ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕೊರೊನಾ ಸೋಂಕು ಹರುಡುವುದನ್ನು ನಿಯಂತ್ರಿಸಲು ಔಷಧಿ ಸಿಂಪಡಣೆಗೆ ಶಾಸಕಿ ಕುಸುಮಾ ಸಿ. ಶಿವಳ್ಳಿ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಮ್ಮ ಅನುದಾನದ ಅಡಿಯಲ್ಲಿ ಔಷಧಿ ಸಿಂಪಡಣೆಗೆ ಬೇಕಾಗುವ ಅವಶ್ಯ ವಸ್ತುಗಳನ್ನು ಒದಗಿಸಿದರು. ಕೆಲವು ಕಡೆ ಸಾಂಕೇತಿಕವಾಗಿ ಶ್ರೀನಿವಾಸ ಮಾನೆ ಕೂಡ ಚಾಲನೆ ನೀಡಿದರು.
ಶಾಸಕಿ ಕುಸುಮಾ ಶಿವಳ್ಳಿ ಮಾತನಾಡಿ, ಇದುವರೆಗೆ ಸ್ಥಳೀಯ ಆಡಳಿತದ ಬಳಿ ಇಂತಹ ವ್ಯವಸ್ಥೆ ಇರಲಿಲ್ಲ. ಹೀಗಾಗಿ ವಿಶೇಷ ಪೋರ್ಟಬಲ್ ಪಾವರ್ ಸ್ಪ್ರೇಯರ್ ಒದಗಿಸಲಾಗಿದೆ ಎಂದರು.