ಹುಬ್ಬಳ್ಳಿ: "ಇಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯವಾಡಿದ್ದು ನನಗೆ ಸಂತಸ ತಂದಿದೆ. ಈ ಹಿಂದೆ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 116 ರನ್ ಗಳಿಸಿದ್ದೆ. ಈ ಮ್ಯಾಚ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಪಿಚ್ ಸಹಕರಿಸಿತು" ಎಂದು ಭಾರತ ಎ ತಂಡದ ವಿಕೆಟ್ ಕೀಪರ್ ಕೆ.ಎಸ್.ಭರತ್ ಹೇಳಿದರು.
ನ್ಯೂಜಿಲೆಂಡ್ ಎ ಮತ್ತು ಭಾರತ ಎ ನಡುವಣ 4 ದಿನಗಳ ಟೆಸ್ಟ್ ಭಾನುವಾರ ಡ್ರಾನಲ್ಲಿ ಮುಗಿದಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಿಚ್ ಸಹ ಉತ್ತಮವಾಗಿತ್ತು. ನ್ಯೂಜಿಲೆಂಡ್ ಎ ತಂಡದವರ ಕರಾರುವಾಕ್ ದಾಳಿಯಿಂದ ನಮ್ಮ ನಾಲ್ಕು ವಿಕೆಟ್ಗಳು ಬೇಗನೆ ಉರುಳಿದವು. ಮಳೆಯಿಂದಾಗಿ ಮ್ಯಾಚ್ ಸಂಪೂರ್ಣವಾಗಲಿಲ್ಲ" ಎಂದರು.
ಆರ್ಸಿಬಿ ತಂಡದಿಂದ ಹೊರಬಿದ್ದಿದ್ದಕ್ಕೆ ಬೇಜಾರಿಲ್ಲ. ಅವರವರ ತಂಡಗಳ ಲೆಕ್ಕಾಚಾರ ಬೇರೆಯೇ ಇರುತ್ತೆ. ಆರ್ಸಿಬಿ ಒಂದೊಳ್ಳೆಯ ಫ್ರಾಂಚೈಸಿ. ಅದರ ಜೊತೆ ಕೆಲ ವರ್ಷ ಪಾಲುದಾರನಾಗಿರುವ ಹೆಮ್ಮೆ ಇದೆ ಎಂದು ಇದೇ ವೇಳೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿ