ETV Bharat / state

ನೀರಿನ ಹಾಹಾಕಾರ ನೀಗಿಸುವಂತೆ ಅಧಿಕಾರಿಗಳಿಗೆ ಕರವೇ ಮುಖಂಡನ ಮನವಿ - causing trouble in the village

ಮುಂಡಗೋಡು ಗ್ರಾಮದಲ್ಲಿ‌ ನೀರಿಗಾಗಿ ಜನರು ಪರದಾಡುವಂತಾಗಿದ್ದು, ಈ ಸಮಸ್ಯೆ ಪರಿಹರಿಸಬೇಕೆಂದು ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡನೊಬ್ಬ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ.

ಕರವೇ ಮುಖಂಡ
ಕರವೇ ಮುಖಂಡ
author img

By

Published : May 26, 2020, 4:29 PM IST

ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದಲ್ಲಿ‌ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿನ ಹಾಹಾಕಾರವನ್ನು ನೀಗಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡನೊಬ್ಬ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಸೋಮು

ಗ್ರಾಮದಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಹರಿಸಲಾಗುತ್ತಿದೆ. ಒಮ್ಮೆ ನೀರು ಹರಿಸಿದರೆ ಕೊಡಗಳನ್ನು‌ ಪಾಳಿಯಲ್ಲಿಟ್ಟು ಗಂಟೆಗಟ್ಟಲೇ ಕಾಯಬೇಕು. ಕೆಲವರಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿಯೂ ಇದೆ. ನೀರಿನ ದಾಹ ತಾಳಲಾರದೆ ಊರಿನ ಹೊರಗೆ ಇರುವ ಮೋಟಾರ್​ನಲ್ಲಿ ಹೊತ್ತು ತರುವ‌ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡ‌ ಸೋಮು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದಲ್ಲಿ‌ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿನ ಹಾಹಾಕಾರವನ್ನು ನೀಗಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡನೊಬ್ಬ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಸೋಮು

ಗ್ರಾಮದಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಹರಿಸಲಾಗುತ್ತಿದೆ. ಒಮ್ಮೆ ನೀರು ಹರಿಸಿದರೆ ಕೊಡಗಳನ್ನು‌ ಪಾಳಿಯಲ್ಲಿಟ್ಟು ಗಂಟೆಗಟ್ಟಲೇ ಕಾಯಬೇಕು. ಕೆಲವರಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿಯೂ ಇದೆ. ನೀರಿನ ದಾಹ ತಾಳಲಾರದೆ ಊರಿನ ಹೊರಗೆ ಇರುವ ಮೋಟಾರ್​ನಲ್ಲಿ ಹೊತ್ತು ತರುವ‌ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡ‌ ಸೋಮು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.