ETV Bharat / state

ತಾವೇ ಅಡವಿಟ್ಟಿದ್ದ ಕಾರು ಕದ್ದು ಹಣಕ್ಕೆ ಬೇಡಿಕೆ ಇಟ್ಟು ವಂಚಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​​: ಈ ತಂಡ ಪತ್ತೆಯಾಗಿದ್ದೇ ಬಲು ರೋಚಕ

author img

By

Published : Feb 2, 2022, 10:16 AM IST

ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಭಾಗದಲ್ಲಿ ಕಾರು ಕಳ್ಳತನ ಮಾಡಿ ವಂಚಿಸುತ್ತಿದ್ದ ಖತರ್ನಾಕ್​​ ಕಳ್ಳರ ಗ್ಯಾಂಗ್ ಅ​​ನ್ನು ನಗರದ ಕೇಶ್ವಾಪೂರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಐಶಾರಾಮಿ ಕಾರು, ಒಂದು ಬೈಕ್, 2.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

ಕಾರು ಕಳ್ಳರ ಬಂಧನ
ಕಾರು ಕಳ್ಳರ ಬಂಧನ

ಹುಬ್ಬಳ್ಳಿ: ನಗರದ ಕೇಶ್ವಾಪೂರ ಪೊಲೀಸರು ಕಾರು ಕಳ್ಳತನ ಮಾಡಿ ವಂಚಿಸುತ್ತಿದ್ದ ನಟೋರಿಯಸ್​​ ತಂಡವನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾದಾ ಕಾರು ಕಳ್ಳತನ ಪ್ರಕರಣ ಎಂದುಕೊಂಡು ಕೇಶ್ವಾಪುರ ಪೊಲೀಸರು ಈ ಕೇಸ್​​ ಅನ್ನು ಭೇದಿಸಿದಾಗ ಅವರಿಗೆ ಸಿಕ್ಕಿದ್ದು ದೊಡ್ಡ ಮೋಸದ ಜಾಲ.

ಕೇಶ್ವಾಪುರ ಪೊಲೀಸರು ಕೇವಲ ಕಾರುಕಳ್ಳರನ್ನಷ್ಟೇ ಅಲ್ಲ, ತಮ್ಮ ಕಾರ್ಯಸಾಧನೆಗೆ ಯಾವುದಕ್ಕೂ ಯೋಚಿಸದೇ, ನೀಚತನ ಮಾಡುತ್ತಿದ್ದ ನಟೋರಿಯಸ್ ತಂಡವನ್ನೇ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ತನಿಖೆಯ ಹಾದಿಯೇ ತುಂಬಾ ಸ್ವಾರಸ್ಯಕರವಾಗಿದೆ.

ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಕಳ್ಳತನವಾಗುತ್ತದೆ. ಆದರೆ, ಇದು ಸಾಮಾನ್ಯ ಕಾರು ಕಳ್ಳತನ ಪ್ರಕರಣವಾಗಿರಲಿಲ್ಲ. ಅಸಲಿಗೆ ಆಗಿದ್ದು ಪರಿಚಿತ ವ್ಯಕ್ತಿಯೊಬ್ಬ ಹಣವಿದ್ದವನ ಬಳಿ ಬಂದು ಕಾರು ಅಡವಿಟ್ಟುಕೊಳ್ಳುವಂತೆ ಕೋರುತ್ತಾನೆ. ಬದಲಿಗೆ ಕಾರು ಕೊಟ್ಟು ಹಣ ಪಡೆಯುತ್ತಾನೆ. ವಾರದೊಳಗಾಗಿ ಮನೆ ಮುಂದೆ ನಿಂತಿದ್ದ ಕಾರು ಕಳ್ಳತನವಾಗುತ್ತದೆ. ಕಾರು ಅಡವಿಟ್ಟುಕೊಂಡ ವ್ಯಕ್ತಿ ಗಾಬರಿಯಾಗುತ್ತಾನೆ.

ತಕ್ಷಣ ಕಾರು ಪಡೆದಾತನಿಗೆ ಕಾರು ಅಡವಿಟ್ಟವನಿಂದ ಫೋನ್ ಕರೆ ಬರುತ್ತದೆ. ಆತ ನಾನು ಅಡವಿಟ್ಟ ಕಾರು ಹುಡುಕಿಕೊಡಬೇಕು, ಇಲ್ಲ ಹಣ ನೀಡಬೇಕು ಎಂದು ಧಮಕಿ ಹಾಕುತ್ತಾನೆ. ಈ ಮಧ್ಯೆ ಕಾರು ಅಡವಿಟ್ಟುಕೊಂಡಾತ ಪೊಲೀಸ್ ಠಾಣೆಗೆ ಹೋಗುತ್ತಾನೆ. ಈ ಪ್ರಕರಣವನ್ನು ಕೇಶ್ವಾಪೂರ ಠಾಣೆಯ ಇನ್​​ ಸ್ಪೆಕ್ಟರ್ ಜಗದೀಶ ಹಂಚಿನಾಳ, ಎಚ್‍ಸಿ ಎಚ್.ಎಂ. ಗುಳೇಶ ಪೊಲೀಸ್‍ಗಣ್ಣಿನಿಂದ ನೋಡುತ್ತಾರೆ.

ತನಿಖೆಯ ವೇಳೆಯಲ್ಲಿ ಇದೊಂದು ಫ್ರೀ ಪ್ಲ್ಯಾನ್ ಕಳ್ಳತನ ಎನ್ನುವುದು ಗೊತ್ತಾಗುತ್ತದೆ. ಕಾರು ಅಡವಿಟ್ಟವನು ಹಾಗೂ ಕಾರು ಮಾರಿದವರನ್ನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲೇ ನೋಡಿ ಅಸಲಿ ಕಥೆ ಶುರುವಾಗೊದು, ಇದೊಂದು ವ್ಯವಸ್ಥಿತ ಜಾಲ ಎನ್ನುವುದು ಪೊಲೀಸರಿಗೆ ತಿಳಿಯುತ್ತದೆ.

ಈ ಕೃತ್ಯದ ಹಿಂದೆ ಇತ್ತು ಖತರ್ನಾಕ್​​ ಗ್ಯಾಂಗ್​​ :

ಪ್ರಕರಣ ಭೇದಿಸಿದ ಕೇಶ್ವಾಪೂರ ಪೊಲೀಸರೇ ಒಂದು ಕ್ಷಣ ದಂಗು ಬಡಿದಿದ್ದರು. ಏಕೆಂದರೆ ಕಳ್ಳರು ಖತರ್ನಾಕ್ ಪ್ಲ್ಯಾನ್ ಮಾಡುತ್ತಿದ್ದರು. ಎಲ್ಲೋ ಕದ್ದ ಕಾರನ್ನು ತೆಗೆದುಕೊಂಡು ಬಂದು ಅಡವಿಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಕಲಿ ಕಾಗದ ಸೃಷ್ಟಿಸಲಾಗುತ್ತದೆ. ಕಾರಿನ ಡುಪ್ಲಿಕೇಟ್ ಕೀ ಕೂಡ ಮಾಡಿಸಲಾಗುತ್ತದೆ. ಕಾರು ಅಡವಿಟ್ಟು ಹಣ ಪಡೆದ ಒಂದು ವಾರದೊಳಗೆ ನಕಲಿ ಕೀಲಿ ಬಳಸಿ ಅದೇ ಕಾರನ್ನು ಅವರೇ ಕಳ್ಳತನ ಮಾಡುತ್ತಾರೆ.

ಪೊಲೀಸ್​​​ ಆಯುಕ್ತರಿಂದ ನಗದು ಪುರಸ್ಕಾರ
ಪೊಲೀಸ್​​​ ಆಯುಕ್ತರಿಂದ ನಗದು ಪುರಸ್ಕಾರ

ನಮ್ಮ ಕಾರು ವಾಪಸ್ ಕೊಡು ಇಲ್ಲ ಕಾರಿನ ಬೆಲೆಯ ಹಣ ಕೊಡು. ಇಲ್ಲದೇ ಹೋದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಅಡವಿಟ್ಟುಕೊಂಡವನನ್ನು ಇದೇ ತಂಡ ಬೆದರಿಸುತ್ತದೆ. ಪೊಲೀಸ್ ರಗಳೆ ಬೇಡ ಎಂದು ಅಡವಿಟ್ಟುಕೊಂಡಾತ ಮತ್ತೊಂದಿಷ್ಟು ಹಣ ಕೊಡುತ್ತಾನೆ. ಇಂತಹ ಪ್ರಕರಣದಲ್ಲಿ ಕಾರಿಗೆ ಕಾರೂ ಬಂತು ಮತ್ತೊಂದಿಷ್ಟು ಹಣವೂ ಬಂತು ಎನ್ನುವುದು ಈ ಐನಾತಿ ತಂಡದ ಪ್ಲಾನ್​​​​. ಇದೇ ತರನಾಗಿ ಹತ್ತಾರು ಕಡೆಗಳಲ್ಲಿ ಮೋಸ ಮಾಡಿರಬಹುದು ಎನ್ನುವುದು ಕೇಶ್ವಾಪುರ ಪೊಲೀಸರಿಗೆ ಗೊತ್ತಾಗುತ್ತದೆ.

ಹುಬ್ಬಳ್ಳಿ ಟು ಮಂಗಳೂರು, ಬೆಂಗಳೂರು :

ತಮ್ಮಲ್ಲಿ ದಾಖಲಾಗಿರುವುದು ಒಂದೇ ಪ್ರಕರಣ ಅದನ್ನು ಭೇದಿಸಿಯಾಗಿದೆ ಎಂದು ಪೊಲೀಸರು ಸುಮ್ಮನಾಗಿ ಬಿಡಬಹುದಿತ್ತು. ಆದರೆ, ಕೇಶ್ವಾಪುರ ಪೊಲೀಸರು ಈ ಪ್ರಕರಣದ ಸಂಪೂರ್ಣ ಜಾಲ ಭೇದಿಸಲು ಮುಂದಾಗುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಮಂಗಳೂರು ಲಿಂಕ್. ಈ ಕೃತ್ಯದ ಹಿಂದೆ ಮಂಗಳೂರು ಮೂಲದವರಿದ್ದಾರೆ ಎಂದು ಗೊತ್ತಾಗುತ್ತದೆ. ಮಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿ ತರಲಾಗುತ್ತದೆ.

ಬಳಿಕ ವಿಚಾರಣೆ ನಡೆಸಿದಾಗ ಅಸಲಿ ಕಥೆ ಗೊತ್ತಾಗುತ್ತೆ, ಈ ತಂಡ ಮಂಗಳೂರು, ಬೆಂಗಳೂರು ಭಾಗದಲ್ಲಿ ಇದೇ ತರನಾದ ಸಾಕಷ್ಟು ಅಪರಾಧ ಕೃತ್ಯ ಮಾಡಿರುವುದು ಗೊತ್ತಾಗುತ್ತದೆ. ಇದೇ ಸುಳಿವಿನ ಮೇಲೆ ಮತ್ತೆ ಮಂಗಳೂರಿಗೆ ಕೇಶ್ವಾಪುರ ಪೊಲೀಸ್ ತಂಡ ಹೋಗುತ್ತದೆ. ಬಳಿಕ ಬೆಂಗಳೂರು, ಹೀಗೆ ಮೂರ್ನಾಲ್ಕು ಬಾರಿ ಸುತ್ತಾಡಿ ಪ್ರಕರಣದ ಪ್ರಮುಖ ಏಳು ಆರೋಪಿಗಳನ್ನು ಬಂಧಿಸಲಾಗುತ್ತದೆ.

ಬಂಧಿತರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ 12 ಐಶಾರಾಮಿ ಕಾರು, ಒಂದು ಬೈಕ್, 2.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗುತ್ತದೆ. ಈ ಪ್ರಕರಣ ಭೇದಿಸಿದ್ದರಿಂದ ಅದೆಷ್ಟೋ ಜನ ಮೋಸ ಹೋದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇನ್​ ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ಪಿಎಸ್‍ಐ ಬಾಬಾ, ಎಚ್‍ಸಿ ಗುಳೇಶ ಹುಡೇದ, ಕಾನ್​​ಸ್ಟೇಬಲ್​​​ಗಳಾದ ಮೃತ್ಯುಂಜಯ ಕಾಲವಾಡ, ವಿಠಲ್​​ ಮಾದರ, ಆನಂದ ಪೂಜಾರ, ಎಚ್.ಆರ್. ರಾಮಾಪುರ, ಎಚ್.ಎಸ್. ರಾಗಿ, ಸಿ.ಕೆ. ಲಮಾಣಿ ಅವುರುಳ್ಳ 7 ಮಂದಿಯ ತಂಡ ಈ ಏಳು ಆರೋಪಿಗಳನ್ನ ಬಂಧಿಸಿದ್ದಾರೆ.

ಪೊಲೀಸ್​​​ ಆಯುಕ್ತರಿಂದ ಶಹಬ್ಬಾಷಗಿರಿ -ನಗದು ಪುರಸ್ಕಾರ :

ಕೇಶ್ವಾಪೂರ ಪೊಲೀಸರ ಇಂತಹ ಅಗಾಧ ಸಾಧನೆಯನ್ನು ಮನಸಾರೆ ಕೊಂಡಾಡಿರುವ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಈ ತಂಡಕ್ಕೆ ಇಲಾಖೆ ವತಿಯಿಂದ 25 ಸಾವಿರ ನಗದಿನೊಂದಿಗೆ ,ತಮ್ಮ ವೈಯಕ್ತಿಕ 5 ಸಾವಿರ ರೂ ಸೇರಿ ಒಟ್ಟು 30 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.

ಜಾಹೀರಾತು :ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹುಬ್ಬಳ್ಳಿ: ನಗರದ ಕೇಶ್ವಾಪೂರ ಪೊಲೀಸರು ಕಾರು ಕಳ್ಳತನ ಮಾಡಿ ವಂಚಿಸುತ್ತಿದ್ದ ನಟೋರಿಯಸ್​​ ತಂಡವನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾದಾ ಕಾರು ಕಳ್ಳತನ ಪ್ರಕರಣ ಎಂದುಕೊಂಡು ಕೇಶ್ವಾಪುರ ಪೊಲೀಸರು ಈ ಕೇಸ್​​ ಅನ್ನು ಭೇದಿಸಿದಾಗ ಅವರಿಗೆ ಸಿಕ್ಕಿದ್ದು ದೊಡ್ಡ ಮೋಸದ ಜಾಲ.

ಕೇಶ್ವಾಪುರ ಪೊಲೀಸರು ಕೇವಲ ಕಾರುಕಳ್ಳರನ್ನಷ್ಟೇ ಅಲ್ಲ, ತಮ್ಮ ಕಾರ್ಯಸಾಧನೆಗೆ ಯಾವುದಕ್ಕೂ ಯೋಚಿಸದೇ, ನೀಚತನ ಮಾಡುತ್ತಿದ್ದ ನಟೋರಿಯಸ್ ತಂಡವನ್ನೇ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ತನಿಖೆಯ ಹಾದಿಯೇ ತುಂಬಾ ಸ್ವಾರಸ್ಯಕರವಾಗಿದೆ.

ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ಕಳ್ಳತನವಾಗುತ್ತದೆ. ಆದರೆ, ಇದು ಸಾಮಾನ್ಯ ಕಾರು ಕಳ್ಳತನ ಪ್ರಕರಣವಾಗಿರಲಿಲ್ಲ. ಅಸಲಿಗೆ ಆಗಿದ್ದು ಪರಿಚಿತ ವ್ಯಕ್ತಿಯೊಬ್ಬ ಹಣವಿದ್ದವನ ಬಳಿ ಬಂದು ಕಾರು ಅಡವಿಟ್ಟುಕೊಳ್ಳುವಂತೆ ಕೋರುತ್ತಾನೆ. ಬದಲಿಗೆ ಕಾರು ಕೊಟ್ಟು ಹಣ ಪಡೆಯುತ್ತಾನೆ. ವಾರದೊಳಗಾಗಿ ಮನೆ ಮುಂದೆ ನಿಂತಿದ್ದ ಕಾರು ಕಳ್ಳತನವಾಗುತ್ತದೆ. ಕಾರು ಅಡವಿಟ್ಟುಕೊಂಡ ವ್ಯಕ್ತಿ ಗಾಬರಿಯಾಗುತ್ತಾನೆ.

ತಕ್ಷಣ ಕಾರು ಪಡೆದಾತನಿಗೆ ಕಾರು ಅಡವಿಟ್ಟವನಿಂದ ಫೋನ್ ಕರೆ ಬರುತ್ತದೆ. ಆತ ನಾನು ಅಡವಿಟ್ಟ ಕಾರು ಹುಡುಕಿಕೊಡಬೇಕು, ಇಲ್ಲ ಹಣ ನೀಡಬೇಕು ಎಂದು ಧಮಕಿ ಹಾಕುತ್ತಾನೆ. ಈ ಮಧ್ಯೆ ಕಾರು ಅಡವಿಟ್ಟುಕೊಂಡಾತ ಪೊಲೀಸ್ ಠಾಣೆಗೆ ಹೋಗುತ್ತಾನೆ. ಈ ಪ್ರಕರಣವನ್ನು ಕೇಶ್ವಾಪೂರ ಠಾಣೆಯ ಇನ್​​ ಸ್ಪೆಕ್ಟರ್ ಜಗದೀಶ ಹಂಚಿನಾಳ, ಎಚ್‍ಸಿ ಎಚ್.ಎಂ. ಗುಳೇಶ ಪೊಲೀಸ್‍ಗಣ್ಣಿನಿಂದ ನೋಡುತ್ತಾರೆ.

ತನಿಖೆಯ ವೇಳೆಯಲ್ಲಿ ಇದೊಂದು ಫ್ರೀ ಪ್ಲ್ಯಾನ್ ಕಳ್ಳತನ ಎನ್ನುವುದು ಗೊತ್ತಾಗುತ್ತದೆ. ಕಾರು ಅಡವಿಟ್ಟವನು ಹಾಗೂ ಕಾರು ಮಾರಿದವರನ್ನು ವಶಕ್ಕೆ ಪಡೆಯಲಾಗುತ್ತದೆ. ಇಲ್ಲೇ ನೋಡಿ ಅಸಲಿ ಕಥೆ ಶುರುವಾಗೊದು, ಇದೊಂದು ವ್ಯವಸ್ಥಿತ ಜಾಲ ಎನ್ನುವುದು ಪೊಲೀಸರಿಗೆ ತಿಳಿಯುತ್ತದೆ.

ಈ ಕೃತ್ಯದ ಹಿಂದೆ ಇತ್ತು ಖತರ್ನಾಕ್​​ ಗ್ಯಾಂಗ್​​ :

ಪ್ರಕರಣ ಭೇದಿಸಿದ ಕೇಶ್ವಾಪೂರ ಪೊಲೀಸರೇ ಒಂದು ಕ್ಷಣ ದಂಗು ಬಡಿದಿದ್ದರು. ಏಕೆಂದರೆ ಕಳ್ಳರು ಖತರ್ನಾಕ್ ಪ್ಲ್ಯಾನ್ ಮಾಡುತ್ತಿದ್ದರು. ಎಲ್ಲೋ ಕದ್ದ ಕಾರನ್ನು ತೆಗೆದುಕೊಂಡು ಬಂದು ಅಡವಿಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಕಲಿ ಕಾಗದ ಸೃಷ್ಟಿಸಲಾಗುತ್ತದೆ. ಕಾರಿನ ಡುಪ್ಲಿಕೇಟ್ ಕೀ ಕೂಡ ಮಾಡಿಸಲಾಗುತ್ತದೆ. ಕಾರು ಅಡವಿಟ್ಟು ಹಣ ಪಡೆದ ಒಂದು ವಾರದೊಳಗೆ ನಕಲಿ ಕೀಲಿ ಬಳಸಿ ಅದೇ ಕಾರನ್ನು ಅವರೇ ಕಳ್ಳತನ ಮಾಡುತ್ತಾರೆ.

ಪೊಲೀಸ್​​​ ಆಯುಕ್ತರಿಂದ ನಗದು ಪುರಸ್ಕಾರ
ಪೊಲೀಸ್​​​ ಆಯುಕ್ತರಿಂದ ನಗದು ಪುರಸ್ಕಾರ

ನಮ್ಮ ಕಾರು ವಾಪಸ್ ಕೊಡು ಇಲ್ಲ ಕಾರಿನ ಬೆಲೆಯ ಹಣ ಕೊಡು. ಇಲ್ಲದೇ ಹೋದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಅಡವಿಟ್ಟುಕೊಂಡವನನ್ನು ಇದೇ ತಂಡ ಬೆದರಿಸುತ್ತದೆ. ಪೊಲೀಸ್ ರಗಳೆ ಬೇಡ ಎಂದು ಅಡವಿಟ್ಟುಕೊಂಡಾತ ಮತ್ತೊಂದಿಷ್ಟು ಹಣ ಕೊಡುತ್ತಾನೆ. ಇಂತಹ ಪ್ರಕರಣದಲ್ಲಿ ಕಾರಿಗೆ ಕಾರೂ ಬಂತು ಮತ್ತೊಂದಿಷ್ಟು ಹಣವೂ ಬಂತು ಎನ್ನುವುದು ಈ ಐನಾತಿ ತಂಡದ ಪ್ಲಾನ್​​​​. ಇದೇ ತರನಾಗಿ ಹತ್ತಾರು ಕಡೆಗಳಲ್ಲಿ ಮೋಸ ಮಾಡಿರಬಹುದು ಎನ್ನುವುದು ಕೇಶ್ವಾಪುರ ಪೊಲೀಸರಿಗೆ ಗೊತ್ತಾಗುತ್ತದೆ.

ಹುಬ್ಬಳ್ಳಿ ಟು ಮಂಗಳೂರು, ಬೆಂಗಳೂರು :

ತಮ್ಮಲ್ಲಿ ದಾಖಲಾಗಿರುವುದು ಒಂದೇ ಪ್ರಕರಣ ಅದನ್ನು ಭೇದಿಸಿಯಾಗಿದೆ ಎಂದು ಪೊಲೀಸರು ಸುಮ್ಮನಾಗಿ ಬಿಡಬಹುದಿತ್ತು. ಆದರೆ, ಕೇಶ್ವಾಪುರ ಪೊಲೀಸರು ಈ ಪ್ರಕರಣದ ಸಂಪೂರ್ಣ ಜಾಲ ಭೇದಿಸಲು ಮುಂದಾಗುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಮಂಗಳೂರು ಲಿಂಕ್. ಈ ಕೃತ್ಯದ ಹಿಂದೆ ಮಂಗಳೂರು ಮೂಲದವರಿದ್ದಾರೆ ಎಂದು ಗೊತ್ತಾಗುತ್ತದೆ. ಮಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿ ತರಲಾಗುತ್ತದೆ.

ಬಳಿಕ ವಿಚಾರಣೆ ನಡೆಸಿದಾಗ ಅಸಲಿ ಕಥೆ ಗೊತ್ತಾಗುತ್ತೆ, ಈ ತಂಡ ಮಂಗಳೂರು, ಬೆಂಗಳೂರು ಭಾಗದಲ್ಲಿ ಇದೇ ತರನಾದ ಸಾಕಷ್ಟು ಅಪರಾಧ ಕೃತ್ಯ ಮಾಡಿರುವುದು ಗೊತ್ತಾಗುತ್ತದೆ. ಇದೇ ಸುಳಿವಿನ ಮೇಲೆ ಮತ್ತೆ ಮಂಗಳೂರಿಗೆ ಕೇಶ್ವಾಪುರ ಪೊಲೀಸ್ ತಂಡ ಹೋಗುತ್ತದೆ. ಬಳಿಕ ಬೆಂಗಳೂರು, ಹೀಗೆ ಮೂರ್ನಾಲ್ಕು ಬಾರಿ ಸುತ್ತಾಡಿ ಪ್ರಕರಣದ ಪ್ರಮುಖ ಏಳು ಆರೋಪಿಗಳನ್ನು ಬಂಧಿಸಲಾಗುತ್ತದೆ.

ಬಂಧಿತರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ 12 ಐಶಾರಾಮಿ ಕಾರು, ಒಂದು ಬೈಕ್, 2.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗುತ್ತದೆ. ಈ ಪ್ರಕರಣ ಭೇದಿಸಿದ್ದರಿಂದ ಅದೆಷ್ಟೋ ಜನ ಮೋಸ ಹೋದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇನ್​ ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ಪಿಎಸ್‍ಐ ಬಾಬಾ, ಎಚ್‍ಸಿ ಗುಳೇಶ ಹುಡೇದ, ಕಾನ್​​ಸ್ಟೇಬಲ್​​​ಗಳಾದ ಮೃತ್ಯುಂಜಯ ಕಾಲವಾಡ, ವಿಠಲ್​​ ಮಾದರ, ಆನಂದ ಪೂಜಾರ, ಎಚ್.ಆರ್. ರಾಮಾಪುರ, ಎಚ್.ಎಸ್. ರಾಗಿ, ಸಿ.ಕೆ. ಲಮಾಣಿ ಅವುರುಳ್ಳ 7 ಮಂದಿಯ ತಂಡ ಈ ಏಳು ಆರೋಪಿಗಳನ್ನ ಬಂಧಿಸಿದ್ದಾರೆ.

ಪೊಲೀಸ್​​​ ಆಯುಕ್ತರಿಂದ ಶಹಬ್ಬಾಷಗಿರಿ -ನಗದು ಪುರಸ್ಕಾರ :

ಕೇಶ್ವಾಪೂರ ಪೊಲೀಸರ ಇಂತಹ ಅಗಾಧ ಸಾಧನೆಯನ್ನು ಮನಸಾರೆ ಕೊಂಡಾಡಿರುವ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಈ ತಂಡಕ್ಕೆ ಇಲಾಖೆ ವತಿಯಿಂದ 25 ಸಾವಿರ ನಗದಿನೊಂದಿಗೆ ,ತಮ್ಮ ವೈಯಕ್ತಿಕ 5 ಸಾವಿರ ರೂ ಸೇರಿ ಒಟ್ಟು 30 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.

ಜಾಹೀರಾತು :ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.