ETV Bharat / state

ಹಾಸನ: ಸೀಲ್​​ ಡೌನ್​ ಪ್ರದೇಶಗಳಿಗೆ ಡಿಸಿ-ಎಸ್ಪಿ ಭೇಟಿ, ಪರಿಶೀಲನೆ

author img

By

Published : May 27, 2020, 11:15 AM IST

ಹಾಸನ ಜಿಲ್ಲೆಯಲ್ಲಿ 5 ಕಡೆ ಸೀಲ್ ​​ಡೌನ್ ಮತ್ತು ಹೊಳೆನರಸೀಪುರದಲ್ಲಿ 1 ಕಡೆ ಸೀಲ್​ ​ಡೌನ್ ಮಾಡಲಾಗಿದ್ದು, ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

hassan
ಹಾಸನ

ಹಾಸನ: ಕೊರೊನಾ ಎಂಬ ಮಹಾಮಾರಿ ಕಳೆದ ಎರಡು ವಾರಗಳಿಂದ ನಗರಕ್ಕೂ ಆವರಿಸಿದ್ದು, ಜಿಲ್ಲೆಯಲ್ಲಿ 5 ಕಡೆ ಸೀಲ್​ ​ಡೌನ್ ಮತ್ತು ಹೊಳೆನರಸೀಪುರದಲ್ಲಿ 1 ಕಡೆ ಸೀಲ್​ ​ಡೌನ್ ಮಾಡಲಾಗಿದೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೀಲ್​​ ಡೌನ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ

ಮಂಗಳವಾರ ಮಧ್ಯಾಹ್ನದ ವೇಳೆಗೆ ಬರೋಬ್ಬರಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಭಾನುವಾರವಷ್ಟೇ ನಗರದ ಉತ್ತರ ಬಡಾವಣೆ ಮತ್ತು ಬಿ. ಕಾಟೀಹಳ್ಳಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರವನ್ನು ಸೀಲ್​ ಡೌನ್​​ ಮಾಡಲಾಗಿತ್ತು. ನಗರದ ವಿಶ್ವೇಶ್ವರ ಬಡಾವಣೆ, ಇಂದಿರಾ ನಗರದ ಮತ್ತೊಂದು ಕಡೆ, ಗಾಡೆನಹಳ್ಳಿಯ ಪೊಲೀಸ್ ಕೆ.ಎಸ್.ಆರ್.ಪಿ. ಭಾಗದ ಒಂದು ಕಡೆ ಹಾಗೂ ಹೊಳೆನರಸೀಪುರ ಭಾಗದ ಒಂದು ಕಡೆ ಸೇರಿ ಒಟ್ಟು 5 ಕಡೆ ಸಂಪೂರ್ಣ ಸೀಲ್​​ ಡೌನ್ ಮಾಡಲಾಗಿದೆ.

ಮಂಗಳವಾರ ಮತ್ತೆ ಮುಂಬೈನಿಂದ ಚನ್ನರಾಯಪಟ್ಟಣ್ಣಕ್ಕೆ ಬಂದಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರೆಲ್ಲಾ ಮುಂಬೈನಿಂದ ನೇರವಾಗಿ ಕ್ವಾರಂಟೈನ್ ಸೆಂಟರ್​​ಗೆ ತೆರಳಿದ್ದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ.​ ಇದಲ್ಲದೇ ಸಂಜೆ ವೇಳೆಗೆ ಇನ್ನೂ ಹತ್ತು ಜನರಿಗೆ ಸೋಂಕು ಇರಬಹುದು ಎಂಬ ಅನುಮಾನವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಒಂದೇ ದಿನ ಏಳು ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರಲ್ಲಿ ಪಿಎಸ್​ಐ ಕೂಡ ಸೇರಿದ್ದು, ಬೆಳಗಾವಿಯ ನಿಪ್ಪಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ ನಾಲ್ಕು ಜನ ಪೊಲೀಸರು ಮತ್ತು ಕೆ.ಎಸ್.ಆರ್.ಪಿ. ಕಾನ್ಸ್​​ಟೇಬಲ್​ ಸಂಪರ್ಕದಲ್ಲಿದ್ದ ಮೂರು ಜನ ಪೊಲೀಸರಿಗೆ ಸೋಂಕು ತಗುಲಿದೆ.

28 ದಿನ ಯಾರೂ ಮನೆಯಿಂದ ಹೊರ ಬರುವ ಹಾಗಿಲ್ಲ. ಏನೇ ಬೇಕಾದರೂ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಹಾರ ಪದಾರ್ಥ ತರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹಾಸನ: ಕೊರೊನಾ ಎಂಬ ಮಹಾಮಾರಿ ಕಳೆದ ಎರಡು ವಾರಗಳಿಂದ ನಗರಕ್ಕೂ ಆವರಿಸಿದ್ದು, ಜಿಲ್ಲೆಯಲ್ಲಿ 5 ಕಡೆ ಸೀಲ್​ ​ಡೌನ್ ಮತ್ತು ಹೊಳೆನರಸೀಪುರದಲ್ಲಿ 1 ಕಡೆ ಸೀಲ್​ ​ಡೌನ್ ಮಾಡಲಾಗಿದೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸೀಲ್​​ ಡೌನ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ

ಮಂಗಳವಾರ ಮಧ್ಯಾಹ್ನದ ವೇಳೆಗೆ ಬರೋಬ್ಬರಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಭಾನುವಾರವಷ್ಟೇ ನಗರದ ಉತ್ತರ ಬಡಾವಣೆ ಮತ್ತು ಬಿ. ಕಾಟೀಹಳ್ಳಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರವನ್ನು ಸೀಲ್​ ಡೌನ್​​ ಮಾಡಲಾಗಿತ್ತು. ನಗರದ ವಿಶ್ವೇಶ್ವರ ಬಡಾವಣೆ, ಇಂದಿರಾ ನಗರದ ಮತ್ತೊಂದು ಕಡೆ, ಗಾಡೆನಹಳ್ಳಿಯ ಪೊಲೀಸ್ ಕೆ.ಎಸ್.ಆರ್.ಪಿ. ಭಾಗದ ಒಂದು ಕಡೆ ಹಾಗೂ ಹೊಳೆನರಸೀಪುರ ಭಾಗದ ಒಂದು ಕಡೆ ಸೇರಿ ಒಟ್ಟು 5 ಕಡೆ ಸಂಪೂರ್ಣ ಸೀಲ್​​ ಡೌನ್ ಮಾಡಲಾಗಿದೆ.

ಮಂಗಳವಾರ ಮತ್ತೆ ಮುಂಬೈನಿಂದ ಚನ್ನರಾಯಪಟ್ಟಣ್ಣಕ್ಕೆ ಬಂದಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರೆಲ್ಲಾ ಮುಂಬೈನಿಂದ ನೇರವಾಗಿ ಕ್ವಾರಂಟೈನ್ ಸೆಂಟರ್​​ಗೆ ತೆರಳಿದ್ದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ.​ ಇದಲ್ಲದೇ ಸಂಜೆ ವೇಳೆಗೆ ಇನ್ನೂ ಹತ್ತು ಜನರಿಗೆ ಸೋಂಕು ಇರಬಹುದು ಎಂಬ ಅನುಮಾನವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಒಂದೇ ದಿನ ಏಳು ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರಲ್ಲಿ ಪಿಎಸ್​ಐ ಕೂಡ ಸೇರಿದ್ದು, ಬೆಳಗಾವಿಯ ನಿಪ್ಪಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ ನಾಲ್ಕು ಜನ ಪೊಲೀಸರು ಮತ್ತು ಕೆ.ಎಸ್.ಆರ್.ಪಿ. ಕಾನ್ಸ್​​ಟೇಬಲ್​ ಸಂಪರ್ಕದಲ್ಲಿದ್ದ ಮೂರು ಜನ ಪೊಲೀಸರಿಗೆ ಸೋಂಕು ತಗುಲಿದೆ.

28 ದಿನ ಯಾರೂ ಮನೆಯಿಂದ ಹೊರ ಬರುವ ಹಾಗಿಲ್ಲ. ಏನೇ ಬೇಕಾದರೂ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಹಾರ ಪದಾರ್ಥ ತರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.