ETV Bharat / state

ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ: ಬಿಜೆಪಿಗೆ ಡಿಕೆಶಿ ಟಾಂಗ್

ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಇಳಿಕೆ ಮಾಡಿ ಸಂಭ್ರಮಿಸಿ ಎಂದು ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದ್ರು.

author img

By

Published : Oct 24, 2021, 9:05 PM IST

ಡಿಕೆಶಿ
ಡಿಕೆಶಿ

ಹಾವೇರಿ : ಸಂಜೆ ಐದು ಗಂಟೆ ನಂತರ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಹೇಳಿದ್ದಾರೆ. ಅದರಲ್ಲೂ ಪ್ರಧಾನಿಯವರ ಸ್ವಕ್ಷೇತ್ರದಲ್ಲಿ ಇಂಥ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇದ್ಯಾ ಅನ್ನೋ ಅನುಮಾನ ಕಾಡ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ನಮ್ಮ ದೇಶದಲ್ಲಿ ಮಹಿಳೆ ರಾತ್ರಿ 12 ಗಂಟೆಗೆ ಒಬ್ಬಂಟಿಯಾಗಿ ಓಡಾಡುತ್ತಾರೋ? ಆಗ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಹೇಳಿದ್ದರು. ಈಗ ನೋಡಿದರೆ, ಸಂಜೆಯಲ್ಲಿಯೇ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ದೇಶದ ಹೆಣ್ಣುಮಕ್ಕಳು ಸಿಡಿದೆದ್ದು ಬಿಜೆಪಿ ವಿರುದ್ಧ ಮತ ಹಾಕಬೇಕು ಎಂದು ಕರೆಕೊಟ್ಟಿದ್ದಾರೆ.

ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

‘ಸಂಭ್ರಮಿಸುವುದು ತರವಲ್ಲ’

ಕೇವಲ ಎರಡು ದಿನಗಳಲ್ಲಿ 100 ಕೋಟಿ ಲಸಿಕೆ ಡೋಸ್ ನೀಡಿದ್ದಕ್ಕೆ ಬಿಜೆಪಿ ಸಂಭ್ರಮ ಪಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು. ಸೆಲಬ್ರೇಷನ್ ಯಾವಾಗ ಮಾಡಬೇಕೆಂದರೆ, ಕೋವಿಡ್​ನಿಂದ ಜನರನ್ನು ಉಳಿಸಿದ್ದಾಗ. ವೈರಸ್​ಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಇದೀಗ ಜಾಸ್ತಿ ವ್ಯಾಕ್ಸಿನೇಷನ್ ಮಾಡಿದ್ದೇವೆ ಅಂತಾ ಸಂಭ್ರಮಿಸೋದು ತರವಲ್ಲ ಎಂದರು.

ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ, ಸಂಭ್ರಮಿಸಿ

ಈ ದೇಶದ ರೈತರ ಆದಾಯ ಡಬಲ್ ಮಾಡ್ತೀನಿ ಅಂದಿದ್ದೀರಿ. ರೈತರಿಗೆ ಪರಿಹಾರವನ್ನೇ ಕೊಡಲಿಲ್ಲ. ಬೀದಿ ವ್ಯಾಪಾರ ಮಾಡಿಕೊಂಡು ಬಂದವರಿಗೆ ಪರಿಹಾರ ಕೊಡಲಾಗಲಿಲ್ಲ. ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಇಳಿಕೆ ಮಾಡಿ ಸಂಭ್ರಮಿಸಿ ಎಂದು ಕಿಡಿಕಾರಿದರು.

‘ಯಾವ ಪುರುಷಾರ್ಥಕ್ಕೆ ಇಂಥ ಹೇಳಿಕೆ?’

ರೈತರ ಆದಾಯ ದ್ವಿಗುಣಗೊಂಡು ರೇಷ್ಮೆ ಬಟ್ಟೆ ಧರಿಸಬೇಕೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಾ ಸ್ವಾಮಿ, ರೈತರು ಯಾವಾಗ ರೇಷ್ಮೆ ಬಟ್ಟೆ ಹಾಕೋದು. ಮೊದಲು ಅವರ ಆದಾಯ ದುಪ್ಪಟ್ಟು ಮಾಡಿ. ಆಗ ಅವರು ಜುರ್ಕಿ ಚಪ್ಪಲಿ, ರೇಷ್ಮೆ ಬಟ್ಟೆ ಹಾಕ್ತಾರೆ. ಅದನ್ನು ಬಿಟ್ಟು ಅವರ ಎದೆಗೆ ಬಾರುಕೋಲಿನಿಂದ ಚುಚ್ಚಿ ಯಾಕೆ ಸಾಯಿಸ್ತೀರಿ? ಯಾವ ಪುರುಷಾರ್ಥಕ್ಕೆ ಇಂಥ ಹೇಳಿಕೆ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಂಸದ ಪ್ರದೀಪ್ ಮಾಝಿ ಬಿಜೆಡಿಗೆ ಸೇರ್ಪಡೆ: ಅಧಿಕೃತ ಘೋಷಣೆ

ಹಾವೇರಿ : ಸಂಜೆ ಐದು ಗಂಟೆ ನಂತರ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಹೇಳಿದ್ದಾರೆ. ಅದರಲ್ಲೂ ಪ್ರಧಾನಿಯವರ ಸ್ವಕ್ಷೇತ್ರದಲ್ಲಿ ಇಂಥ ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇದ್ಯಾ ಅನ್ನೋ ಅನುಮಾನ ಕಾಡ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ನಮ್ಮ ದೇಶದಲ್ಲಿ ಮಹಿಳೆ ರಾತ್ರಿ 12 ಗಂಟೆಗೆ ಒಬ್ಬಂಟಿಯಾಗಿ ಓಡಾಡುತ್ತಾರೋ? ಆಗ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಹೇಳಿದ್ದರು. ಈಗ ನೋಡಿದರೆ, ಸಂಜೆಯಲ್ಲಿಯೇ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ದೇಶದ ಹೆಣ್ಣುಮಕ್ಕಳು ಸಿಡಿದೆದ್ದು ಬಿಜೆಪಿ ವಿರುದ್ಧ ಮತ ಹಾಕಬೇಕು ಎಂದು ಕರೆಕೊಟ್ಟಿದ್ದಾರೆ.

ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

‘ಸಂಭ್ರಮಿಸುವುದು ತರವಲ್ಲ’

ಕೇವಲ ಎರಡು ದಿನಗಳಲ್ಲಿ 100 ಕೋಟಿ ಲಸಿಕೆ ಡೋಸ್ ನೀಡಿದ್ದಕ್ಕೆ ಬಿಜೆಪಿ ಸಂಭ್ರಮ ಪಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು. ಸೆಲಬ್ರೇಷನ್ ಯಾವಾಗ ಮಾಡಬೇಕೆಂದರೆ, ಕೋವಿಡ್​ನಿಂದ ಜನರನ್ನು ಉಳಿಸಿದ್ದಾಗ. ವೈರಸ್​ಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಇದೀಗ ಜಾಸ್ತಿ ವ್ಯಾಕ್ಸಿನೇಷನ್ ಮಾಡಿದ್ದೇವೆ ಅಂತಾ ಸಂಭ್ರಮಿಸೋದು ತರವಲ್ಲ ಎಂದರು.

ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ, ಸಂಭ್ರಮಿಸಿ

ಈ ದೇಶದ ರೈತರ ಆದಾಯ ಡಬಲ್ ಮಾಡ್ತೀನಿ ಅಂದಿದ್ದೀರಿ. ರೈತರಿಗೆ ಪರಿಹಾರವನ್ನೇ ಕೊಡಲಿಲ್ಲ. ಬೀದಿ ವ್ಯಾಪಾರ ಮಾಡಿಕೊಂಡು ಬಂದವರಿಗೆ ಪರಿಹಾರ ಕೊಡಲಾಗಲಿಲ್ಲ. ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಇಳಿಕೆ ಮಾಡಿ ಸಂಭ್ರಮಿಸಿ ಎಂದು ಕಿಡಿಕಾರಿದರು.

‘ಯಾವ ಪುರುಷಾರ್ಥಕ್ಕೆ ಇಂಥ ಹೇಳಿಕೆ?’

ರೈತರ ಆದಾಯ ದ್ವಿಗುಣಗೊಂಡು ರೇಷ್ಮೆ ಬಟ್ಟೆ ಧರಿಸಬೇಕೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಾ ಸ್ವಾಮಿ, ರೈತರು ಯಾವಾಗ ರೇಷ್ಮೆ ಬಟ್ಟೆ ಹಾಕೋದು. ಮೊದಲು ಅವರ ಆದಾಯ ದುಪ್ಪಟ್ಟು ಮಾಡಿ. ಆಗ ಅವರು ಜುರ್ಕಿ ಚಪ್ಪಲಿ, ರೇಷ್ಮೆ ಬಟ್ಟೆ ಹಾಕ್ತಾರೆ. ಅದನ್ನು ಬಿಟ್ಟು ಅವರ ಎದೆಗೆ ಬಾರುಕೋಲಿನಿಂದ ಚುಚ್ಚಿ ಯಾಕೆ ಸಾಯಿಸ್ತೀರಿ? ಯಾವ ಪುರುಷಾರ್ಥಕ್ಕೆ ಇಂಥ ಹೇಳಿಕೆ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಂಸದ ಪ್ರದೀಪ್ ಮಾಝಿ ಬಿಜೆಡಿಗೆ ಸೇರ್ಪಡೆ: ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.