ETV Bharat / state

ಹಾಸನದಲ್ಲಿ ಹದಗೆಟ್ಟ ಲಾರಿ ನಿಲುಗಡೆ ಜಾಗ: ಲಾರಿ ಮಾಲೀಕರು, ಚಾಲಕರ ಅಳಲು - latest hassan news

ಹಾಸನದಲ್ಲಿ ಲಾರಿ ನಿಲ್ಲಿಸುವ ಜಾಗ ಅವ್ಯವಸ್ಥೆಯಿಂದ ಕೂಡಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರು ಕಂಗಾಲಾಗಿದ್ದಾರೆ.

ಹದಗೆಟ್ಟ ಲಾರಿ ನಿಲುಗಡೆ ಪ್ರದೇಶ : ಲಾರಿ ಮಾಲೀಕರ ಮತ್ತು ಚಾಲಕರ ರೋಧನೆ
author img

By

Published : Nov 19, 2019, 10:45 AM IST

ಹಾಸನ: ನಗರದಲ್ಲಿ ಲಾರಿ ನಿಲುಗಡೆ ಪ್ರದೇಶಕ್ಕೆ ಸ್ವಂತ ನೆಲೆ ಸಿಗುವ ಲಕ್ಷಣಗಳೇ ಕಾಣದಂತಾಗಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರು ಕಂಗಾಲಾಗಿದ್ದಾರೆ.

ಹದಗೆಟ್ಟ ಲಾರಿ ನಿಲುಗಡೆ ಪ್ರದೇಶ : ಲಾರಿ ಮಾಲೀಕರು ಮತ್ತು ಚಾಲಕರ ಅಳಲು

ರಾಜಘಟ್ಟ ರಸ್ತೆಯಲ್ಲಿರುವ ರೈಲು ನಿಲ್ದಾಣ ಸಮೀಪ ರೈಲ್ವೆ ಇಲಾಖೆಗೆ ಸೇರಿದ 10 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಟ್ರಕ್‌ ಟರ್ಮಿನಲ್‌ಗೆ ಜಾಗ ನೀಡಲಾಗಿದೆ. ಪ್ರತಿ ದಿನ ನೂರಾರು ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಆದರೀಗ ಮೂಲ ಸೌಲಭ್ಯ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದಲೇ ಮಣ್ಣು ಸುರಿಸಿ ಸಮತಟ್ಟು ಮಾಡಿಸಿದ್ದರೂ ಸಹ ಮಳೆ ಬಂದರೆ ಲಾರಿಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.

ಪ್ರಸ್ತುತ ಈ ಟರ್ಮಿನಲ್‌ನಲ್ಲಿ 500 ಲಾರಿಗಳ ನಿಲುಗಡೆಗೆ ಸ್ಥಳಾವಕಾಶವಿದೆ. ಆದರೆ, ಶಾಶ್ವತ ನೆಲೆ ಸಿಗದ ಕಾರಣ ಲಾರಿ ಮಾಲೀಕರು, ಚಾಲಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲದೇ, ಕುಡಿಯಲು ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ವಿಶ್ರಾಂತಿ ಪಡೆಯಲು ಕೊಠಡಿ ಇಲ್ಲ. ಮಳೆ, ಬಿಸಿಲು, ಧೂಳಿನ ನಡುವೆ ಲಾರಿ ಮಾಲೀಕರು, ಚಾಲಕರು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ಹಲವು ಬಾರಿ ವಾಹನಗಳ ಬಿಡಿ ಭಾಗಗಳ ಕಳ್ಳತನವಾಗಿದೆ. ಶಾಶ್ವತ ನೆಲೆ ಒದಗಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗದೆ ಲಾರಿ ಮಾಲೀಕರು ಮತ್ತು ಚಾಲಕರು ದಾರಿ ಕಾಣದಂತಾಗಿದೆ.

ಹಾಸನ: ನಗರದಲ್ಲಿ ಲಾರಿ ನಿಲುಗಡೆ ಪ್ರದೇಶಕ್ಕೆ ಸ್ವಂತ ನೆಲೆ ಸಿಗುವ ಲಕ್ಷಣಗಳೇ ಕಾಣದಂತಾಗಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರು ಕಂಗಾಲಾಗಿದ್ದಾರೆ.

ಹದಗೆಟ್ಟ ಲಾರಿ ನಿಲುಗಡೆ ಪ್ರದೇಶ : ಲಾರಿ ಮಾಲೀಕರು ಮತ್ತು ಚಾಲಕರ ಅಳಲು

ರಾಜಘಟ್ಟ ರಸ್ತೆಯಲ್ಲಿರುವ ರೈಲು ನಿಲ್ದಾಣ ಸಮೀಪ ರೈಲ್ವೆ ಇಲಾಖೆಗೆ ಸೇರಿದ 10 ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಟ್ರಕ್‌ ಟರ್ಮಿನಲ್‌ಗೆ ಜಾಗ ನೀಡಲಾಗಿದೆ. ಪ್ರತಿ ದಿನ ನೂರಾರು ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಆದರೀಗ ಮೂಲ ಸೌಲಭ್ಯ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದಲೇ ಮಣ್ಣು ಸುರಿಸಿ ಸಮತಟ್ಟು ಮಾಡಿಸಿದ್ದರೂ ಸಹ ಮಳೆ ಬಂದರೆ ಲಾರಿಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.

ಪ್ರಸ್ತುತ ಈ ಟರ್ಮಿನಲ್‌ನಲ್ಲಿ 500 ಲಾರಿಗಳ ನಿಲುಗಡೆಗೆ ಸ್ಥಳಾವಕಾಶವಿದೆ. ಆದರೆ, ಶಾಶ್ವತ ನೆಲೆ ಸಿಗದ ಕಾರಣ ಲಾರಿ ಮಾಲೀಕರು, ಚಾಲಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲದೇ, ಕುಡಿಯಲು ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ವಿಶ್ರಾಂತಿ ಪಡೆಯಲು ಕೊಠಡಿ ಇಲ್ಲ. ಮಳೆ, ಬಿಸಿಲು, ಧೂಳಿನ ನಡುವೆ ಲಾರಿ ಮಾಲೀಕರು, ಚಾಲಕರು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ಹಲವು ಬಾರಿ ವಾಹನಗಳ ಬಿಡಿ ಭಾಗಗಳ ಕಳ್ಳತನವಾಗಿದೆ. ಶಾಶ್ವತ ನೆಲೆ ಒದಗಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗದೆ ಲಾರಿ ಮಾಲೀಕರು ಮತ್ತು ಚಾಲಕರು ದಾರಿ ಕಾಣದಂತಾಗಿದೆ.

Intro:ಹಾಸನ: ಇತಿಹಾಸ ಹೊಂದಿರುವ ಲಾರಿ ನಿಲುಗಡೆ ಪ್ರದೇಶಕ್ಕೆ ನಗರದಲ್ಲಿ ಸ್ವಂತ ನೆಲೆ ಸಿಗುವ ಲಕ್ಷಣಗಳೇ ಕಾಣದಂತಾಗಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಲಾರಿ ಮಾಲೀಕರು ಮತ್ತು ಚಾಲಕರದ್ದು ರೋದನ ಮುಗಿಲುಮುಟ್ಟುತ್ತಿದೆ.
 
ರಾಜಘಟ್ಟ ರಸ್ತೆಯಲ್ಲಿರುವ ರೈಲು ನಿಲ್ದಾಣ ಸಮೀಪ ರೈಲ್ವೆ ಇಲಾಖೆಗೆ ಸೇರಿದ ಹತ್ತು  ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ಟ್ರಕ್‌ ಟರ್ಮಿನಲ್‌ಗೆ ಜಾಗ ನೀಡಲಾಗಿದೆ.  ಪ್ರತಿ ದಿನ ನೂರಾರು ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಮೂಲ ಸೌಲಭ್ಯ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ.

ತಮಿಳುನಾಡು, ಆಂದ್ರಪ್ರದೇಶ, ರಾಜಸ್ತಾನ, ಗುಜರಾತ್‌ನಿಂದ ಗೂಡ್ಸ್‌ ರೈಲಿನಲ್ಲಿ ಬರುವ ಅಕ್ಕಿ, ರಾಸಾಯನಿಕ ಗೊಬ್ಬರ, ಸಿಮೆಂಟ್‌, ಜೋಳ ಇತರೆ ವಸ್ತುಗಳನ್ನು ವರ್ತಕರು ಹಾಗೂ ಅಂಗಡಿಗಳಿಗೆ  ಲಾರಿಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದಲೇ  ಮಣ್ಣು ಸುರಿಸಿ ಸಮತಟ್ಟು ಮಾಡಿಸಲಾಗಿದೆ. ಇಷ್ಟಾದರೂ ಮಳೆ ಬಂದರೆ ಲಾರಿಗಳನ್ನು ಹೊರಗೆ ತೆಗೆಯಲು ಸಹಾಸ ಪಡಬೇಕು.

ಪ್ರಸ್ತುತ ಈ ಟರ್ಮಿನಲ್‌ನಲ್ಲಿ  500 ಲಾರಿಗಳ ನಿಲುಗಡೆಗೆ ಸ್ಥಳಾವಕಾಶ ಇದೆ. ಶಾಶ್ವತ ನೆಲೆ ಸಿಗದೆ ಕಾರಣ ಲಾರಿ ಮಾಲೀಕರು, ಚಾಲಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ.  ಮಳೆ ಬಂದರಂತೂ ಕೆಸರು ಗದ್ದೆಯಾಗಿ ಕಾಲಿಡಲು ಆಗುವುದಿಲ್ಲ. ಲಾರಿಗಳ ಚಕ್ರಗಳು ಕೆಸರಿನಲ್ಲಿ ಹೂತು ಚಾಲಕರು ಪರದಾಡುವುದು ತಪ್ಪಲ್ಲ.  

ಕುಡಿಯಲು ನೀರು ಇಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ವಿಶ್ರಾಂತಿ ಪಡೆಯಲು ಕೊಠಡಿ ಇಲ್ಲ. ಮಳೆ, ಬಿಸಿಲು, ಧೂಳಿನ ನಡುವೆ ಲಾರಿ ಮಾಲೀಕರು, ಚಾಲಕರು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ಹಲವು ಬಾರಿ ವಾಹನಗಳ ಬಿಡಿ ಭಾಗಗಳ ಕಳ್ಳತನವಾಗಿದೆ. ಚಕ್ರಗಳು, ಬ್ಯಾಟರಿ ಹಾಗೂ ಇತರ ವಸ್ತುಗಳು ಕಳವಾಗುತ್ತಿರುವುದು ಮಾಲೀಕರನ್ನು ಚಿಂತೆಗೀಡು ಮಾಡಿದೆ.

ಶಾಶ್ವತ ನೆಲೆ ಒದಗಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡಿದ್ದಾರೆ ಹೊರತು ಬೇಡಿಕೆ ಮಾತ್ರ ಈಡೇರಿಲ್ಲ. ಮುಂದಾದರು ಈ ಲಾರಿ ನಿಲುಗಡೆ ಪ್ರದೇಶಕ್ಕೆ ನಗರದಲ್ಲಿ ಸ್ವಂತ ನೆಲೆ ಸಿಗುವಹದಾ ಎಂಬುದನ್ನು‌ ಕಾದುನೋಡಬೇಕಾಗಿದೆ.

ಬೈಟ್ 1 : ಗುರುನಾಥ್‌, ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ.

ಬೈಟ್ 2 : ಮಲ್ಲೇಶ್, ಲಾರಿ‌ ಮಾಲೀಕ ಕಂ‌. ಚಾಲಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.








Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.