ETV Bharat / state

ಅಮೇಠಿಯಲ್ಲಿ ಸ್ಮೃತಿ ಪ್ರಾಬಲ್ಯ ಹೆಚ್ಚಿದ್ದಕ್ಕೆ ರಾಹುಲ್​ ಕೇರಳಕ್ಕೆ ಹೋದರು: ಎಸ್​.ಎಂ. ಕೃಷ್ಣ

author img

By

Published : Apr 5, 2019, 12:47 PM IST

ಕಾಂಗ್ರೆಸ್​ನಿಂದ ಬಿಜೆಪಿ ಸೇರಿರುವ ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರು, ರಾಹುಲ್​ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಿರುವುದು ಸೋಲಿನ ಭಯದಿಂದ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಹಾಸನದಲ್ಲಿ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸುದ್ದಿಗೋಷ್ಠಿ

ಹಾಸನ: ಅಮೇಠಿಯಲ್ಲಿ ಸ್ಮೃತಿ ಇರಾನಿ ಪ್ರಾಬಲ್ಯ ಹೆಚ್ಚಿರುವುದರಿಂದ ರಾಹುಲ್​ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು‌.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ, ರಾಹುಲ್ ವಿರುದ್ಧ 1ಲಕ್ಷ ಮತಗಳ ಅಂತರದಿಂದ ಸೋತಿದ್ದರೂ, ಅಮೇಠಿಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಪ್ರಾಬಲ್ಯ ಹೆಚ್ಚಿದ್ದು, ರಾಹುಲ್​ ಈ ಕಾರಣಕ್ಕಾಗಿ ಕೇರಳದ ಕಡೆ ಮುಖ ಮಾಡಿರಬಹುದು ಎಂದು ಹೇಳಿದರು.

ಹಾಸನದಲ್ಲಿ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸುದ್ದಿಗೋಷ್ಠಿ

ಪ್ರಜಾಪ್ರತಿನಿಧಿ ಕಾಯ್ದೆಯಂತೆ ಯಾರು ಎಲ್ಲಿಂದ ಬೇಕಾದರೂ, ಎರಡು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವ ಅವಕಾಶವಿದೆ ಎಂದೂ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ಕೊಡುವರು. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲೂ ಪಕ್ಷದ ಒಬ್ಬ ಅಭ್ಯರ್ಥಿ ಇಲ್ಲ.‌ ಪ್ರಚಾರಕ್ಕೆ ಹೋಗಬೇಕೊ, ಬೇಡವೋ ಎಂಬುದನ್ನ ಆ ಪಕ್ಷ ತೀರ್ಮಾನಿಸುತ್ತೆ ಎಂದು ಕುಟುಕಿದರು.

ಮೋದಿ ದೇಶದ್ರೋಹಿ ಎಂಬ ಹೇಳಿಕೆಯನ್ನ ನಾನು ಒಪ್ಪಲ್ಲ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿಯವರ ವಿಚಾರ ಪ್ರಸ್ತಾಪಿಸುವುದು ಇಲ್ಲಿ ಅನುಚಿತ. ಇದನ್ನೂ ಸಹ ನಾನು ಒಪ್ಪುವುದಿಲ್ಲ ಎಂದು ನುಡಿದರು. ಮೋದಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಂಶಯವಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಸೇರಿ ಕಾಂಗ್ರೆಸ್​ಗೆ ಎರಡು ಸ್ಥಾನ ಮಾತ್ರ ಕೊಟ್ಟಿವೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಘಟಬಂಧನ್ ಇದೆ. ಮೋದಿ ಎಲ್ಲಿ, ಈ ಮಹಾ ಘಟಬಂಧನ್ ಎಲ್ಲಿ? ಮೋದಿ ವ್ಯಕ್ತಿತ್ವ ಹಿರಿದಾದುದು ಎಂದರು.

ಆದಾಯ ತೆರಿಗೆ ಇಲಾಖೆ ಕಾನೂನು ಚೌಕಟ್ಟಿನಲ್ಲೆ ಕೆಲಸ ಮಾಡುತ್ತಿದೆ. ರಾಜಕೀಯ ಹಿನ್ನೆಲೆ ದಾಳಿ ನಡೆಸಲಾಗ್ತಿದೆ ಎಂಬ ಆರೋಪಕ್ಕೆ ಹುರುಳಿಲ್ಲ ಎಂದರು. ಕಾಂಗ್ರೆಸ್ ಮಾಜಿ ಸಚಿವ ಆತ್ಮಾನಂದ ಮನೆ ಮೇಲೆ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಷ್ಟೇ ನೋಡಿ ತಿಳಿದಿದ್ದೇನೆ ಎಂದರು.

ಹಾಸನ: ಅಮೇಠಿಯಲ್ಲಿ ಸ್ಮೃತಿ ಇರಾನಿ ಪ್ರಾಬಲ್ಯ ಹೆಚ್ಚಿರುವುದರಿಂದ ರಾಹುಲ್​ ಗಾಂಧಿ ಕೇರಳದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು‌.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ, ರಾಹುಲ್ ವಿರುದ್ಧ 1ಲಕ್ಷ ಮತಗಳ ಅಂತರದಿಂದ ಸೋತಿದ್ದರೂ, ಅಮೇಠಿಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಪ್ರಾಬಲ್ಯ ಹೆಚ್ಚಿದ್ದು, ರಾಹುಲ್​ ಈ ಕಾರಣಕ್ಕಾಗಿ ಕೇರಳದ ಕಡೆ ಮುಖ ಮಾಡಿರಬಹುದು ಎಂದು ಹೇಳಿದರು.

ಹಾಸನದಲ್ಲಿ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸುದ್ದಿಗೋಷ್ಠಿ

ಪ್ರಜಾಪ್ರತಿನಿಧಿ ಕಾಯ್ದೆಯಂತೆ ಯಾರು ಎಲ್ಲಿಂದ ಬೇಕಾದರೂ, ಎರಡು ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವ ಅವಕಾಶವಿದೆ ಎಂದೂ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ಕೊಡುವರು. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲೂ ಪಕ್ಷದ ಒಬ್ಬ ಅಭ್ಯರ್ಥಿ ಇಲ್ಲ.‌ ಪ್ರಚಾರಕ್ಕೆ ಹೋಗಬೇಕೊ, ಬೇಡವೋ ಎಂಬುದನ್ನ ಆ ಪಕ್ಷ ತೀರ್ಮಾನಿಸುತ್ತೆ ಎಂದು ಕುಟುಕಿದರು.

ಮೋದಿ ದೇಶದ್ರೋಹಿ ಎಂಬ ಹೇಳಿಕೆಯನ್ನ ನಾನು ಒಪ್ಪಲ್ಲ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿಯವರ ವಿಚಾರ ಪ್ರಸ್ತಾಪಿಸುವುದು ಇಲ್ಲಿ ಅನುಚಿತ. ಇದನ್ನೂ ಸಹ ನಾನು ಒಪ್ಪುವುದಿಲ್ಲ ಎಂದು ನುಡಿದರು. ಮೋದಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಂಶಯವಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಸೇರಿ ಕಾಂಗ್ರೆಸ್​ಗೆ ಎರಡು ಸ್ಥಾನ ಮಾತ್ರ ಕೊಟ್ಟಿವೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಘಟಬಂಧನ್ ಇದೆ. ಮೋದಿ ಎಲ್ಲಿ, ಈ ಮಹಾ ಘಟಬಂಧನ್ ಎಲ್ಲಿ? ಮೋದಿ ವ್ಯಕ್ತಿತ್ವ ಹಿರಿದಾದುದು ಎಂದರು.

ಆದಾಯ ತೆರಿಗೆ ಇಲಾಖೆ ಕಾನೂನು ಚೌಕಟ್ಟಿನಲ್ಲೆ ಕೆಲಸ ಮಾಡುತ್ತಿದೆ. ರಾಜಕೀಯ ಹಿನ್ನೆಲೆ ದಾಳಿ ನಡೆಸಲಾಗ್ತಿದೆ ಎಂಬ ಆರೋಪಕ್ಕೆ ಹುರುಳಿಲ್ಲ ಎಂದರು. ಕಾಂಗ್ರೆಸ್ ಮಾಜಿ ಸಚಿವ ಆತ್ಮಾನಂದ ಮನೆ ಮೇಲೆ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಷ್ಟೇ ನೋಡಿ ತಿಳಿದಿದ್ದೇನೆ ಎಂದರು.

Intro:ಐಟಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡ್ತಿದೆ: ಎಸ್.ಎಂ.ಕೃಷ್ಣ

ಹಾಸನ: ಆದಾಯ ತೆರಿಗೆ ಇಲಾಖೆ ಅವರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದು ರಾಜಕೀಯ ಹಿನ್ನಲೆಯಲ್ಲಿ ನಡೆದಿರೊ ದಾಳಿ ಎನ್ನುವ ಬಗ್ಗೆ ಹುರುಳಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು‌.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಐಟಿ ಅವರು ಕಾನೂನು ಚೌಕಟ್ಟಿನಲ್ಲಿ ಅವರ
ಕೆಲಸ ಮಾಡ್ತಿದ್ದಾರೆ.ಕಾಂಗ್ರೆಸ್ ಮಾಜಿ ಸಚಿವ  ಕಾಂಗ್ರೆಸ್ ಆತ್ಮಾನಂದ ಮೇಲಿನ ಐಟಿ ದಾಳಿಗೆ ಮಾಹಿತಿ ಹೆಚ್ಚಿಗೆ ಇಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು.

ಮೋದಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುವ  ಬಗ್ಗೆ ಸಂಶಯವಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಸಿ ಮತ್ತು ಬಿಎಸ್ಪಿ ಕಾಂಗ್ರೆಸ್ ಗೆ ಎರಡು ಸ್ಥಾನ ಕೊಟ್ಟಿದ್ದರು.ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಘಟಬಂಧನ್ ಇದೆ. ಮೋದಿ ಎಲ್ಲಿ ಈ ಮಹಾ ಘಟಬಂಧನ್ ಎಲ್ಲಿ. ಮೋದಿ ವ್ಯಕ್ತಿತ್ವವೇನು ಎಂದು ಲೇವಡಿ ಮಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ಕೊಡುವರು.ಮಂಡ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗಲು ಪಕ್ಷದ ಅಭ್ಯರ್ಥಿ ಇಲ್ಲ.‌ ಪ್ರಚಾರಕ್ಕೆ ಹೋಗಬೇಕೊ, ಇಲ್ಲವೋ ಅನ್ನೊದನ್ನ ಪಕ್ಷ ತೀರ್ಮಾನಿಸುತ್ತೆ.
ಮೋದಿ ದೇಶದ್ರೋಹಿ ಎಂಬ ಹೇಳಿಕೆಯನ್ನ ನಾನು ಒಪ್ಪಲ್ಲ.ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.
ಅಡ್ವಾನಿಯವರದು ಅನುಚಿತ.ಇದನ್ನ ನಾನು ಒಪ್ಪುವುದಿಲ್ಲ ಎಂದು ಸಮರ್ಥಿಸಿಕೊಂಡರು.

ದೇಶದ ಸಂವಿಧಾನದಲ್ಲಿ 25 ವರ್ಷದ ಪೂರ್ಣಗೊಂಡ ಯಾವುದೇ ವ್ಯಕ್ತಿ ಎಲ್ಲಿ ಬೇಕಾದ್ರು ಚುನಾವಣೆಗೆ ಸ್ಪರ್ಧಿಸಬಹುದು.ಕಾಂಗ್ರೆಸ್ ರಾಷ್ತ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಮೇತಿಯಲ್ಲಿ 1ಲಕ್ಷ ಮತಗಳ ಅಂತರದಿಂದ ಸ್ಮೃತಿ ಇರಾನಿ ವಿರುದ್ಧ ಗೆದ್ದಿದ್ದರು. ಇದೀಗ ಸ್ಮೃತಿ ಅವರು ಅಮೇತಿಯನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಹುಲ್ ಸೋಲುವ ಭೀತಿಯಿಂದ ಎರಡು ಕಡೆಯಲ್ಲೂ ಸ್ಪರ್ಧಿಸುತ್ತಿರಬಹುದು ಎಂದು ತಿಳಿಯಬಹುದು ಎಂದರು.

-ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ‌.




Body:0


Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.