ETV Bharat / state

ಅಮಿತ್​​ ಶಾ, ಮೋದಿಗೆ ಧರ್ಮ, ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದೇ ಕಾಯಕ: ಅಶೋಕ್​ ಗೆಹ್ಲೋಟ್

author img

By

Published : May 3, 2023, 4:22 PM IST

ದೇಶದಲ್ಲಿ ಬಿಜೆಪಿ ಒಂದೇ ಪಕ್ಷ ಇರಬೇಕು ಏನ್ನುವ ಉದ್ದೇಶ ಅವರದ್ದಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​ ಅವರಿಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ashok-gehlot-says-that-amit-shah-modi-are-doing-politics-by-putting-religion-and-caste-first
ಅಮಿತ್​​ ಶಾ, ಮೋದಿಗೆ ಧರ್ಮ, ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದೇ ಕಾಯಕ: ಅಶೋಕ್​ ಗೆಹ್ಲೋಟ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್ ಸುದ್ದಿಗೋಷ್ಟಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೇಶದ ಆಡಳಿತಕ್ಕಿಂತ ಚುನಾವಣೆಯೇ‌ ಮುಖ್ಯವಾಗಿದೆ. ದೇಶದಲ್ಲಿ ಎಲ್ಲಿಯೇ‌ ಚುನಾವಣೆ ನಡೆದರೂ ಪ್ರಚಾರಕ್ಕೆ ತೆರಳುತ್ತಾರೆ ಎಂದು‌ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​ ಟೀಕಿಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಧರ್ಮ, ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷದವರಿಗೆ ಮುಂದೊಂದು‌ ದಿನ ನಿರುದ್ಯೋಗ, ಹಸಿವು ಮತ್ತು ರೈತರ ಸಂಕಷ್ಟ‌ ಅರಿವಾಗಲಿದೆ. ದೇಶದಲ್ಲಿ ಬಿಜೆಪಿ ಒಂದೇ ಪಕ್ಷ ಇರಬೇಕು ಏನ್ನುವ ಉದ್ದೇಶ ಅವರದ್ದಾಗಿದೆ. ಇಂತಹ ಸರ್ವಾಧಿಕಾರಿ ನಡೆ ಅನುಸರಿಸುತ್ತಿದ್ದ ಹಿಟ್ಲರ್ ಸಿದ್ಧಾಂತಗಳೇ ಮಣ್ಣಾಗಿವೆ. ಸದ್ಯ ಕರ್ನಾಟಕದ ರಾಜ್ಯದ ಜನತೆ ಕಾಂಗ್ರೆಸ್ ಆಡಳಿತ ಬಯಸುತ್ತಿದ್ದು‌, ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ದೇಶಕ್ಕೆ ಹೊಸ ಸಂದೇಶ ನೀಡಲಿದೆ" ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ, ಅವರ ಅಕ್ಕ-ಪಕ್ಕ ಭ್ರಷ್ಟಾಚಾರ ನಡೆಸುವವರು ಇದ್ದಾರೆ. ಇದರ ಬಗ್ಗೆ ಅವರ ಪ್ರತಿಕ್ರಿಯೆ ಏನು?. ಎಂದು ಪ್ರಶ್ನಿಸಿ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಮತ್ತು ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುತ್ತಿದ್ದಾರೆ. ಮುಂದೊಂದು ದಿನ ತಕ್ಕ‌ಪಾಠ ಕಲಿಯಲಿದ್ದಾರೆ ಎಂದು ‌ಎಚ್ಚರಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ ಬಜರಂಗ ದಳ ನಿಷೇಧ ಕುರಿತು ಪ್ರತಿಕ್ರಿಯಿಸಿದ ಗೆಹ್ಲೋಟ್​​, ಸಮಾಜದಲ್ಲಿ‌ ಶಾಂತಿ ಕದಡುವ ವ್ಯಕ್ತಿ ಮತ್ತು ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎನ್ನುವ ಮೂಲಕ ಬಜರಂಗದಳ ನಿಷೇಧಿಸುವ ಭರವಸೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ಪ್ರಣಾಳಿಕೆಯಲ್ಲಿ ಕೊಟ್ಟ ಉಚಿತ ಯೋಜನೆಗಳ ಭರವಸೆಗಳನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಈಡೇರಿಸಿದೆ. ರಾಜ್ಯದಲ್ಲಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಯಲ್ಲಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಜಿಡಿಪಿ‌ ಸಹ ಸಮತೋಲನದಲ್ಲಿದೆ. ಉಚಿತ ಯೋಜನೆಗಳಿಂದ‌ ದೇಶ ದಿವಾಳಿಯಾಗುತ್ತದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ: ಡಿ ಕೆ ಶಿವಕುಮಾರ್​

ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಖಾದಿ ಬಟ್ಟೆ ಕಾಯ್ದೆ ಹಾಗೂ ನರೇಗಾ ಯೋಜನೆ ಕಾಂಗ್ರೆಸ್ ನೀಡಿದ ಕೊಡುಗೆ. ಇದರಿಂದ ದೇಶದ ಚಿತ್ರಣವೇ ಬದಲಾಗಿದೆ ಎಂದು ಹೇಳಿದರು. ಆರ್​ಎಸ್​​​ಎಸ್​​​ ಮೂಲದ ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದರೆ ಅಲ್ಲಿ ಯಾವ ಪರಿಸ್ಥಿತಿಯಿದೆ ಎಂದು ಅರಿಯಬೇಕು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹನುಮನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗದಾಪ್ರಹಾರ ನಡೆಸಲಿದ್ದಾರೆ: ಎಐಸಿಸಿ ವಕ್ತಾರ ಗೌರವ್ ವಲ್ಲಭ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್ ಸುದ್ದಿಗೋಷ್ಟಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೇಶದ ಆಡಳಿತಕ್ಕಿಂತ ಚುನಾವಣೆಯೇ‌ ಮುಖ್ಯವಾಗಿದೆ. ದೇಶದಲ್ಲಿ ಎಲ್ಲಿಯೇ‌ ಚುನಾವಣೆ ನಡೆದರೂ ಪ್ರಚಾರಕ್ಕೆ ತೆರಳುತ್ತಾರೆ ಎಂದು‌ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​ ಟೀಕಿಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಧರ್ಮ, ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷದವರಿಗೆ ಮುಂದೊಂದು‌ ದಿನ ನಿರುದ್ಯೋಗ, ಹಸಿವು ಮತ್ತು ರೈತರ ಸಂಕಷ್ಟ‌ ಅರಿವಾಗಲಿದೆ. ದೇಶದಲ್ಲಿ ಬಿಜೆಪಿ ಒಂದೇ ಪಕ್ಷ ಇರಬೇಕು ಏನ್ನುವ ಉದ್ದೇಶ ಅವರದ್ದಾಗಿದೆ. ಇಂತಹ ಸರ್ವಾಧಿಕಾರಿ ನಡೆ ಅನುಸರಿಸುತ್ತಿದ್ದ ಹಿಟ್ಲರ್ ಸಿದ್ಧಾಂತಗಳೇ ಮಣ್ಣಾಗಿವೆ. ಸದ್ಯ ಕರ್ನಾಟಕದ ರಾಜ್ಯದ ಜನತೆ ಕಾಂಗ್ರೆಸ್ ಆಡಳಿತ ಬಯಸುತ್ತಿದ್ದು‌, ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ದೇಶಕ್ಕೆ ಹೊಸ ಸಂದೇಶ ನೀಡಲಿದೆ" ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ, ಅವರ ಅಕ್ಕ-ಪಕ್ಕ ಭ್ರಷ್ಟಾಚಾರ ನಡೆಸುವವರು ಇದ್ದಾರೆ. ಇದರ ಬಗ್ಗೆ ಅವರ ಪ್ರತಿಕ್ರಿಯೆ ಏನು?. ಎಂದು ಪ್ರಶ್ನಿಸಿ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಮತ್ತು ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುತ್ತಿದ್ದಾರೆ. ಮುಂದೊಂದು ದಿನ ತಕ್ಕ‌ಪಾಠ ಕಲಿಯಲಿದ್ದಾರೆ ಎಂದು ‌ಎಚ್ಚರಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ ಬಜರಂಗ ದಳ ನಿಷೇಧ ಕುರಿತು ಪ್ರತಿಕ್ರಿಯಿಸಿದ ಗೆಹ್ಲೋಟ್​​, ಸಮಾಜದಲ್ಲಿ‌ ಶಾಂತಿ ಕದಡುವ ವ್ಯಕ್ತಿ ಮತ್ತು ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎನ್ನುವ ಮೂಲಕ ಬಜರಂಗದಳ ನಿಷೇಧಿಸುವ ಭರವಸೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ಪ್ರಣಾಳಿಕೆಯಲ್ಲಿ ಕೊಟ್ಟ ಉಚಿತ ಯೋಜನೆಗಳ ಭರವಸೆಗಳನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಈಡೇರಿಸಿದೆ. ರಾಜ್ಯದಲ್ಲಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಯಲ್ಲಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಜಿಡಿಪಿ‌ ಸಹ ಸಮತೋಲನದಲ್ಲಿದೆ. ಉಚಿತ ಯೋಜನೆಗಳಿಂದ‌ ದೇಶ ದಿವಾಳಿಯಾಗುತ್ತದೆ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ: ಡಿ ಕೆ ಶಿವಕುಮಾರ್​

ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಖಾದಿ ಬಟ್ಟೆ ಕಾಯ್ದೆ ಹಾಗೂ ನರೇಗಾ ಯೋಜನೆ ಕಾಂಗ್ರೆಸ್ ನೀಡಿದ ಕೊಡುಗೆ. ಇದರಿಂದ ದೇಶದ ಚಿತ್ರಣವೇ ಬದಲಾಗಿದೆ ಎಂದು ಹೇಳಿದರು. ಆರ್​ಎಸ್​​​ಎಸ್​​​ ಮೂಲದ ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದರೆ ಅಲ್ಲಿ ಯಾವ ಪರಿಸ್ಥಿತಿಯಿದೆ ಎಂದು ಅರಿಯಬೇಕು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹನುಮನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗದಾಪ್ರಹಾರ ನಡೆಸಲಿದ್ದಾರೆ: ಎಐಸಿಸಿ ವಕ್ತಾರ ಗೌರವ್ ವಲ್ಲಭ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.