ETV Bharat / state

ಬಿಜೆಪಿಯಿಂದ ಡಿಜಿಟಲ್​ ರ್‍ಯಾಲಿಗೆ ತಯಾರಿ: ಗ್ರಾಮೀಣ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ

author img

By

Published : Jun 8, 2020, 7:52 PM IST

Updated : Jun 8, 2020, 8:34 PM IST

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪಕ್ಷದ ಜನಹಿತ ಕಾರ್ಯಗಳನ್ನು ಎಲ್ಲಾ ಜನತೆಗೆ ತಲುಪಿಸುವುದು ಡಿಜಿಟಲ್ ರ್‍ಯಾಲಿ ಉದ್ದೇಶವಾಗಿದೆ. ಇಂದಿನ ಯುವ ಉತ್ಸಾಹಿ ಯುವಕರು ಈ ಡಿಜಿಟಲ್ ತಂಡದಲ್ಲಿ ಸೇರಿಕೊಂಡು ಕೆಲಸ ಮಾಡಲಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

digital-rally-from-bjp-during-corona-time-at-hanagal
ಕೊರೊನಾ ಕಾಲದಲ್ಲಿ ಬಿಜೆಪಿಯಿಂದ ಡಿಜಿಟಲ್​ ರ್‍ಯಾಲಿಗೆ ತಯಾರಿ

ಹಾನಗಲ್: ಬಿಜೆಪಿ ಹೈಕಮಾಂಡ್​ ಆದೇಶದಂತೆ ತಾಲೂಕಿನಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಶಾಸಕ ಸಿ.ಎಂ.ಉದಾಸಿ ನಿವಾಸದಲ್ಲಿ ಗ್ರಾಮೀಣ ಮಟ್ಟದ ಡಿಜಿಟಲ್ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಕೊರೊನಾ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ರ್‍ಯಾಲಿ ನಡೆಸಲು ಆಗುವುದಿಲ್ಲ. ಆದ್ದರಿಂದ ವಾಟ್ಸ್​​ಆ್ಯಪ್​, ಫೇಸ್​ಬುಕ್​​ಗಳ ಮೂಲಕ ಡಿಜಿಟಲ್ ರ್‍ಯಾಲಿ ನಡೆಸಿ ಸರ್ಕಾರದ ಸಾಧನೆ ಮತ್ತು ಪಕ್ಷ ಸಂಘಟನೆಯ ಬಗ್ಗೆ ತಿಳಿಸಲು ಅನೂಕೂಲ ಆಗುವ ದೃಷ್ಟಿಯಿಂದ ಈ ತಂಡ ರಚಿಸಲಾಗಿದೆ ಎಂದು ಬಿಜೆಪಿ ತಾಲೂಕು​​​ ಅಧ್ಯಕ್ಷ ರಾಜು ಗೌಳಿ ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ

ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ, ಹಳ್ಳಿಗಳು, ಬೂತ್​​ಗಳಲ್ಲಿ ಪಕ್ಷದ ಯುವಕರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪಕ್ಷದ ಜನಹಿತ ಕಾರ್ಯಗಳನ್ನು ಎಲ್ಲಾ ಜನತೆಗೆ ತಲುಪಿಸುವ ಉದ್ದೇಶ ಇದರದ್ದಾಗಿದೆ. ಇಂದಿನ ಯುವ ಉತ್ಸಾಹಿ ಯುವಕರು ಈ ಡಿಜಿಟಲ್ ತಂಡದಲ್ಲಿ ಸೇರಿಕೊಂಡು ಕಾರ್ಯ ಮಾಡಲಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

ಹಾನಗಲ್: ಬಿಜೆಪಿ ಹೈಕಮಾಂಡ್​ ಆದೇಶದಂತೆ ತಾಲೂಕಿನಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲು ಶಾಸಕ ಸಿ.ಎಂ.ಉದಾಸಿ ನಿವಾಸದಲ್ಲಿ ಗ್ರಾಮೀಣ ಮಟ್ಟದ ಡಿಜಿಟಲ್ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಕೊರೊನಾ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ರ್‍ಯಾಲಿ ನಡೆಸಲು ಆಗುವುದಿಲ್ಲ. ಆದ್ದರಿಂದ ವಾಟ್ಸ್​​ಆ್ಯಪ್​, ಫೇಸ್​ಬುಕ್​​ಗಳ ಮೂಲಕ ಡಿಜಿಟಲ್ ರ್‍ಯಾಲಿ ನಡೆಸಿ ಸರ್ಕಾರದ ಸಾಧನೆ ಮತ್ತು ಪಕ್ಷ ಸಂಘಟನೆಯ ಬಗ್ಗೆ ತಿಳಿಸಲು ಅನೂಕೂಲ ಆಗುವ ದೃಷ್ಟಿಯಿಂದ ಈ ತಂಡ ರಚಿಸಲಾಗಿದೆ ಎಂದು ಬಿಜೆಪಿ ತಾಲೂಕು​​​ ಅಧ್ಯಕ್ಷ ರಾಜು ಗೌಳಿ ತಿಳಿಸಿದರು.

ಗ್ರಾಮೀಣ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ

ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ, ಹಳ್ಳಿಗಳು, ಬೂತ್​​ಗಳಲ್ಲಿ ಪಕ್ಷದ ಯುವಕರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಪಕ್ಷದ ಜನಹಿತ ಕಾರ್ಯಗಳನ್ನು ಎಲ್ಲಾ ಜನತೆಗೆ ತಲುಪಿಸುವ ಉದ್ದೇಶ ಇದರದ್ದಾಗಿದೆ. ಇಂದಿನ ಯುವ ಉತ್ಸಾಹಿ ಯುವಕರು ಈ ಡಿಜಿಟಲ್ ತಂಡದಲ್ಲಿ ಸೇರಿಕೊಂಡು ಕಾರ್ಯ ಮಾಡಲಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

Last Updated : Jun 8, 2020, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.