ETV Bharat / state

ಧ್ವಜಗಳನ್ನು ಖರೀದಿಸಿ ಸೈನಿಕರಿಗೆ ನೆರವಾಗುವಂತೆ ದೀಪಾ ಚೋಳನ್ ಮನವಿ

author img

By

Published : Dec 7, 2019, 3:14 PM IST

ಧಾರವಾಡದಲ್ಲಿ ನಡೆದ ಧ್ವಜ ದಿನಾಚರಣೆಯಂದು ಪ್ರತಿಯೊಬ್ಬ ನಾಗರಿಕನೂ ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಕರೆ ಕೊಟ್ಟರು.

Deepa cholan requested to purchase flags and help Soldiers
ಧ್ವಜಗಳನ್ನು ಖರೀದಿಸಿ ಸೈನಿಕರಿಗೆ ನೆರವಾಗುವಂತೆ ದೀಪಾ ಚೋಳನ್ ಮನವಿ

ಧಾರವಾಡ: ಸೈನಿಕರು ಮತ್ತು ಅವಲಂಬಿತ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಧ್ವಜಗಳನ್ನು ಖರೀದಿಸಿ ಸೈನಿಕರಿಗೆ ನೆರವಾಗುವಂತೆ ದೀಪಾ ಚೋಳನ್ ಮನವಿ

ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಧ್ವಜದ ಚಿತ್ರಗಳು ಮತ್ತು ಸ್ಟಿಕರ್​ಗಳನ್ನು ಅವರು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ದೇಶದ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದು‌ ಮನವಿ ಮಾಡಿಕೊಂಡರು.

ಇದೇ ವೇಳೆ ನಿವೃತ್ತ ಏರ್ ಕಮಾಂಡರ್ ಸಿ. ಎಸ್. ಹವಾಲ್ದಾರ್ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತ ಕೂಡಲೇ, ದೇಶದ ರಕ್ಷಣಾ ಪಡೆಗಳ ಸೈನಿಕರ ಕಲ್ಯಾಣಕ್ಕಾಗಿ ಈ ಆಚರಣೆ ಜಾರಿಗೆ ಬಂತು. ಭಾರತದ ಮೊದಲ ರಕ್ಷಣಾ ಸಚಿವ ಬಲದೇವ ಸಿಂಗ್ ನೇತೃತ್ವದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು 1949 ಡಿಸೆಂಬರ್ 7 ರಿಂದ ಈ ಆಚರಣೆ ಜಾರಿಗೊಳಿಸಿದರು ಎಂಬ ಕುರಿತು ಮಾಹಿತಿ ನೀಡಿದರು.

ಧಾರವಾಡ: ಸೈನಿಕರು ಮತ್ತು ಅವಲಂಬಿತ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಧ್ವಜಗಳನ್ನು ಖರೀದಿಸಿ ಸೈನಿಕರಿಗೆ ನೆರವಾಗುವಂತೆ ದೀಪಾ ಚೋಳನ್ ಮನವಿ

ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಧ್ವಜದ ಚಿತ್ರಗಳು ಮತ್ತು ಸ್ಟಿಕರ್​ಗಳನ್ನು ಅವರು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ದೇಶದ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದು‌ ಮನವಿ ಮಾಡಿಕೊಂಡರು.

ಇದೇ ವೇಳೆ ನಿವೃತ್ತ ಏರ್ ಕಮಾಂಡರ್ ಸಿ. ಎಸ್. ಹವಾಲ್ದಾರ್ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತ ಕೂಡಲೇ, ದೇಶದ ರಕ್ಷಣಾ ಪಡೆಗಳ ಸೈನಿಕರ ಕಲ್ಯಾಣಕ್ಕಾಗಿ ಈ ಆಚರಣೆ ಜಾರಿಗೆ ಬಂತು. ಭಾರತದ ಮೊದಲ ರಕ್ಷಣಾ ಸಚಿವ ಬಲದೇವ ಸಿಂಗ್ ನೇತೃತ್ವದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು 1949 ಡಿಸೆಂಬರ್ 7 ರಿಂದ ಈ ಆಚರಣೆ ಜಾರಿಗೊಳಿಸಿದರು ಎಂಬ ಕುರಿತು ಮಾಹಿತಿ ನೀಡಿದರು.

Intro:ಧಾರವಾಡ: ಸೈನಿಕರು ಮತ್ತು ಅವಲಂಬಿತ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕರು ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ಉದಾರ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಧ್ವಜದ ಚಿತ್ರಗಳು ಮತ್ತು ಸ್ಟಿಕರ್ ಬಿಡುಗಡೆಗೊಳಿಸಿದರು...

ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ದೇಶದ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದು‌ ಮನವಿ ಮಾಡಿಕೊಂಡರು....Body:ನಿವೃತ್ತ ಏರ್ ಕಮೋಡರ್ ಸಿ.ಎಸ್.ಹವಾಲ್ದಾರ್ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತ ಕೂಡಲೇ, ದೇಶದ ರಕ್ಷಣಾ ಪಡೆಗಳ ಸೈನಿಕರ ಕಲ್ಯಾಣಕ್ಕಾಗಿ ಭಾರತದ ಮೊದಲ ರಕ್ಷಣಾ ಸಚಿವ ಬಲದೇವ ಸಿಂಗ್ ನೇತೃತ್ವದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಅವರ ಕಾಳಜಿಯಿಂದಾಗಿ 1949 ಡಿಸೆಂಬರ್ 7 ರಿಂದ ಈ ಆಚರಣೆ ಜಾರಿಗೊಂಡ ಕುರಿತು ಮಾಹಿತಿ ನೀಡಿದರು..

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕೊಡೊಳ್ಳಿ, ಎಸ್‌.ಎಂ.ತುಗಶೆಟ್ಟಿ, ಅರವಿಂದ ಶಿಗ್ಗಾಂವ್, ಬ್ರಿಗೇಡಿಯರ್ ಎಸ್‌.ಜಿ.ಭಾಗವತ್, ಪಿ.ವಿ. ಹಿರೇಮಠ, ಸಿ.ಯು.ಬೆಳ್ಳಕ್ಕಿ, ಕರಣ್ ದೊಡ್ಡವಾಡ, ಎಂ.ವಿ.ಕರಮರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು...Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.