮನವಿ ಮಾಡಿದರು.

Naveen friend visited his residence at Haveri
ಮೃತ ನವೀನ್​ ನಿವಾಸಕ್ಕೆ ಸ್ನೇಹಿತರು ಭೇಟಿ

ಹಾವೇರಿ: ಇಂದು ಮೃತ ನವೀನ್ ನಿವಾಸಕ್ಕೆ ಉಕ್ರೇನ್​ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುತ್ರನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡದಂತೆ ಮನವಿ ಮಾಡಿದ ನವೀನ್​ ತಾಯಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್​​ ಸೀನಿಯರ್​​​​ ಸುಮನ್, ನಾನು ಫೈನಲ್ ಇಯರ್ ಸ್ಟೂಡೆಂಟ್, ನಾನು ಹಾಸ್ಟೆಲ್ ಬಂಕರ್​​​​ನಲ್ಲಿದ್ದೆ. ಅಮೀತ್ ಜೊತೆ ನವೀನ್​​ ಬಂಕರ್​​​ನಲ್ಲಿದ್ದ. ನನ್ನ ತಮ್ಮನ ರೀತಿ ಇದ್ದ. ​​ಕರ್ಫ್ಯೂ ಸಮಯ ಮುಗಿದ ಮೇಲೆ ನವೀನ್​ ಹೊರಗೆ ಹೋಗಿದ್ದನು. ಆದರೆ ಕೆಲವೊಂದು ಟ್ರೋಲ್​​ ಪೇಜ್​ಗಳು ಅನಾವಶ್ಯಕವಾಗಿ ಏನೇನು ಹೇಳುತ್ತಿದ್ದಾರೆ. ಹಾಗೇ ಮಾಡಬೇಡಿ ಎಂದು ಮನವಿ ಮಾಡಿದರು.

ನಂತರ ನವೀನ್​ ಸ್ನೇಹಿತ ಅಮೀತ್ ಮಾತನಾಡಿ, ನವೀನ್​ ನಮ್ಮೊಟ್ಟಿಗೆ ಚೆನ್ನಾಗಿದ್ದ. ನಾನು ಊರಿಗೆ ವಾಪಸ್ಸಾಗಿದ್ದೇನೆ ಎನ್ನುವುದಕ್ಕಿಂತ ನವೀನ್​ ನಮ್ಮೊಟ್ಟಿಗೆ ಇಲ್ಲ ಎಂಬ ಬೇಜಾರಿದೆ. ನಾವ್ಯಾರು ನವೀನ್​​​ ಮೃತದೇಹ ನೋಡಿಲ್ಲ. ಅವನ ಕುಟುಂಬದವರು ನೋವಿನಲ್ಲಿದ್ದಾರೆ. ಸರ್ಕಾರದ ಅಧಿಕಾರಿಗಳು ಆದಷ್ಟು ಬೇಗ ನವೀನ್​ ಮೃತದೇಹವನ್ನು ಇಲ್ಲಿಗೆ ತರಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ​​​ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್​ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್​​​ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್​​ ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಬೇಡಿಕೊಂಡರು.

ಇದನ್ನೂ ಓದಿ: ಮಾ.12ರಂದು 45 ಲಕ್ಷ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ-ಆದಾಯ ಪ್ರಮಾಣಪತ್ರ: ಸಚಿವ ಅಶೋಕ್​

ಹಾವೇರಿ: ಇಂದು ಮೃತ ನವೀನ್ ನಿವಾಸಕ್ಕೆ ಉಕ್ರೇನ್​ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುತ್ರನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡದಂತೆ ಮನವಿ ಮಾಡಿದ ನವೀನ್​ ತಾಯಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್​​ ಸೀನಿಯರ್​​​​ ಸುಮನ್, ನಾನು ಫೈನಲ್ ಇಯರ್ ಸ್ಟೂಡೆಂಟ್, ನಾನು ಹಾಸ್ಟೆಲ್ ಬಂಕರ್​​​​ನಲ್ಲಿದ್ದೆ. ಅಮೀತ್ ಜೊತೆ ನವೀನ್​​ ಬಂಕರ್​​​ನಲ್ಲಿದ್ದ. ನನ್ನ ತಮ್ಮನ ರೀತಿ ಇದ್ದ. ​​ಕರ್ಫ್ಯೂ ಸಮಯ ಮುಗಿದ ಮೇಲೆ ನವೀನ್​ ಹೊರಗೆ ಹೋಗಿದ್ದನು. ಆದರೆ ಕೆಲವೊಂದು ಟ್ರೋಲ್​​ ಪೇಜ್​ಗಳು ಅನಾವಶ್ಯಕವಾಗಿ ಏನೇನು ಹೇಳುತ್ತಿದ್ದಾರೆ. ಹಾಗೇ ಮಾಡಬೇಡಿ ಎಂದು ಮನವಿ ಮಾಡಿದರು.

ನಂತರ ನವೀನ್​ ಸ್ನೇಹಿತ ಅಮೀತ್ ಮಾತನಾಡಿ, ನವೀನ್​ ನಮ್ಮೊಟ್ಟಿಗೆ ಚೆನ್ನಾಗಿದ್ದ. ನಾನು ಊರಿಗೆ ವಾಪಸ್ಸಾಗಿದ್ದೇನೆ ಎನ್ನುವುದಕ್ಕಿಂತ ನವೀನ್​ ನಮ್ಮೊಟ್ಟಿಗೆ ಇಲ್ಲ ಎಂಬ ಬೇಜಾರಿದೆ. ನಾವ್ಯಾರು ನವೀನ್​​​ ಮೃತದೇಹ ನೋಡಿಲ್ಲ. ಅವನ ಕುಟುಂಬದವರು ನೋವಿನಲ್ಲಿದ್ದಾರೆ. ಸರ್ಕಾರದ ಅಧಿಕಾರಿಗಳು ಆದಷ್ಟು ಬೇಗ ನವೀನ್​ ಮೃತದೇಹವನ್ನು ಇಲ್ಲಿಗೆ ತರಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ​​​ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್​ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್​​​ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್​​ ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಬೇಡಿಕೊಂಡರು.

ಇದನ್ನೂ ಓದಿ: ಮಾ.12ರಂದು 45 ಲಕ್ಷ ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ-ಆದಾಯ ಪ್ರಮಾಣಪತ್ರ: ಸಚಿವ ಅಶೋಕ್​

Last Updated : Mar 9, 2022, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.