ETV Bharat / state

ಕೌಟುಂಬಿಕ ಕಲಹದಿಂದ ಮಗನ ಕೊಲೆಗೆ ಸುಪಾರಿ; ತಂದೆ ಸೇರಿ ಆರು ಆರೋಪಿಗಳ ಬಂಧನ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನ ಕೊಲೆಗೆ ಸುಪಾರಿ ಕೊಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ತಂದೆ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Sep 16, 2020, 8:55 PM IST

Channarayapattana murder case; Arrest of six accused along with father
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ

ಹಾಸನ : ಆಸ್ತಿ ವಿಚಾರ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುಪಾರಿ ಕೊಟ್ಟು ತನ್ನ ಮಗನನ್ನೇ ಕೊಲೆ ಮಾಡಿಸಿದ ತಂದೆಯನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಆಗಸ್ಟ್‌ 27 ರಂದು ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ರಾತ್ರಿ ಶೂಟೌಟ್ ನಡೆದಿತ್ತು. ​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಕೌಟುಂಬಿಕ ಕಲಹದಿಂದ ಮಗನ ಕೊಲೆಗೆ ಸುಪಾರಿ; ತಂದೆ ಸೇರಿ ಆರು ಆರೋಪಿಗಳ ಬಂಧನ

ತಂದೆ ಹೇಮಂತ್ (45), ಕಾಂತರಾಜು (52), ಸುನೀಲ್( 27), ಪ್ರಶಾಂತ್ (23 ), ನಂದೀಶ್(24) ಮತ್ತು ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದ್ದು, ಇವರಿಂದ 1.88 ಲಕ್ಷ ರೂ. ನಗದು, 6 ಬಂದೂಕು, ಒಂದು ಮಾರುತಿ ಓಮಿನಿ, ಮೂರು ಬೈಕ್, ಐದು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮಗನ ಕೊಲೆಗೆ ಸುಪಾರಿ ಕೊಟ್ಟ ತಂದೆ:

ಹೇಮಂತ್ ಮತ್ತು ಪುನೀತ್ ತಂದೆ-ಮಗನಾದರೂ ಇಬ್ಬರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯವಿತ್ತು. ಕೆಲ ವರ್ಷಗಳಿಂದ ಇಬ್ಬರೂ ಬೇರೆ ಬೇರೆ ವಾಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ತಂದೆ ಹೇಮಂತ್ ಅವರ ತೋಟದಲ್ಲಿ ಮಗ ಪುನೀತ್ ತೆಂಗಿನಕಾಯಿ ಕೆಡವಿದ್ದನಂತೆ. ಇದರಿಂದ ಹೇಮಂತ್ ಮಗನಿಗೆ ವಾರ್ನಿಂಗ್​ ನೀಡಿದ್ದ ಎಂದು ಪುತ್ರನ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮಗ ಪುನೀತ್‌ ಕೊಲೆಗೆ ತಂದೆ ಹೇಮಂತ್ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆ ತಂದೆ ಹೇಮಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನಗ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ, ಸಿಪಿಐ ಬಿ.ಜಿ. ಕುಮಾರ್, ಸಬ್​ಇನ್ಸ್​ಪೆಕ್ಟರ್​ ವಿನೋದ ರಾಜ್, ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಇತರರನ್ನು ಎಸ್ಪಿ ಶ್ರೀನಿವಾಸ್ ಗೌಡ ಅಭಿನಂದಿಸಿದ್ದಾರೆ.

ಹಾಸನ : ಆಸ್ತಿ ವಿಚಾರ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುಪಾರಿ ಕೊಟ್ಟು ತನ್ನ ಮಗನನ್ನೇ ಕೊಲೆ ಮಾಡಿಸಿದ ತಂದೆಯನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಆಗಸ್ಟ್‌ 27 ರಂದು ತಾಲೂಕಿನ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ರಾತ್ರಿ ಶೂಟೌಟ್ ನಡೆದಿತ್ತು. ​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಕೌಟುಂಬಿಕ ಕಲಹದಿಂದ ಮಗನ ಕೊಲೆಗೆ ಸುಪಾರಿ; ತಂದೆ ಸೇರಿ ಆರು ಆರೋಪಿಗಳ ಬಂಧನ

ತಂದೆ ಹೇಮಂತ್ (45), ಕಾಂತರಾಜು (52), ಸುನೀಲ್( 27), ಪ್ರಶಾಂತ್ (23 ), ನಂದೀಶ್(24) ಮತ್ತು ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದ್ದು, ಇವರಿಂದ 1.88 ಲಕ್ಷ ರೂ. ನಗದು, 6 ಬಂದೂಕು, ಒಂದು ಮಾರುತಿ ಓಮಿನಿ, ಮೂರು ಬೈಕ್, ಐದು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮಗನ ಕೊಲೆಗೆ ಸುಪಾರಿ ಕೊಟ್ಟ ತಂದೆ:

ಹೇಮಂತ್ ಮತ್ತು ಪುನೀತ್ ತಂದೆ-ಮಗನಾದರೂ ಇಬ್ಬರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ವೈಷಮ್ಯವಿತ್ತು. ಕೆಲ ವರ್ಷಗಳಿಂದ ಇಬ್ಬರೂ ಬೇರೆ ಬೇರೆ ವಾಸುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ತಂದೆ ಹೇಮಂತ್ ಅವರ ತೋಟದಲ್ಲಿ ಮಗ ಪುನೀತ್ ತೆಂಗಿನಕಾಯಿ ಕೆಡವಿದ್ದನಂತೆ. ಇದರಿಂದ ಹೇಮಂತ್ ಮಗನಿಗೆ ವಾರ್ನಿಂಗ್​ ನೀಡಿದ್ದ ಎಂದು ಪುತ್ರನ ಕೊಲೆಯ ನಂತರ ಆತನ ತಾಯಿ ಯಶೋಧಮ್ಮ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಮಗ ಪುನೀತ್‌ ಕೊಲೆಗೆ ತಂದೆ ಹೇಮಂತ್ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆ ತಂದೆ ಹೇಮಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನಗ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ, ಸಿಪಿಐ ಬಿ.ಜಿ. ಕುಮಾರ್, ಸಬ್​ಇನ್ಸ್​ಪೆಕ್ಟರ್​ ವಿನೋದ ರಾಜ್, ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಇತರರನ್ನು ಎಸ್ಪಿ ಶ್ರೀನಿವಾಸ್ ಗೌಡ ಅಭಿನಂದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.