ETV Bharat / state

ವೈರಲ್​ ಆದ ಬಿಎಸ್​​ವೈ ಆಡಿಯೋಗೆ ಮತ್ತೊಂದು ರೋಚಕ ಟ್ವಿಸ್ಟ್​​​!? - Bjp audio viral

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪಕ್ಷದ ಸಭೆಯಲ್ಲಿ ಮಾತನಾಡಲಾಗಿದ್ದು ಎಂಬ ಆಡಿಯೋ, ವಿಡಿಯೋ ವೈರಲ್​ ಆಗಿದ್ದು, ದಿನೇ ದಿನೆ ಇದರ ಕಾವು ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಹೊಸ ತಿರುವು ದೊರೆತಿದೆ.

ಬಿಜೆಪಿ ಆಡೀಯೋಗೆ ಮತ್ತೊಂದು ರೋಚಕ ಟ್ವಿಸ್ಟ್​​​
author img

By

Published : Nov 6, 2019, 2:37 PM IST

ಹುಬ್ಬಳ್ಳಿ: ಇತ್ತಿಚೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್​​ನಲ್ಲಿ ನಡೆದ ಬಿಜೆಪಿ‌ ಸದಸ್ಯರ ಕೋರ್ ಕಮೀಟಿ ಸಭೆಯಲ್ಲಿನ ಆಡಿಯೋ ವೈರಲ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಆಪ್ತ ವಲಯದಲ್ಲಿಯೇ ಅನುಮಾನದ ಹುತ್ತ ಬೆಳೆಯ ತೊಡಗಿದೆ.

ಸಿಎಂ ಬಿಎಸ್‌ವೈ ಆಡಿಯೋ ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ‌. ಸಭೆ ನಡೆದ ಹೋಟೆಲ್‌ನ ಎಲ್ಲ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಸಭೆ ನಡೆದ ಹಾಲ್​​ನಲ್ಲಿ ಮಾತ್ರ ಸಿಸಿ ಕ್ಯಾಮರಾಗಳು ಆಫ್​​ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಭೆ ನಡೆದ ಹಾಲಿನಲ್ಲಿದ್ದ ಸಿಸಿ ಕ್ಯಾಮರಾ ಆಫ್​ ಮಾಡಿಸಲಾಗಿತ್ತಾ?

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ಮೆರೆಗೆ ಸಿಸಿಟಿವಿ ಆಫ್​​ ಮಾಡಲಾಗಿತ್ತಾ? ಎಂಬ ಅನುಮಾನ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಸಭೆಯಲ್ಲಿ ಯಾರು ಯಾರು ಇರಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಈ ಬಗ್ಗೆ ಲಿಸ್ಟ್ ಕೂಡ ತಯಾರಿಸಲಾಗಿದ್ದು, ಲಿಸ್ಟ್​​​​​ನಲ್ಲಿ ಇದ್ದವರನ್ನು ಮಾತ್ರ ಹಾಲ್ ಒಳಗೆ ಬಿಡಲಾಗಿತ್ತು. ಸಭೆಯ ಮಾಹಿತಿ ಸೋರಿಕೆಯಾಗಬಾರದು ಎಂಬ ರಾಜ್ಯಾಧ್ಯಕ್ಷರ ಸೂಚನೆ ಮೆರೆಗೆ ಸಿಸಿಟಿವಿ ಆಫ್​​ ಮಾಡಿಸಲಾಗಿತ್ತು ಎನ್ನಲಾಗುತ್ತಿದೆ.

ಆದರೆ, ಸಭೆಯ ಕೊನೆ ಸಾಲಿನಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದ್ದು, ಯಾರು ಅಂತ ಕೆಲವರಿಗೆ ಗೊತ್ತಿದೆ. ಆದರೆ ಅವರು ಯಾರಿಗೂ ಬಾಯಿ ಬಿಡುತ್ತಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಇಂತವರೇ ಎಂದು ಗೊತ್ತಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂಬ ಅಂಜಿಕೆಯೂ ‌ಪಕ್ಷದ ಮುಖಂಡರಲ್ಲಿ ಕಾಡುತ್ತಿದೆ.

ಒಟ್ಟಿನಲ್ಲಿ ಇದ್ದವರು ಮೂವರಲ್ಲಿ ಕದ್ದವರು ಯಾರು ಎಂಬುವಂತ ಪ್ರಶ್ನೆ ಬಿಜೆಪಿಯಲ್ಲಿ ಕಾಡುತ್ತಿದೆ‌. ಇದರ ಮಧ್ಯೆ ಹೋಟೆಲ್ ಸಿಸಿಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ಅವರನ್ನು ಕರೆದು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಹುಬ್ಬಳ್ಳಿ: ಇತ್ತಿಚೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್​​ನಲ್ಲಿ ನಡೆದ ಬಿಜೆಪಿ‌ ಸದಸ್ಯರ ಕೋರ್ ಕಮೀಟಿ ಸಭೆಯಲ್ಲಿನ ಆಡಿಯೋ ವೈರಲ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಆಪ್ತ ವಲಯದಲ್ಲಿಯೇ ಅನುಮಾನದ ಹುತ್ತ ಬೆಳೆಯ ತೊಡಗಿದೆ.

ಸಿಎಂ ಬಿಎಸ್‌ವೈ ಆಡಿಯೋ ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ‌. ಸಭೆ ನಡೆದ ಹೋಟೆಲ್‌ನ ಎಲ್ಲ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಸಭೆ ನಡೆದ ಹಾಲ್​​ನಲ್ಲಿ ಮಾತ್ರ ಸಿಸಿ ಕ್ಯಾಮರಾಗಳು ಆಫ್​​ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಭೆ ನಡೆದ ಹಾಲಿನಲ್ಲಿದ್ದ ಸಿಸಿ ಕ್ಯಾಮರಾ ಆಫ್​ ಮಾಡಿಸಲಾಗಿತ್ತಾ?

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ಮೆರೆಗೆ ಸಿಸಿಟಿವಿ ಆಫ್​​ ಮಾಡಲಾಗಿತ್ತಾ? ಎಂಬ ಅನುಮಾನ ಈಗ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೇ ಸಭೆಯಲ್ಲಿ ಯಾರು ಯಾರು ಇರಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಈ ಬಗ್ಗೆ ಲಿಸ್ಟ್ ಕೂಡ ತಯಾರಿಸಲಾಗಿದ್ದು, ಲಿಸ್ಟ್​​​​​ನಲ್ಲಿ ಇದ್ದವರನ್ನು ಮಾತ್ರ ಹಾಲ್ ಒಳಗೆ ಬಿಡಲಾಗಿತ್ತು. ಸಭೆಯ ಮಾಹಿತಿ ಸೋರಿಕೆಯಾಗಬಾರದು ಎಂಬ ರಾಜ್ಯಾಧ್ಯಕ್ಷರ ಸೂಚನೆ ಮೆರೆಗೆ ಸಿಸಿಟಿವಿ ಆಫ್​​ ಮಾಡಿಸಲಾಗಿತ್ತು ಎನ್ನಲಾಗುತ್ತಿದೆ.

ಆದರೆ, ಸಭೆಯ ಕೊನೆ ಸಾಲಿನಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದ್ದು, ಯಾರು ಅಂತ ಕೆಲವರಿಗೆ ಗೊತ್ತಿದೆ. ಆದರೆ ಅವರು ಯಾರಿಗೂ ಬಾಯಿ ಬಿಡುತ್ತಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಇಂತವರೇ ಎಂದು ಗೊತ್ತಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂಬ ಅಂಜಿಕೆಯೂ ‌ಪಕ್ಷದ ಮುಖಂಡರಲ್ಲಿ ಕಾಡುತ್ತಿದೆ.

ಒಟ್ಟಿನಲ್ಲಿ ಇದ್ದವರು ಮೂವರಲ್ಲಿ ಕದ್ದವರು ಯಾರು ಎಂಬುವಂತ ಪ್ರಶ್ನೆ ಬಿಜೆಪಿಯಲ್ಲಿ ಕಾಡುತ್ತಿದೆ‌. ಇದರ ಮಧ್ಯೆ ಹೋಟೆಲ್ ಸಿಸಿಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ಅವರನ್ನು ಕರೆದು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Intro:ಹುಬ್ಬಳ್ಳಿ-02
ಇತ್ತಿಚೆಗೆ ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ಲ್ಲಿ ನಡೆದ ಬಿಜೆಪಿ‌ ಸದಸ್ಯರ ಕೋರ್ ಕಮೀಟಿ ಸಭೆಯಲ್ಲಿನ ಆಡಿಯೋ ವೈರಲ್ ಪ್ರಕರಣ ದಿನದಿಂದ ದಿನಕ್ಕೆ ಒಂದಿಲ್ಲೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಆಪ್ತ ವಲಯದಲ್ಲಿಯೇ ಅನುಮಾನದ ಹುತ್ತ ಬೆಳೆಯ ತೊಡಗಿದೆ.

ಸಿಎಂ ಬಿಎಸ್‌ವೈ ಆಡಿಯೋ ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ‌.ಸಭೆ ನಡೆದ ಹೊಟೇಲ್‌ನ ಎಲ್ಲ ಸಿಸಿ ಕ್ಯಾಮಾರ್‌ಗಳು ಆನ್(ಕಾರ್ಯನಿರ್ವಹಿಸುತ್ತಿದ್ದವು) ಇತ್ತು
ಆದರೇ ಸಭೆ ನಡೆದ ಹಾಲ್ ನಲ್ಲಿ ಸಿಸಿ ಕ್ಯಾಮರಾಗಳು ಆಪ್ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಸಭೆ ನಡೆದ ಹಾಲಿನಲ್ಲಿದ್ದ ಸಿಸಿ ಕ್ಯಾಮರಾ ಆಪ್ ಮಾಡಿಸಲಾಗಿತ್ತು.ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ಮೆರೆಗೆ ಸಿಸಿಟಿವಿ ಆಪ್ ಮಾಡಲಾಗಿತ್ತಾ? ಎಂಬುವಂತ ಅನುಮಾನ ಈಗ ಎಲ್ಲೆಡೆ ಹರದಾಡುತ್ತಿದೆ.
ಅಲ್ಲದೇ ಸಭೆಯಲ್ಲಿ ಯಾರು ಯಾರು ಇರಬೇಕು ಎನ್ನುವುದು ಮೊದಲೆ ನಿರ್ಧಾರವಾಗಿತ್ತು.ಈ ಬಗ್ಗೆ
ಲಿಸ್ಟ್ ಕೂಡ ತಯಾರಿಸಲಾಗಿದ್ದು, ಲಿಸ್ಟಿನಲ್ಲಿ ಇದ್ದವರನ್ನು ಮಾತ್ರ ಹಾಲ್ ಒಳಗೆ ಬಿಡಲಾಗಿತ್ತು.
ಸಭೆಯ ಮಾಹಿತಿ ಸೋರಿಕೆಯಾಗಬಾರದೆಂದು ರಾಜ್ಯಾದ್ಯಕ್ಷರ ಸೂಚನೆ ಮೆರೆಗೆ ಸಿಸಿಟಿವಿ ಆಪ್ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಆದ್ರೆ ಸಭೆಯ ಕೊನೆ ಸಾಲಿನಲ್ಲಿದ್ದವರು ವಿಡಿಯೋ ರಿಕಾರ್ಡ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದ್ದು, ಅವರಯ ಯಾರು ಅಂತ ಕೆಲವರಿಗೆ ಗೊತ್ತಿದೆ. ಆದ್ರೆ ಯಾರಿಗೂ ಯಾರೂ ಬಾಯಿಬಿಡುತ್ತಿಲ್ಲ. ಒಂದು ವೇಳೆ ಇಂತವರೇ ಅಂತ ಗೊತ್ತಾದ್ರೆ ಎಲ್ಲರ ಬಣ್ಣ ಬಯಲಾಗಲಿದೆ ಎಂಬ ಅಂಜಿಕೆಯೂ ‌ಪಕ್ಷದ ಮುಖಂಡರಲ್ಲಿ ಕಾಡುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಇದ್ದವರು ಮೂವರಲ್ಲಿ ಕದ್ದವರು ಯಾರು ಎಂಬುವಂತ ಪ್ರಶ್ನೆ ಬಿಜೆಪಿಯಲ್ಲಿ ಕಾಡುತ್ತಿದೆ‌. ಇದರ ಮಧ್ಯೆ ಹೊಟೇಲ್ ಸಿಸಿಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ಅವರನ್ನು ಕರೆದು ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ ಇನ್ನುವರೆಗೂ ವಿಡಿಯೋ ಬಹಿರಂಗದ ಹಿಂದಿನ ಸೂತ್ರದಾರ ಯಾರು ಎಂಬ ಬಗ್ಗೆ ಜಿಜ್ಞಾಸೆ ಮೂಡಿದೆ.‌Body:H B GaddadConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.