ETV Bharat / state

ದಾವಣಗೆರೆ: ವೆಂಕಟೇಶ್ವರನ ದರ್ಶನಕ್ಕೆ ಬಿಡದ ಕಮಿಟಿ, ದೇವಸ್ಥಾನದ ಬಳಿ ಭಕ್ತರ ಗಲಾಟೆ - ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​​ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನ ಜಾವದಿಂದ ಮಧ್ಯಾಹ್ನದ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಮಧ್ಯಾಹ್ನದ ಬಳಿಕ ಅವಕಾಶ ಕಲ್ಪಿಸದೆ ಇರುವುದರಿಂದ ಭಕ್ತರು ಗಲಾಟೆ ಮಾಡಿದ್ದಾರೆ.

venkateswara temple committee not give a darshana davanagere
ವೆಂಕಟೇಶ್ವರನ ದರ್ಶನಕ್ಕೆ ಬಿಡದ ಕಮಿಟಿ
author img

By

Published : Dec 25, 2020, 9:35 PM IST

ದಾವಣಗೆರೆ: ಇಂದು ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡುವಂತೆ ವೆಂಕಟೇಶ್ವರ ದೇವಸ್ಥಾನದ ಬಳಿ ಭಕ್ತರು ಗಲಾಟೆ ನಡೆಸಿರುವ ಘಟನೆ ನಡೆದಿದೆ.

ವೆಂಕಟೇಶ್ವರನ ದರ್ಶನಕ್ಕೆ ಬಿಡದ ಕಮಿಟಿ

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​​ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನ ಜಾವದಿಂದ ಮಧ್ಯಾಹ್ನದ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಮಧ್ಯಾಹ್ನದ ಬಳಿಕ ಅವಕಾಶ ಕಲ್ಪಿಸದೆ ಇರುವುದರಿಂದ ಭಕ್ತರು ಗಲಾಟೆ ಮಾಡಿದ್ದಾರೆ. ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಕಮಿಟಿ ವಿರುದ್ಧ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಓದಿ: 2020ರಲ್ಲಿ ಹೈಕೋರ್ಟ್ ನೀಡಿದ ಪ್ರಮುಖ ಮತ್ತು ಗಮನಾರ್ಹ ತೀರ್ಪುಗಳ ಸಂಪೂರ್ಣ ಮಾಹಿತಿ

ಕ್ರಿಸ್​​ಮಸ್​​ಗೆ ಅವಕಾಶ ನೀಡಿದ್ದೀರಿ, ನಮಗೆ ಯಾಕೆ ಅವಕಾಶ ಇಲ್ಲ‌ ಎಂದು ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಪಟ್ಟು ಹಿಡಿದು ದೇವಸ್ಥಾನದ ಮುಂಭಾಗ ಐನೂರಕ್ಕೂ ಹೆಚ್ಚು ಭಕ್ತಾದಿಗಳು ಜಮಾಯಿಸಿ ಆಕ್ರೋಶ ಹೊರಹಾಕಿದರು. ದೇವಸ್ಥಾನದ ಟ್ರಸ್ಟಿಗಳ ವಿರುದ್ಧ ಕೆಂಡಾಮಂಡಲರಾದ ಭಕ್ತರಿಗೆ ದೇವಸ್ಥಾನದ ಬೀಗ ತೆರೆದು ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ದಾವಣಗೆರೆ: ಇಂದು ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡುವಂತೆ ವೆಂಕಟೇಶ್ವರ ದೇವಸ್ಥಾನದ ಬಳಿ ಭಕ್ತರು ಗಲಾಟೆ ನಡೆಸಿರುವ ಘಟನೆ ನಡೆದಿದೆ.

ವೆಂಕಟೇಶ್ವರನ ದರ್ಶನಕ್ಕೆ ಬಿಡದ ಕಮಿಟಿ

ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​​ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನ ಜಾವದಿಂದ ಮಧ್ಯಾಹ್ನದ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಮಧ್ಯಾಹ್ನದ ಬಳಿಕ ಅವಕಾಶ ಕಲ್ಪಿಸದೆ ಇರುವುದರಿಂದ ಭಕ್ತರು ಗಲಾಟೆ ಮಾಡಿದ್ದಾರೆ. ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಕಮಿಟಿ ವಿರುದ್ಧ ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಓದಿ: 2020ರಲ್ಲಿ ಹೈಕೋರ್ಟ್ ನೀಡಿದ ಪ್ರಮುಖ ಮತ್ತು ಗಮನಾರ್ಹ ತೀರ್ಪುಗಳ ಸಂಪೂರ್ಣ ಮಾಹಿತಿ

ಕ್ರಿಸ್​​ಮಸ್​​ಗೆ ಅವಕಾಶ ನೀಡಿದ್ದೀರಿ, ನಮಗೆ ಯಾಕೆ ಅವಕಾಶ ಇಲ್ಲ‌ ಎಂದು ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಪಟ್ಟು ಹಿಡಿದು ದೇವಸ್ಥಾನದ ಮುಂಭಾಗ ಐನೂರಕ್ಕೂ ಹೆಚ್ಚು ಭಕ್ತಾದಿಗಳು ಜಮಾಯಿಸಿ ಆಕ್ರೋಶ ಹೊರಹಾಕಿದರು. ದೇವಸ್ಥಾನದ ಟ್ರಸ್ಟಿಗಳ ವಿರುದ್ಧ ಕೆಂಡಾಮಂಡಲರಾದ ಭಕ್ತರಿಗೆ ದೇವಸ್ಥಾನದ ಬೀಗ ತೆರೆದು ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.