ಹಾಸನ: ನಗರದ ಬಿಎಂ. ರಸ್ತೆಯಲ್ಲಿ ಲಾಕ್ ಡೌನ್ ಹಿನ್ನೆಲೆ ಹಸಿವಿನಿಂದ ಬಳಲಿದ್ದ ಕರುವೊಂದು ದಿಕ್ಕಾಪಾಲಾಗಿ ಓಡುತ್ತಿದ್ದ ಕರುವಿನ ರೋಧನೆ ಕಂಡು ಪೊಲೀಸರು ಆಹಾರ ಒದಗಿಸಿದರು.
ತನ್ನ ತಾಯಿಯಿಂದ ತಪ್ಪಿಸಿಕೊಂಡು ನಗರದ ಶಂಕರಮಠದ ರಸ್ತೆಯಲ್ಲಿ ಅಡ್ಡಾಡುತ್ತಿತ್ತು. ಅಂಬಾ. . . ಅಂಬಾ ಎಂದು ಅರಚಿಕೊಂಡು ಬಿಎಂ ರಸ್ತೆಗೆ ಬಂದಾಗ ತುರ್ತುವಾಹನದ ಶಬ್ದಕ್ಕೆ ಕಂಗಾಲಾಗಿ ರಸ್ತೆಯಲ್ಲಿಯೇ ಕೆಲವೊತ್ತು ದಿಕ್ಕು ಕಾಣದೆ ನಿಂತುಬಿಟ್ಟಿತು. ನಂತರ ಇದರ ರೋಧನೆಗೆ ಮರುಗಿದ ಪೊಲೀಸರು ಗ್ರೀನ್ ಪೌಂಡೇಷನ್ ಸಂಸ್ಥೆಗೆ ಕರೆ ಮಾಡಿ ಹಸಿದ ಕರುವಿಗೆ ಆಹಾರ ಒದಗಿಸಿದರು.
ಒಟ್ಟಾರೆ ದಿನದಿಂದ ದಿನಕ್ಕೆ ಹೆಮ್ಮಾರಿ ಕೊರೊನದಿಂದ ಜನಜೀವನ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಮಾನವನಿಗಷ್ಟೇ ಅಲ್ಲದೇ ಪ್ರಾಣಿ ಮತ್ತು ಜಾನುವಾರು ಸಂಕುಲಕ್ಕೂ ಹಸಿವಿನ ಸಂಕಷ್ಟ ತಂದೊಡ್ಡಿದೆ.