ಧಾರವಾಡ: ಮಹದಾಯಿ ಅಧಿಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಮನ್ಸೂರು ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ಧಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಒಂದು ಯೋಜನೆಗೆ ಈ ಬಜೆಟ್ನಲ್ಲಿ ಬೇಕಾಗುಷ್ಟು ಅನುದಾನ ಮೀಸಲಿಡಬೇಕು. ರಾಜ್ಯ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಕೊಡಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಆಗಬೇಕು. ಗೋವಾ ಸರ್ಕಾರ ಮತ್ತೆ ತಡೆಯಾಜ್ಞೆ ತರಲು ಹೊರಟಿದೆ. ಪ್ರಧಾನಿಯವರೇ ಗೋವಾದವರಿಗೆ ತಿಳಿಹೇಳಬೇಕು ಎಂದು ಆಗ್ರಹಿದರು.
ಈ ಯೋಜನೆಗೆ ಅಡ್ಡಿಯಾಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಯೋಜನೆ ಜಾರಿಯಾಗಿದ್ದು ಸಂತೋಷ ತಂದಿದೆ. ಹೋರಾಟ ಮಾಡಿದ ಎಲ್ಲರಿಗೂ ಅಭಿನಂದನೆ ಎಂದರು.