ETV Bharat / state

ಮಲಪ್ರಭೆಗೆ 50 ಸಾವಿರ ಕ್ಯೂಸೆಕ್ ನೀರು! ನದಿ ಪಾತ್ರದ ಜನರ ಎದೆಯಲ್ಲಿ ಢವ ಢವ

ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇಂದು ಮತ್ತೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಜನರ ಎದೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

author img

By

Published : Aug 10, 2019, 10:39 AM IST

Updated : Aug 10, 2019, 11:08 AM IST

Gadag disrtict

ಗದಗ : ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇಂದು ಮತ್ತೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಜನರ ಎದೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಮಲಪ್ರಭೆಗೆ ಮತ್ತೆ ನೀರು ರಿಲೀಸ್:

ಮಲಪ್ರಭೆಗೆ 50 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
ಈಗಾಗಲೇ ಜಿಲ್ಲೆಯ ನರಗುಂದ-ರೋಣ ತಾಲೂಕಿನ 13 ಗ್ರಾಮಗಳು ಮುಳುಗಡೆಯಾಗಿದ್ದು,ಮಲಪ್ರಭಾ ನದಿ, ಬೆಣ್ಣೆಹಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ಮಧ್ಯೆ ಮತ್ತೆ ಅಗಾಧ ಪ್ರಮಾಣದ ನೀರು ಹರಿಸುತ್ತಿರುವುದು ನದಿ ಪಾತ್ರದ ಗ್ರಾಮಗಳಲ್ಲಿ ವಾಸವಿರುವ ಜನರಲ್ಲಿ ನಡುಕ ಹುಟ್ಟಿಸಿದೆ.

ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಅಟ್ಟಹಾಸ:
ನರಗುಂದ-ರೋಣ ತಾಲೂಕಿನಲ್ಲಿ ಮಲಪ್ರಭಾ, ಬೆಣ್ಣೆ ಹಳ್ಳಗಳು ತುಂಬಿ ಪ್ರವಾಹ ಉಂಟಾಗಿದ್ದು, ಮತ್ತೊಂದೆಡೆ ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ತುಂಗಭದ್ರೆ ಅಬ್ಬರಿಸುತ್ತಿದ್ದಾಳೆ. ಪರಿಣಾಮ ತುಂಗಭದ್ರಾ ನದಿಪಾತ್ರದ ಐದಕ್ಕೂ ಹೆಚ್ಚು ಗ್ರಾಮಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿದೆ. ಹೊಳೆ ಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಪ್ರವಾಹದ ಭೀತಿಯಿಂದ ಜನರು ತತ್ತರಿಸುತ್ತಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಅಜ್ಜಿಯ ರಕ್ಷಣೆ:

ಇದೇ ವೇಳೆ ಮಲಪ್ರಭಾ ನದಿ, ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 80 ವರ್ಷದ ಅಜ್ಜಿಯನ್ನು ಬಚಾವ್ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

Gadaga district
ಪ್ರವಾಹದಲ್ಲಿ ಸಿಲುಕಿದ್ದ ಅಜ್ಜಿಯ ರಕ್ಷಣೆ

ಚೆನ್ನಮ್ಮ ಪ್ರವಾಹದಲ್ಲಿ ಬದುಕುಳಿದ ವೃದ್ದೆ. ಮಲಪ್ರಭಾ ನದಿ, ಬೆಣ್ಣೆ ಹಳ್ಳಗಳಲ್ಲಿ ಪ್ರವಾಹದಲ್ಲಿ ಸುಮಾರು 26 ಗಂಟೆಗಳ ಕಾಲ ಸಿಲುಕಿದ್ದ ಈ ಅಜ್ಜಿಯನ್ನು ಪಿಎಸ್ಐ ಲಾಲ್‌ಸಾಬ್ ಜೂಲಕಟ್ಟಿ, ಪಿಡಿಓ ಮಂಜುನಾಥ್ ಗಣಿ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಭಜಂತ್ರಿ ಸೇರಿ ರಕ್ಷಿಸಿದ್ದಾರೆ. ಸತತ 26 ಗಂಟೆಗಳ ಕಾಲ ಮನೆಯ ಮಾಳಿಗೆ ಮೇಲೆ ಕುಳಿತ ಈ ಅಜ್ಜಿ ಚುರುಮುರಿ ತಿಂದು ಹಸಿವು ನೀಗಿಸಿಕೊಂಡಿದ್ದರು ಎನ್ನಲಾಗುತ್ತಿದೆ.

ಗದಗ : ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇಂದು ಮತ್ತೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಜನರ ಎದೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಮಲಪ್ರಭೆಗೆ ಮತ್ತೆ ನೀರು ರಿಲೀಸ್:

ಮಲಪ್ರಭೆಗೆ 50 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
ಈಗಾಗಲೇ ಜಿಲ್ಲೆಯ ನರಗುಂದ-ರೋಣ ತಾಲೂಕಿನ 13 ಗ್ರಾಮಗಳು ಮುಳುಗಡೆಯಾಗಿದ್ದು,ಮಲಪ್ರಭಾ ನದಿ, ಬೆಣ್ಣೆಹಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ಮಧ್ಯೆ ಮತ್ತೆ ಅಗಾಧ ಪ್ರಮಾಣದ ನೀರು ಹರಿಸುತ್ತಿರುವುದು ನದಿ ಪಾತ್ರದ ಗ್ರಾಮಗಳಲ್ಲಿ ವಾಸವಿರುವ ಜನರಲ್ಲಿ ನಡುಕ ಹುಟ್ಟಿಸಿದೆ.

ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಅಟ್ಟಹಾಸ:
ನರಗುಂದ-ರೋಣ ತಾಲೂಕಿನಲ್ಲಿ ಮಲಪ್ರಭಾ, ಬೆಣ್ಣೆ ಹಳ್ಳಗಳು ತುಂಬಿ ಪ್ರವಾಹ ಉಂಟಾಗಿದ್ದು, ಮತ್ತೊಂದೆಡೆ ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ತುಂಗಭದ್ರೆ ಅಬ್ಬರಿಸುತ್ತಿದ್ದಾಳೆ. ಪರಿಣಾಮ ತುಂಗಭದ್ರಾ ನದಿಪಾತ್ರದ ಐದಕ್ಕೂ ಹೆಚ್ಚು ಗ್ರಾಮಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿದೆ. ಹೊಳೆ ಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಪ್ರವಾಹದ ಭೀತಿಯಿಂದ ಜನರು ತತ್ತರಿಸುತ್ತಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಅಜ್ಜಿಯ ರಕ್ಷಣೆ:

ಇದೇ ವೇಳೆ ಮಲಪ್ರಭಾ ನದಿ, ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 80 ವರ್ಷದ ಅಜ್ಜಿಯನ್ನು ಬಚಾವ್ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

Gadaga district
ಪ್ರವಾಹದಲ್ಲಿ ಸಿಲುಕಿದ್ದ ಅಜ್ಜಿಯ ರಕ್ಷಣೆ

ಚೆನ್ನಮ್ಮ ಪ್ರವಾಹದಲ್ಲಿ ಬದುಕುಳಿದ ವೃದ್ದೆ. ಮಲಪ್ರಭಾ ನದಿ, ಬೆಣ್ಣೆ ಹಳ್ಳಗಳಲ್ಲಿ ಪ್ರವಾಹದಲ್ಲಿ ಸುಮಾರು 26 ಗಂಟೆಗಳ ಕಾಲ ಸಿಲುಕಿದ್ದ ಈ ಅಜ್ಜಿಯನ್ನು ಪಿಎಸ್ಐ ಲಾಲ್‌ಸಾಬ್ ಜೂಲಕಟ್ಟಿ, ಪಿಡಿಓ ಮಂಜುನಾಥ್ ಗಣಿ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಭಜಂತ್ರಿ ಸೇರಿ ರಕ್ಷಿಸಿದ್ದಾರೆ. ಸತತ 26 ಗಂಟೆಗಳ ಕಾಲ ಮನೆಯ ಮಾಳಿಗೆ ಮೇಲೆ ಕುಳಿತ ಈ ಅಜ್ಜಿ ಚುರುಮುರಿ ತಿಂದು ಹಸಿವು ನೀಗಿಸಿಕೊಂಡಿದ್ದರು ಎನ್ನಲಾಗುತ್ತಿದೆ.

Intro:Body:

ಗದಗ..



ಮಲಪ್ರಭಾ ನದಿ, ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆ...



26 ಗಂಟೆ ಅನ್ನ, ನೀರು ಇಲ್ಲದೇ ಪ್ರವಾಹದಲ್ಲಿ 80 ವರ್ಷದ ಅಜ್ಜಿ...



26 ಗಂಟೆ ಬದುಕಿಸಿತು ಚುರಮುರಿ...



ಹೊಳೆಆಲೂರ ಗ್ರಾಮದಲ್ಲಿ ಅಜ್ಜಿಯ ಮನಕಲುಕುವ ಸ್ಟೋರಿ...





ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ಘಟನೆ...



ಪಿಎಸ್ಐ, ಪಿಡಿಓ ಮಂಜುನಾಥ್ ಗಣಿ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಭಜಂತ್ರಿ ನಿಂದ ಅಜ್ಜಿ ರಕ್ಷಣೆ...



26 ಗಂಟೆ ಮನೆಯ ಮಾಳಿಗೆ ಮೇಲೆ ಕುಳಿತು ಬದುಕಿದ ಬಡ ಜೀವ...



ಬದುಕಿ ಬಂದ ಅಜ್ಜಿಯಿಂದ ಕೈಮುಗಿದು ಕೃತಜ್ಞತೆ...



26 ಗಂಟೆ ಬಳಿಕ ನೀರು ಕುಡಿದ ಹಿರಿಯ ಜೀವ...



ನೀರು ಕುಡಿಸಿ ಮಾನವೀಯತೆ ಮೆರೆದ ರೋಣ ಪೊಲೀಸರು...





[8/10, 8:38 AM] +91 99867 88757: ಗದಗ



ನವಿಲುತೀರ್ಥ ಡ್ಯಾಂ ನಿಂದ ಮಲಪ್ರಭೆಗೆ ಮತ್ತೆ ಅಪಾರ ನೀರು ರಿಲೀಸ್...



ಮಲಪ್ರಭಾ ನದಿ ಪಾತ್ರದ ಜನ್ರ ಎದೆಯಲ್ಲಿ ಮತ್ತೆ ಢವ ಢವ...



ಗದಗ ಜಿಲ್ಲೆಯ ನರಗುಂದ-ರೋಣ ತಾಲೂಕಿನ  13 ಗ್ರಾಮಗಳು ಮುಳುಗಡೆ...



ಅಪಾಯಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ, ಬೆಣ್ಣೆಹಳ್ಳ...



ಇಂದು ಮತ್ತೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ...



50 ಸಾವಿರ ಕ್ಯೂಸೆಕ್ಸ್ ನೀರಿನಿಂದ ಕಂಗಾಲದ ಗದಗ ಜಿಲ್ಲೆಯ ಜನ್ರು...



[8/10, 9:09 AM] +91 99867 88757: ಗದಗ



ಗದಗ ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಅಟ್ಟಹಾಸ



ಒಂದೆಡೆ ಮಲಪ್ರಭಾ, ಬೆಣ್ಣೆ ಹಳ್ಳದ ಪ್ರವಾಹ, ಮತ್ತೊಂದೆಡೆ ತುಂಬಿ ಹರಿಯುತ್ತಿರುವ ತುಂಗಭದ್ರೆ



ಅಬ್ಬರಿಸಿ ಬೊಬ್ಬರಿಸುತ್ತಿರುವ ನದಿಯ ಪ್ರವಾಹ



ಗದಗ ಜಿಲ್ಲೆ ನರಗುಂದ- ರೋಣ ತಾಲೂಕಿನಲ್ಲಿ ಮಲಪ್ರಭಾ, ಬೆಣ್ಣೆಹಳ್ಳ ಅಟ್ಟಹಾಸ



ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ತುಂಗಭದ್ರೆ ಅಬ್ಬರ



ತುಂಗಭದ್ರಾ ನದಿಪಾತ್ರದ ಐದಕ್ಕೂ ಹೆಚ್ಚು ಗ್ರಾಮಗಳಿಗೆ ನುಗ್ಗಿದ ಅಪಾರ ನೀರು



ಗದಗ ಜಿಲ್ಲೆ ಹೊಳೆಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನುಗ್ಗಿದ ನೀರು



ಪ್ರವಾಹದ ಭೀತಿಯಿಂದ ತತ್ತರಿಸಿದ ಜನ್ರು


Conclusion:
Last Updated : Aug 10, 2019, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.