ETV Bharat / state

ಸತ್ತವರಿಗೆ ಸ್ಮಶಾನದಲ್ಲೂ ಇಲ್ಲ ನೆಮ್ಮದಿ: ರುದ್ರಭೂಮಿಯಲ್ಲೂ ನಡೀತಿದೆ ಅಕ್ರಮ ಮರಳುಗಾರಿಕೆ! - undefined

ಸತ್ತ ಮೇಲೆ ಮನುಷ್ಯನಿಗೆ ನೆಮ್ಮದಿ ಅಂದ್ರೆ ಅದು ಸ್ಮಶಾನದಲ್ಲಿ ಎಂಬ ಮಾತು ಜನಜನಿತ. ಆದ್ರೆ, ಅಕ್ರಮ ಮರಳು ದಂಧೆಕೋರರು ಸ್ಮಶಾನದ ನೆಮ್ಮದಿ ಕೆಡಿಸುತ್ತಿದ್ದಾರೆ.

ಸ್ಮಶಾನದಲ್ಲಿ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ
author img

By

Published : Jun 16, 2019, 3:48 PM IST

ಗದಗ: ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನು ಬಿಡುತ್ತಿಲ್ಲ. ಮನೆಗಳ ನಿರ್ಮಾಣಕ್ಕೆ ಅಸ್ತಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ! ಈ ಅಕ್ರಮ ಚಟುವಟಿಕೆ ಬಗ್ಗೆ ಮಾತನಾಡಲು ಗ್ರಾಮದ ಜನ್ರು ಕೂಡಾ ಭಯ ಪಡ್ತಿದ್ದಾರೆ.

ಸ್ಮಶಾನದಲ್ಲೂ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ!

ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಭೂಮಿ ಅಗೆದು ಅಸ್ತಿಪಂಜರಗಳನ್ನು ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ. ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಜೊತೆ ಬರುವ ಮರಳನ್ನು ಅಕ್ರಮವಾಗಿ ದೋಚುತ್ತಾ, ಸ್ಮಶಾನ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿದ್ದಾರೆ.

ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಘಟನೆಯಲ್ಲಿ ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದ್ರೂ ಕೂಡ ಈ ದಂಧೆಗೆ ಬ್ರೇಕ್​ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಲು ಗ್ರಾಮಸ್ಥರು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಸತ್ತ ಮೇಲೆ ಮನುಷ್ಯನಿಗೆ ನೆಮ್ಮದಿ ಸಿಗೋದು ಸ್ಮಶಾನದಲ್ಲಿ ಅಂತಾರೆ. ಆದ್ರೆ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಸ್ಮಶಾನದಲ್ಲೂ ನೆಮ್ಮದಿ ಇಲ್ಲದಂತಾಗಿದ್ದು ವಿಪರ್ಯಾಸ. ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಎಚ್ಚೆತ್ತು ಕೊಂಡು ಅಕ್ರಮ ಮರಳು ದಂಧೆ ಕಡಿವಾಣ ಹಾಕಬೇಕಿರುವುದು ಅತ್ಯಂತ ತುರ್ತಾಗಿ ಆಗಬೇಕಿರವ ಕೆಲಸ.

ಗದಗ: ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನು ಬಿಡುತ್ತಿಲ್ಲ. ಮನೆಗಳ ನಿರ್ಮಾಣಕ್ಕೆ ಅಸ್ತಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ! ಈ ಅಕ್ರಮ ಚಟುವಟಿಕೆ ಬಗ್ಗೆ ಮಾತನಾಡಲು ಗ್ರಾಮದ ಜನ್ರು ಕೂಡಾ ಭಯ ಪಡ್ತಿದ್ದಾರೆ.

ಸ್ಮಶಾನದಲ್ಲೂ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ!

ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಭೂಮಿ ಅಗೆದು ಅಸ್ತಿಪಂಜರಗಳನ್ನು ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ. ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಜೊತೆ ಬರುವ ಮರಳನ್ನು ಅಕ್ರಮವಾಗಿ ದೋಚುತ್ತಾ, ಸ್ಮಶಾನ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿದ್ದಾರೆ.

ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಘಟನೆಯಲ್ಲಿ ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದ್ರೂ ಕೂಡ ಈ ದಂಧೆಗೆ ಬ್ರೇಕ್​ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಲು ಗ್ರಾಮಸ್ಥರು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಸತ್ತ ಮೇಲೆ ಮನುಷ್ಯನಿಗೆ ನೆಮ್ಮದಿ ಸಿಗೋದು ಸ್ಮಶಾನದಲ್ಲಿ ಅಂತಾರೆ. ಆದ್ರೆ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಸ್ಮಶಾನದಲ್ಲೂ ನೆಮ್ಮದಿ ಇಲ್ಲದಂತಾಗಿದ್ದು ವಿಪರ್ಯಾಸ. ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಎಚ್ಚೆತ್ತು ಕೊಂಡು ಅಕ್ರಮ ಮರಳು ದಂಧೆ ಕಡಿವಾಣ ಹಾಕಬೇಕಿರುವುದು ಅತ್ಯಂತ ತುರ್ತಾಗಿ ಆಗಬೇಕಿರವ ಕೆಲಸ.

Intro:ಆ್ಯಂಕರ್;- ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡತ್ತೆ ಅನ್ನೋ ಗಾದೆ ಮಾತು ಕೇಳಿದ್ರಿ. ಆದ್ರೆ ಗದಗ ಜಿಲ್ಲೆಯಲ್ಲಿ ಮಾತ್ರ ಗಾದೆ ಮಾತು ಇಲ್ಲಿ ಸ್ವಲ್ಪ ಬದಲಾಗಿದೆ. ಹೌದು ಅಕ್ರಮ ಮರಳು ದಂದೆಕೋರರು ಹೆಣ ಹೂಳುವ ಜಾಗವನ್ನು ಬಿಡುತ್ತಿಲ್ಲ. ಹೆಣಗಳು ಲೆಕ್ಕಿಸದೆ ಅಕ್ರಮ ಮರಳು ಲೂಟಿ ನಡೆದಿದೆ. ಮನೆ, ಮಠ ನಿರ್ಮಾಣಕ್ಕೆ ಹೆಣಗಳ ಅಸ್ತಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ದಂಧೆಗೆ ಬಗ್ಗೆ ಮಾತಾಡಲು ಗ್ರಾಮದ ಜನ್ರು ಕೂಡಾ ಭಯ ಪಡುತ್ತಿದ್ದಾರೆ. ಇಷ್ಟೇಲ್ಲ ಅಕ್ರಮ ಮರಳು ದಂದೆ ನಡೆಯುತ್ತಿದ್ರು ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ.


Body:ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಹೋರ ವಲಯದ ಸ್ಮಶಾನದಲ್ಲಿ. ಸುಮಾರು ಮೂರು ಸಾವಿರ ಜನಸಂಖ್ಯೆಯಿರುವ ಪುಟ್ಟ ಹಳ್ಳಿಯಿದು. ಅನಾದಿ ಕಾಲದಿಂದಲೂ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನ ಏಕೈಕ ಜಾಗ. ಆದರೆ ಇಲ್ಲೂ ಸಹ ಸ್ಯಾಂಡ್ ಮಾಫಿಯಾ ದಂದೆ ಕೊರರು ಟ್ರಾಕ್ಟರ್ ಮೂಲಕ ಮರಳುಗಾರಿಕೆ ಮಾಡುತ್ತಿದ್ದಾರೆ. ನದಿ ಪಾತ್ರದ ಮರಳನ್ನು ಅಕ್ರಮವಾಗಿ ಮರಳೆತ್ತುವುದು ಯಥೇಚ್ಛವಾಗಿ ನಡೆಯುತ್ತಲೇ ಇದೆ. ಇದೀಗ ಮರಳು ದಂಧೆಕೋರರು ಸ್ಮಶಾನದ ಮೇಲೂ ಕೆಂಗಣ್ಣು ಹಾಕಿದ್ದಾರೆ. ಅಲ್ಲಿಯೂ ಭೂಮಿ ಅಗೆದು ಅಸ್ತಿಪಂಜರಗಳ ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ. ಮರಳು ದಂಧೆಕೋರರು ಕೇವಲ ನದಿ, ಹಳ್ಳಿಕೊಳ್ಳಗಳನ್ನು ಮಾತ್ರವಲ್ಲ ಸ್ಮಶಾನವನ್ನು ಬಿಡುತ್ತಿಲ್ಲ. ಹೌದು. ಇದು ಅಕ್ಷರಶಃ ಸತ್ಯ. ರುದ್ರಭೂಮಿಗಾಗಿ ಮೀಸಲಿಟ್ಟ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಟ್ರ್ಯಾಕ್ಟರ್ ಗಳ ಮೂಲಕ ಮರಳು ದಂಧೆ ರಾಜಾರೋಷವಾಗಿ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದ್ರೂ ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ನಿಂತಿಲ್ಲ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಮರಳು ಮಾಫಿಯಾ ಗ್ರಾಮಸ್ಥರನ್ನು ಭಯಪಡುವಂತೆ ಮಾಡಿದೆ. ಗ್ರಾಮದಲ್ಲಿ ಈ ಬಗ್ಗೆ ಮಾತನಾಡಲು ಹಿಂದೇಟು ಹಕುವಂತಾಗಿದೆ. ಇನ್ನೂ ಸ್ಮಶಾನಕ್ಕಿರುವ ಒಂದು ಜಾಗವನ್ನು ಕೂಡಾ ಬಿಡುತ್ತಿಲ್ಲ. ಇಲ್ಲಿರು ಹೆಣಗಳ ಅಸ್ತಿ ಪಂಜರಗಳು ಮೇಲೆತ್ತಿ ಮರಳು ತೆಗೆದಾಗ ಸಾಕಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದು ಗ್ರಾಮದ ಜನರಲ್ಲಿ ಭಯ ಹುಟ್ಟಿಸಿದೆ. ಹೆಣಗಳ ಅಸ್ತಿ ಪಂಜರ ಬೇರೆಡೆ ಬಿಸಾಡಿ ಮರಳು ದಂಧೆ ಮುಂದುವರೆಸಿದ್ದಾರೆ. ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಈ ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ಹರಿದುಬಂದ ನೀರು ಜೊತೆಗೆ ಸಿಗುವ ಮರಳನ್ನು ಅಕ್ರಮವಾಗಿ ದೋಚುತ್ತ, ಸ್ಮಶಾನದಲ್ಲಿರುವ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿದ್ದಾರೆ. Conclusion:ಸತ್ತ ಮೇಲೆ ಮನುಷ್ಯನಿಗೆ ನೆಮ್ಮದಿ ಅಂತಾ ಸೀಗೋದು ಅದು ಸ್ಮಶಾನದಲ್ಲಿ ಅಂತಾರೆ. ಆದ್ರೆ ಅಲ್ಲಿಯು ಕೂಡಾ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಸತ್ತವರಿಗೆ ಸ್ಮಶಾನದಲ್ಲೂ ನೆಮ್ಮದಿ ಇಲ್ಲದಂತಾಗಿದ್ದು ವಿಪರ್ಯಾಸವೇ ಸರಿ. ಆದಷ್ಟೂ ಬೇಗಾ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಎಚ್ಚೆತ್ತಗೊಂಡು ಅಕ್ರಮ ಮರಳು ದಂದೆಗೆ ಫುಲ್ ಸ್ಟಾಫ್ ಹಾಕ್ತಾರಾ ಕಾದು ನೋಡ ಬೇಕಿದೆ....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.