ಗದಗ: ಕೆಲಸ ಅರಸಿ ದೂರದ ಗೋವಾಕ್ಕೆ ಹೋಗಿದ್ದ ಗದಗದ ಕಾರ್ಮಿಕರು ಲಾಕ್ಡೌನ್ನಿಂದಾಗಿ ಅಲ್ಲಿಯೇ ಉಳಿದಿದ್ದಾರೆ. ಅವರಿಗೆ 10 ದಿನಗಳಿಗಾಗುವಷ್ಟು ತರಕಾರಿ, ದಿನಸಿಯನ್ನು ವಾಹನದ ಮೂಲಕ ಸಚಿವ ಸಿ.ಸಿ.ಪಾಟೀಲ್ ಕಳುಹಿಸಿ ಕೊಟ್ಟಿದ್ದಾರೆ.
![minister c.c.patil sent groceries](https://etvbharatimages.akamaized.net/etvbharat/prod-images/kn-gdg-10-minister-help-7203292_08042020194302_0804f_1586355182_13.jpg)
ಕಾರ್ಮಿಕರು ಗೋವಾದ ಪಣಜಿ ಮತ್ತು ಮಡಗಾಂವ್ನಲ್ಲಿದ್ದಾರೆ. ಅವರೆಲ್ಲಾ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 800 ಕಾರ್ಮಿಕರಾಗಿದ್ದಾರೆ.
ದಿನಸಿ ಕಿಟ್ನಲ್ಲಿ ಏನಿದೆ: 5 ಕೆಜಿ ಅಕ್ಕಿ, ತಲಾ 1 ಕೆಜಿ ರವಾ, ತೊಗರಿ ಬೇಳೆ, ಹೆಸರುಕಾಳು, ಆಲೂಗಡ್ಡೆ, ಈರುಳ್ಳಿ, 1 ಲೀಟರ್ ಅಡುಗೆ ಎಣ್ಣೆ ಜೊತೆಗೆ ಸಕ್ಕರೆ, ಚಹಾ ಪುಡಿ, ಉಪ್ಪು, ಸಾಸಿವೆ, ಜೀರಿಗೆ, ಅರಿಷಿಣ, ಖಾರದ ಪುಡಿ, ಮಸಲಾ ಪುಡಿ ಮತ್ತು ಬೆಳ್ಳುಳ್ಳಿ ಹಾಗೂ ಸ್ನಾನ, ಬಟ್ಟೆ ಸಾಬೂನುಗಳನ್ನು ಕಳುಹಿಸಿದ್ದಾರೆ.