ETV Bharat / state

ಬಂಗಾರದ ಆಸೆಗ ಹೋಯ್ತು 15 ಲಕ್ಷ ಹಣ: ಅಕ್ಷಯ ತೃತೀಯ ದಿನವೇ ಬಿತ್ತು ಉಂಡೆನಾಮ! - undefined

ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತ ಹೋದವರಿಗೆ ಅಕ್ಷಯ ತೃತೀಯ ದಿನದಂದು ವಂಚಕರು ಉಂಡೆನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡದಲ್ಲಿ ಬಂಗಾರ ಖರೀದಿಸಲು ತೆರಳಿದ್ದವರು ಈಗ ಹಣವೂ ಇಲ್ಲ, ಚಿನ್ನವೂ ಇಲ್ಲ ಎನ್ನುತ್ತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಬಂಗಾರದ ಆಸೆಗ ಹೋಯ್ತು 15 ಲಕ್ಷ ಹಣ: ಉಂಡೆನಾಮ ಹಾಕಿದವರಿಗೆ ತಲಾಶ್​
author img

By

Published : May 9, 2019, 12:47 PM IST

ಧಾರವಾಡ: ಅಕ್ಷಯ ತೃತೀಯ ದಿನದಂದು ಬಂಗಾರ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚನೆ

ಧಾರವಾಡದ ರಜತಗಿರಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಚಿತ್ರದುರ್ಗ ಮೂಲದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಎನ್ನುವವರಿಗೆ ಪ್ರತಿ ಗ್ರಾಂ ಗೆ 100 ರಿಂದ 200 ರೂಪಾಯಿ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚಕರು ತಾವಿದ್ದ ಬಾಡಿಗೆ ಮನೆಗೆ ಕರೆಸಿಕೊಂಡಿದ್ದರು. ಮೊದಲಿಗೆ ಸ್ಯಾಂಪಲ್ ಅಂತ ಅಸಲಿ ಚಿನ್ನದ ಬಿಸ್ಕೆಟ್ ತೋರಿಸಿದ್ದರಂತೆ. ನಂತರ ಚಾಕು ತೋರಿಸಿ ಬೆದರಿಸಿದ ಖದೀಮರು ಗ್ರಾಹಕರಾಗಿ ಬಂದಿದ್ದ ರವಿಕುಮಾರ್​ ಮತ್ತು ಜಾಕೀರ್​​ ಬಳಿಯಿದ್ದ 15 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿದ್ದಾರಂತೆ.

ಜಿ.ಆರ್ ರವಿಕುಮಾರ್​ಗೆ ದಾವಣಗೆರೆ ಮೂಲದ ವ್ಯಕ್ತಿವೋರ್ವನಿಂದ ಪರಿಚಯವಾಗಿದ್ದ ವಂಚಕರು ನಕಲಿ ಹೆಸರುಗಳಿಂದ ಪರಿಚಯಿಸಿಕೊಂಡಿದ್ದರಂತೆ. ಅಲ್ಲದೆ ಧಾರವಾಡದ ರಜತಗಿರಿಯಲ್ಲಿ ಮನೆ ಬಾಡಿಗೆ ಪಡೆಯುವಾಗಲೂ ನಕಲಿ ಹೆಸರಿನಿಂದ ಅಗ್ರೀಮೆಂಟ್ ಬಾಂಡ್ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹಣ ಕಳೆದುಕೊಂಡವರು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಧಾರವಾಡ: ಅಕ್ಷಯ ತೃತೀಯ ದಿನದಂದು ಬಂಗಾರ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚನೆ

ಧಾರವಾಡದ ರಜತಗಿರಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಚಿತ್ರದುರ್ಗ ಮೂಲದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಎನ್ನುವವರಿಗೆ ಪ್ರತಿ ಗ್ರಾಂ ಗೆ 100 ರಿಂದ 200 ರೂಪಾಯಿ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚಕರು ತಾವಿದ್ದ ಬಾಡಿಗೆ ಮನೆಗೆ ಕರೆಸಿಕೊಂಡಿದ್ದರು. ಮೊದಲಿಗೆ ಸ್ಯಾಂಪಲ್ ಅಂತ ಅಸಲಿ ಚಿನ್ನದ ಬಿಸ್ಕೆಟ್ ತೋರಿಸಿದ್ದರಂತೆ. ನಂತರ ಚಾಕು ತೋರಿಸಿ ಬೆದರಿಸಿದ ಖದೀಮರು ಗ್ರಾಹಕರಾಗಿ ಬಂದಿದ್ದ ರವಿಕುಮಾರ್​ ಮತ್ತು ಜಾಕೀರ್​​ ಬಳಿಯಿದ್ದ 15 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿದ್ದಾರಂತೆ.

ಜಿ.ಆರ್ ರವಿಕುಮಾರ್​ಗೆ ದಾವಣಗೆರೆ ಮೂಲದ ವ್ಯಕ್ತಿವೋರ್ವನಿಂದ ಪರಿಚಯವಾಗಿದ್ದ ವಂಚಕರು ನಕಲಿ ಹೆಸರುಗಳಿಂದ ಪರಿಚಯಿಸಿಕೊಂಡಿದ್ದರಂತೆ. ಅಲ್ಲದೆ ಧಾರವಾಡದ ರಜತಗಿರಿಯಲ್ಲಿ ಮನೆ ಬಾಡಿಗೆ ಪಡೆಯುವಾಗಲೂ ನಕಲಿ ಹೆಸರಿನಿಂದ ಅಗ್ರೀಮೆಂಟ್ ಬಾಂಡ್ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹಣ ಕಳೆದುಕೊಂಡವರು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಧಾರವಾಡ: ಅಕ್ಷಯ ತೃತೀಯ ದಿನದಂದು ಬಂಗಾರ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಧಾರವಾಡದ ರಜತಗಿರಿಯಲ್ಲಿ ಈ ಘಟನೆ ನಡೆದಿದೆ.

ಚಿತ್ರದುರ್ಗ ಮೂಲದ ವ್ಯಕ್ತಿಗಳಿಗೆ ಕಡಿಮೆ ಬೆಲೆಗೆ ಬಂಗಾರದ ಬಿಸ್ಕೇಟ್ ಗಳನ್ನು ನೀಡುವುದಾಗಿ ಭರವಸೆ ನೀಡಿದ್ದ ಕಿರಾತಕರು, ಚಾಕು ತೋರಿಸಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಕಡಿಮೆ ಬೆಲೆಗೆ ಬಂಗಾರ ಕೊಂಡುಕೊಳ್ಳುವ ಆಸೆಯಿಂದ ಖದೀಮರನ್ನು ನಂಬಿದ್ದವರ ಹಣವೂ ಹೊಯ್ತು, ಬಂಗಾರವು ಹೋಯ್ತು, ಚಿತ್ರದುರ್ಗ ಮೂಲದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಎನ್ನುವ ವ್ಯಕ್ತಿಗಳನ್ನು ಪ್ರತಿ ಗ್ರಾಂ ಗೆ ೧೦೦ ರಿಂದ ೨೦೦ ರೂ ಕಡಿಮೆ ಬೆಲೆಗೆ ಬಂಗಾರವನ್ನು ನೀಡುವುದಾಗಿ ಧಾರವಾಡದ ರಜತಗಿರಿಯಲ್ಲಿನ ತಮ್ಮ ಬಾಡಿಗೆ ಮನೆಗೆ ಕರೆಸಿಕೊಂಡಿದ್ದ ಖದಿಮರು, ಮೊದಲಿಗೆ ಸ್ಯಾಂಪಲ್ ಅಂತ ಅಸಲಿ ಚಿನ್ನದ ಬಿಸ್ಕೇಟ್ ತೋರಿಸಿ, ನಂತರ ಅವರು ತಂದಿದ್ದ ಹಣವನ್ನು ನೋಡಿ ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ೧೫ ಲಕ್ಷ ಹಣವನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. Body:ಇವರಿಗೆ ಚಳ್ಳೆ ಹಣ್ಣು ತಿನ್ನಿಸಿದ ಆ ಖದೀಮರು ಡಾವಣಗೇರೆ ಮೂಲದ ವ್ಯಕ್ತಿಯೊಬ್ಬರಿಂದ ಪರಿಚಯ ಮಾಡಿಕೊಂಡಿದ್ದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಗೆ ನಕಲಿ ಹೆಸರುಗಳಿಂದ ಪರಿಚಯಿಸಿಕೊಂಡಿದ್ದ ಖದೀಮರು ಧಾರವಾಡದ ರಜತಗಿರಿಯಲ್ಲಿ ಬಾಡಿಗೆ ಮನೆಯನ್ನು ಪಡೆಯುವಾಗಲು ಸಹ ನಕಲಿ ಹೆಸರಿನಿಂದ ಅಗ್ರೀಮೆಂಟ್ ಬಾಂಡ್ ಸೃಷ್ಠಿಸಿ ಬಾಡಿಗೆ ಪಡೆದಿದ್ದಾರೆ. ಸದ್ಯ ಹಣ ಕಳೆದುಕೊಂಡ ಚಿತ್ರದುರ್ಗ ಮೂಲದ ಜಿ. ಆರ್ ರವಿಕುಮಾರ ಮತ್ತು ಜಾಕೀರ್ ಹುಸೇನ್ ಎಂಬುವವರು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರ ದಾಖಲಾದ ನಂತರವೆ ಈ ಖದೀಮರು ಮನೆ ಮಾಲೀಕರಿಗೂ ಸಹ ಸುಳ್ಳು ದಾಖಲೆ ನೀಡಿ olx ಮೂಲಕ ಮನೆ ಬಾಡಿಗೆ ಪಡೆದುಕೊಂಡಿದ್ದು ಬೆಳಕಿಗೆ ಬಂದಿದ್ದು. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ವಿದ್ಯಾಗಿರಿ ಪೋಲಿಸರು ಬಲೆ ಬೀಸಿದ್ದಾರೆ.

ಬೈಟ್ ೦೧: ಜಾಕೀರ್ ಹುಸೇನ್ (ಹಣ ಕಳೆದುಕೊಂಡವರು)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.