ಗದಗ : ಸಾಲಬಾಧೆಗೆ ರೈತನೋರ್ವ ನೇಣಿಗೆ ಶರಣಾಗಿರೋ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳದಲ್ಲಿ ನಡೆದಿದೆ.
ಬಸಪ್ಪ ಕೊರ್ಲಹಳ್ಳಿ (56) ಮೃತ ರೈತ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನಗಿರುವ ಮೂರು ಎಕರೆ ಜಮೀನಿನ ಆಧಾರದ ಮೇಲೆ ಮುಂಡರಗಿ ಕೆವಿಜಿ ಬ್ಯಾಂಕ್ನಲ್ಲಿ 2 ಲಕ್ಷ ರೂ, ಹಾಗೂ ಬೇರೆ ಕಡೆ ಸುಮಾರು 1 ಲಕ್ಷ ರೂ ಕೈಸಾಲ ಮಾಡಿದ್ದನು.
ಸಜ್ಜೆ, ಮೆಕ್ಕೆಜೋಳ ಬೆಳೆದಿದ್ದ ರೈತ ಬಸಪ್ಪ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಕ್ಕುಟೋದ್ಯಮ ನೆಲಕಚ್ಚಿದ ಹಿನ್ನಲೆಯಲ್ಲಿ ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿದಿದೆ . ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಜೊತೆಗೆ ಬೆಂಬಲ ಬೆಲೆಗೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಬಸಪ್ಪ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.