ಧಾರವಾಡ: ದೇಶದೆಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ದಿನೇ-ದಿನೆ ಏರಿಕೆ ಕಾಣುತ್ತಿವೆ. ಹಾಗಾಗಿ ನಗರದ ಹಲವೆಡೆ ರೋಟರಿ ಕ್ಲಬ್, ನಾಗರಿಕ ರಕ್ಷಣಾ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸದಸ್ಯರು, ಹೆಚ್ಡಿಎಂಸಿ, ಆರೋಗ್ಯ ಅಧಿಕಾರಿಗಳು ಸೇರಿ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ.
![Corona awareness in darwada](https://etvbharatimages.akamaized.net/etvbharat/prod-images/03:42:25:1597572745_kn-dwd-4-ngo-corona-jagruti-av-ka10001_16082020153753_1608f_1597572473_803.jpg)
ನಗರದ ಸುಭಾಷ್ ರೋಡ್, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇರುವ ಜನರಿಗೆ ಧ್ವನಿ ವರ್ಧಕಗಳನ್ನು ಬಳಸಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇನ್ನೂ ನಗರದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸಹ ಈ ಜಾಗೃತಿ ನಡೆಸಲು ನಿರ್ಧಾರವನ್ನು ಕೈಗೊಂಡಿದ್ದಾರೆ.