ETV Bharat / state

'ಸ್ಮಾರ್ಟ್ ಸಿಟಿ ಅಲ್ಲ, ಇದು ಕಳಪೆ ಕಾಮಗಾರಿಯ ನಗರಿ': ಸಚಿವರು ನೋಡಲೇಬೇಕಿದೆ ಈ ಸ್ಟೋರಿ..

author img

By

Published : Mar 29, 2021, 3:54 PM IST

ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ಸುಮಾರು ಆರು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ರಸ್ತೆ ನಿರ್ಮಿಸಬೇಕಾದ್ರೆ ಹಳೆ ರಸ್ತೆಯಲ್ಲಿನ ಒಳಚರಂಡಿ ತೆಗೆದು ಹೊಸ ಚರಂಡಿ ಹಾಕುವ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಎಲ್ಲಾ ಹಳೆ ಒಳಚರಂಡಿಗಳ‌ ಮೇಲೆ ಹೊಸ ರಸ್ತೆ ನಿರ್ಮಿಸಿ, ಹಣ ದೋಚುತ್ತಿರುವ ಆರೋಪ ಕೇಳಿ ಬರುತ್ತಿದೆ.

Smart City
ಸ್ಮಾರ್ಟ್ ಸಿಟಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಈಗ ಸ್ಮಾರ್ಟ್ ಆಗುತ್ತಿದೆ. ಆದ್ರೆ ಸ್ಮಾರ್ಟ್ ಆಗಬೇಕು ಅಂದ್ರೆ ಅಲ್ಲಿ ಕಾಮಗಾರಿನೂ ಕೂಡಾ ಸ್ಮಾರ್ಟ್ ಆಗಿರಬೇಕು. ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅಷ್ಟಕ್ಕೂ ಅಲ್ಲಿನ ಕಾಮಗಾರಿ ಹೇಗೆ ನಡೆದಿದೆ ಅನ್ನೋದನ್ನು ನೀವೇ ನೋಡಿ.

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ

ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಮಾರ್ಟ್ ಸಿಟಿ ಎಂದು ಹೇಳಿದ ಹಾಗೆಯೇ ಕಾಮಗಾರಿ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ಸುಮಾರು ಆರು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ರಸ್ತೆ ನಿರ್ಮಿಸಿಬೇಕಾದ್ರೆ ಹಳೆ ರಸ್ತೆಯಲ್ಲಿನ ಒಳಚರಂಡಿ ತೆಗೆದು ಹೊಸ ಚರಂಡಿ ಹಾಕುವ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಎಲ್ಲಾ ಹಳೆ ಒಳಚರಂಡಿ‌ ಮೇಲೆ ಹೊಸ ರಸ್ತೆ ನಿರ್ಮಿಸಿ, ಹಣ ದೋಚುತ್ತಿರುವ ಆರೋಪ ಕೇಳಿ ಬರುತ್ತಿದೆ.

ರಸ್ತೆ ಅಗಲೀಕರಣ ಸೇರಿದಂತೆ ಎಲ್ಲವನ್ನೂ ಸ್ಮಾರ್ಟ್ ಮಾಡಬೇಕಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಈಗ ಸ್ಥಳೀಯರು ಗರಂ ಆಗಿದ್ದು ಒಳ ಚರಂಡಿ ಪೈಪುಗಳು ರಸ್ತೆಗಳ ಮೇಲೆ ಕಾಣ ಸಿಗುತ್ತಿವೆ. ಇನ್ನು ಕಾಮಗಾರಿ ಆರಂಭಿಸಿ ಸುಮಾರು ತಿಂಗಳು ಕಳೆದರೂ ಸಹ, ಕಾಮಗಾರಿ ಪೂರ್ಣಗೊಳಿಸದ ಪರಿಣಾಮ ಇಲ್ಲಿನ ಸ್ಥಳೀಯ ನಿವಾಸಿಗಳು, ದಿನನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪ್ರಸಂಗ ಬಂದೊದಗಿದೆ.

ಒಂದು ಕಡೆ ಧೂಳಿನ ಜೊತೆಗೆ ಚರಂಡಿ ವಾಸನೆಗೆ ಹೈರಣಾಗಿರುವ ಜನತೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಉತ್ತಮ ರಸ್ತೆ ಜೊತೆಗೆ ಕಳಪೆ ಕಾಮಗಾರಿ ಮಾಡುತ್ತಿರುವ ಅಧಿಕಾರಿಗಳು ಹಾಗೂ ಟೆಂಡರ್ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ: ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಈಗ ಸ್ಮಾರ್ಟ್ ಆಗುತ್ತಿದೆ. ಆದ್ರೆ ಸ್ಮಾರ್ಟ್ ಆಗಬೇಕು ಅಂದ್ರೆ ಅಲ್ಲಿ ಕಾಮಗಾರಿನೂ ಕೂಡಾ ಸ್ಮಾರ್ಟ್ ಆಗಿರಬೇಕು. ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅಷ್ಟಕ್ಕೂ ಅಲ್ಲಿನ ಕಾಮಗಾರಿ ಹೇಗೆ ನಡೆದಿದೆ ಅನ್ನೋದನ್ನು ನೀವೇ ನೋಡಿ.

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ

ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಮಾರ್ಟ್ ಸಿಟಿ ಎಂದು ಹೇಳಿದ ಹಾಗೆಯೇ ಕಾಮಗಾರಿ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ಸುಮಾರು ಆರು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ರಸ್ತೆ ನಿರ್ಮಿಸಿಬೇಕಾದ್ರೆ ಹಳೆ ರಸ್ತೆಯಲ್ಲಿನ ಒಳಚರಂಡಿ ತೆಗೆದು ಹೊಸ ಚರಂಡಿ ಹಾಕುವ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಎಲ್ಲಾ ಹಳೆ ಒಳಚರಂಡಿ‌ ಮೇಲೆ ಹೊಸ ರಸ್ತೆ ನಿರ್ಮಿಸಿ, ಹಣ ದೋಚುತ್ತಿರುವ ಆರೋಪ ಕೇಳಿ ಬರುತ್ತಿದೆ.

ರಸ್ತೆ ಅಗಲೀಕರಣ ಸೇರಿದಂತೆ ಎಲ್ಲವನ್ನೂ ಸ್ಮಾರ್ಟ್ ಮಾಡಬೇಕಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಈಗ ಸ್ಥಳೀಯರು ಗರಂ ಆಗಿದ್ದು ಒಳ ಚರಂಡಿ ಪೈಪುಗಳು ರಸ್ತೆಗಳ ಮೇಲೆ ಕಾಣ ಸಿಗುತ್ತಿವೆ. ಇನ್ನು ಕಾಮಗಾರಿ ಆರಂಭಿಸಿ ಸುಮಾರು ತಿಂಗಳು ಕಳೆದರೂ ಸಹ, ಕಾಮಗಾರಿ ಪೂರ್ಣಗೊಳಿಸದ ಪರಿಣಾಮ ಇಲ್ಲಿನ ಸ್ಥಳೀಯ ನಿವಾಸಿಗಳು, ದಿನನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪ್ರಸಂಗ ಬಂದೊದಗಿದೆ.

ಒಂದು ಕಡೆ ಧೂಳಿನ ಜೊತೆಗೆ ಚರಂಡಿ ವಾಸನೆಗೆ ಹೈರಣಾಗಿರುವ ಜನತೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಉತ್ತಮ ರಸ್ತೆ ಜೊತೆಗೆ ಕಳಪೆ ಕಾಮಗಾರಿ ಮಾಡುತ್ತಿರುವ ಅಧಿಕಾರಿಗಳು ಹಾಗೂ ಟೆಂಡರ್ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.