ETV Bharat / state

ರಂಜಾನ್ ತಿಂಗಳ ಪ್ರಾರ್ಥನೆಗೆ ನಿರ್ಬಂಧ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ತಹಶೀಲ್ದಾರ್​​​​ ಎಚ್ಚರಿಕೆ

author img

By

Published : Apr 22, 2020, 4:38 PM IST

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಹಾಗೂ ಗುಂಪು ಗುಂಪಾಗಿ ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ.

Prayer for the month of Ramadan was Restriction:Strict action will taken if violated the rules
ರಂಜಾನ್ ತಿಂಗಳ ಪ್ರಾರ್ಥನೆಗೆ ನಿರ್ಬಂಧ: ಉಲ್ಲಂಘಿಸಿದರೆ ಕಠಿಣ ಕ್ರಮ-ತಹಶೀಲ್ದಾರ್​​​​ ಎಚ್ಚರಿಕೆ

ಹಾಸನ/ಅರಕಲಗೂಡು: ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕು‌ ಆಡಳಿತದ ವತಿಯಿಂದ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದೇ 24ರಿಂದ ರಂಜಾನ್ ಮಾಸ ಶುರುವಾಗಲಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತಿಲ್ಲ. ಇಫ್ತಿಯಾರ್ ಕೂಟ, ಮಸೀದಿಗಳ ಮುಂದೆ ಸಮೋಸಾ ಮಾರಾಟಕ್ಕೆ ಕಡಿವಾಣ ಹಾಕಬೇಕು. ಮನೆಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

ರಂಜಾನ್ ತಿಂಗಳ ಪ್ರಾರ್ಥನೆಗೆ ನಿರ್ಬಂಧ, ಉಲ್ಲಂಘಿಸಿದರೆ ಕಠಿಣ ಕ್ರಮ: ತಹಶೀಲ್ದಾರ್​​​​ ಎಚ್ಚರಿಕೆ

ಈಗಾಗಲೇ ತಾಲೂಕಿನ ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿದ್ದು, ಮಸೀದಿಗಳಲ್ಲಿ ಕೆಲವರು ಸರ್ಕಾರದ‌ ಆದೇಶ ಪಾಲಿಸದಿರುವುದು ಕಂಡುಬಂದಿದೆ. ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ಸಮುದಾಯದ ಜನರಿಗೆ ಮಾಹಿತಿ‌ ರವಾನಿಸಿ ಸಹಕರಿಸಬೇಕು ಎಂದರು.

ಸಿಪಿಐ ದೀಪಕ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ವೃದ್ಧರು, ಮಕ್ಕಳು ರಂಜಾನ್ ಮಾಸದಲ್ಲಿ ಉಪವಾಸ ಇರುವುದು ಸೂಕ್ತವಲ್ಲವೆಂದು ಹೇಳಿದೆ. ಸಮುದಾಯದ ಬಾಂಧವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ತಾಲೂಕು ಆಡಳಿತವು ಆರೋಗ್ಯ ಇಲಾಖೆ‌ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶ್ರಮಿಸುತ್ತಿದೆ. ಚೆಕ್​ ಪೋಸ್ಟ್​​ಗಳಲ್ಲಿ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ.

ನಿನ್ನೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಭೇಟಿ ನೀಡಿ ಪರಿಶೀಲಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿಲ್ಲ. ಇದು ಸಂತಸದ‌ ಸಂಗತಿ ಎಂದರು.

ಹಾಸನ/ಅರಕಲಗೂಡು: ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕು‌ ಆಡಳಿತದ ವತಿಯಿಂದ ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದೇ 24ರಿಂದ ರಂಜಾನ್ ಮಾಸ ಶುರುವಾಗಲಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತಿಲ್ಲ. ಇಫ್ತಿಯಾರ್ ಕೂಟ, ಮಸೀದಿಗಳ ಮುಂದೆ ಸಮೋಸಾ ಮಾರಾಟಕ್ಕೆ ಕಡಿವಾಣ ಹಾಕಬೇಕು. ಮನೆಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

ರಂಜಾನ್ ತಿಂಗಳ ಪ್ರಾರ್ಥನೆಗೆ ನಿರ್ಬಂಧ, ಉಲ್ಲಂಘಿಸಿದರೆ ಕಠಿಣ ಕ್ರಮ: ತಹಶೀಲ್ದಾರ್​​​​ ಎಚ್ಚರಿಕೆ

ಈಗಾಗಲೇ ತಾಲೂಕಿನ ಹೋಬಳಿ ಕೇಂದ್ರಗಳು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿದ್ದು, ಮಸೀದಿಗಳಲ್ಲಿ ಕೆಲವರು ಸರ್ಕಾರದ‌ ಆದೇಶ ಪಾಲಿಸದಿರುವುದು ಕಂಡುಬಂದಿದೆ. ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ಸಮುದಾಯದ ಜನರಿಗೆ ಮಾಹಿತಿ‌ ರವಾನಿಸಿ ಸಹಕರಿಸಬೇಕು ಎಂದರು.

ಸಿಪಿಐ ದೀಪಕ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು, ವೃದ್ಧರು, ಮಕ್ಕಳು ರಂಜಾನ್ ಮಾಸದಲ್ಲಿ ಉಪವಾಸ ಇರುವುದು ಸೂಕ್ತವಲ್ಲವೆಂದು ಹೇಳಿದೆ. ಸಮುದಾಯದ ಬಾಂಧವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ತಾಲೂಕು ಆಡಳಿತವು ಆರೋಗ್ಯ ಇಲಾಖೆ‌ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶ್ರಮಿಸುತ್ತಿದೆ. ಚೆಕ್​ ಪೋಸ್ಟ್​​ಗಳಲ್ಲಿ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ.

ನಿನ್ನೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಭೇಟಿ ನೀಡಿ ಪರಿಶೀಲಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರ ಸಹಕಾರದಿಂದ ತಾಲೂಕಿನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿಲ್ಲ. ಇದು ಸಂತಸದ‌ ಸಂಗತಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.