ETV Bharat / state

ಹೋಟೆಲ್​​ಗಳಲ್ಲಿ ಅಕ್ರಮ ಮದ್ಯ ಮಾರಾಟ: ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ

author img

By

Published : Feb 22, 2021, 7:46 PM IST

ನಗರದಲ್ಲಿರುವ ಹೋಟೆಲ್​ ಹಾಗೂ ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿಯ ಆಧಾರದ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು. ನಿಯಮ ಉಲ್ಲಂಘನೆ ಮಾಡಿದ ಹೋಟೆಲ್​ ಮಾಲೀಕರ ಮೇಲೆ ಪ್ರರಕಣ ದಾಖಲಿಸಿರುವ ಘಟನೆ ನಡೆದಿದೆ.

ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ
Excise department officers raids at Hubli

ಹುಬ್ಬಳ್ಳಿ: ನಗರದಲ್ಲಿರುವ ಹೋಟೆಲ್​ ಹಾಗೂ ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿಯ ಆಧಾರದ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು.

ನಗರದಲ್ಲಿರುವ ಅನೇಕ ಹೋಟೆಲ್ ಮತ್ತು ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿ ಅಬಕಾರಿ ಇಲಾಖೆಗೆ ಸಿಕಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋಟೆಲ್​ಗಳು ಮತ್ತು ಖಾನಾವಳಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

Excise department officers raids at Hubli
ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ

ಭೈರಿದೇವರಕೊಪ್ಪದ ಶರಣಪ್ಪ ಮಾಂಸದ ಹೋಟೆಲ್, ವಿದ್ಯಾನಗರದ ರೇಣುಕಾ‌ ಹಾಗೂ ದುರ್ಗಾ ಸಾವಜಿ ಹೋಟೆಲ್, ವಿನ್ಟೇಜ್ ರೆಸ್ಟೋರೆಂಟ್, ನ್ಯೂ ಕಾಟನ್ ಮಾರುಕಟ್ಟೆ ಬಳಿಯ ಕಾಮತ್ ಫಿಶ್ ಲ್ಯಾಂಡ್, ಜೈ ಶ್ರೀಗಾಳಿದುರ್ಗಾ ಹೋಟೆಲ್, ನೆಹರೂ ಮೈದಾನದ ಬಳಿಯ ಸಾಗರ ಪ್ಯಾಲೇಸ್, ವಿಕ್ಟೋರಿಯಾ ರಸ್ತೆಯ ನ್ಯೂ ಆರಾಧನೆ, ರೇಣುಕಾ ಸಾವಜಿ ಹೋಟೆಲ್, ಕಮರಿಪೇಟೆಯ ಜಗದಾಂಬ, ಪೆಂಡಾರ ಓಣಿಯ ದೇವಿಕಾ, ಅಂಚಟಗೇರಿಯ ಕಿರಣ್, ಜಗದಾಂಬಾ, ರೇಣುಕಾ ಸಾವಜಿ ಖಾನಾವಳಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ನಿಯಮ ಉಲ್ಲಂಘನೆ ಕಂಡು ಬಂದ ಹೋಟೆಲ್​ ಮಾಲೀಕರ ಮೇಲೆ ಅಬಕಾರಿ ಕಾಯ್ದೆ ಕಲಂ 15(ಎ) ರ ಅಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂಜೀವ್ ರೆಡ್ಡಿ, ಉಪ ನಿರೀಕ್ಷಕರುಗಳಾದ ದತ್ತಗುರು ಅಥಣಿ, ಬಾಬಾಸಾಬ ಲಡಗಿ, ಮಂಜುನಾಥ ಹಿರೇ ನಾಯ್ಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಹುಬ್ಬಳ್ಳಿ: ನಗರದಲ್ಲಿರುವ ಹೋಟೆಲ್​ ಹಾಗೂ ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿಯ ಆಧಾರದ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು.

ನಗರದಲ್ಲಿರುವ ಅನೇಕ ಹೋಟೆಲ್ ಮತ್ತು ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿ ಅಬಕಾರಿ ಇಲಾಖೆಗೆ ಸಿಕಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋಟೆಲ್​ಗಳು ಮತ್ತು ಖಾನಾವಳಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

Excise department officers raids at Hubli
ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ

ಭೈರಿದೇವರಕೊಪ್ಪದ ಶರಣಪ್ಪ ಮಾಂಸದ ಹೋಟೆಲ್, ವಿದ್ಯಾನಗರದ ರೇಣುಕಾ‌ ಹಾಗೂ ದುರ್ಗಾ ಸಾವಜಿ ಹೋಟೆಲ್, ವಿನ್ಟೇಜ್ ರೆಸ್ಟೋರೆಂಟ್, ನ್ಯೂ ಕಾಟನ್ ಮಾರುಕಟ್ಟೆ ಬಳಿಯ ಕಾಮತ್ ಫಿಶ್ ಲ್ಯಾಂಡ್, ಜೈ ಶ್ರೀಗಾಳಿದುರ್ಗಾ ಹೋಟೆಲ್, ನೆಹರೂ ಮೈದಾನದ ಬಳಿಯ ಸಾಗರ ಪ್ಯಾಲೇಸ್, ವಿಕ್ಟೋರಿಯಾ ರಸ್ತೆಯ ನ್ಯೂ ಆರಾಧನೆ, ರೇಣುಕಾ ಸಾವಜಿ ಹೋಟೆಲ್, ಕಮರಿಪೇಟೆಯ ಜಗದಾಂಬ, ಪೆಂಡಾರ ಓಣಿಯ ದೇವಿಕಾ, ಅಂಚಟಗೇರಿಯ ಕಿರಣ್, ಜಗದಾಂಬಾ, ರೇಣುಕಾ ಸಾವಜಿ ಖಾನಾವಳಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ನಿಯಮ ಉಲ್ಲಂಘನೆ ಕಂಡು ಬಂದ ಹೋಟೆಲ್​ ಮಾಲೀಕರ ಮೇಲೆ ಅಬಕಾರಿ ಕಾಯ್ದೆ ಕಲಂ 15(ಎ) ರ ಅಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂಜೀವ್ ರೆಡ್ಡಿ, ಉಪ ನಿರೀಕ್ಷಕರುಗಳಾದ ದತ್ತಗುರು ಅಥಣಿ, ಬಾಬಾಸಾಬ ಲಡಗಿ, ಮಂಜುನಾಥ ಹಿರೇ ನಾಯ್ಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.