ETV Bharat / state

ದಾವಣಗೆರೆ ಸೂಳೆಕೆರೆ ಸರ್ವೇ ಮಾಡಿಸಿ ಎಂದವರಿಗೆ ಬರ್ತಿದೆ ಬೆದರಿಕೆ ಕರೆಗಳು!?

ಏಷ್ಯಾದ ಎರಡನೇ ಅತಿದೊಡ್ಡ ಕೆರೆಯಾಗಿರುವ ಸೂಳೆಕೆರೆ ಜಾಗ ಒತ್ತುವರಿಯಾದ ಹಿನ್ನೆಲೆ ಖಡ್ಗ ಸಂಘ ಸರ್ಕಾರಕ್ಕೆ ಕೆರೆಯ ಸರ್ವೇ ಮಾಡಲು ಒತ್ತಾಯಿಸಿತ್ತು. ಇದರಿಂದ ಕುಪಿತಗೊಂಡ ಒತ್ತುವರಿದಾರರು ಸಂಘದ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ.

author img

By

Published : Oct 8, 2019, 5:48 PM IST

ಸೂಳೆಕೆರೆ

ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆ ಜಾಗ ಒತ್ತುವಾರಿಯಾಗಿದ್ದಕ್ಕೆ ಅದನ್ನು ಸರ್ವೇ ಮಾಡಿಸುವಂತೆ ಸಂಘವೊಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು. ಇದರಿಂದ ವಿಚಲಿತರಾದ ಒತ್ತುವರಿದಾರರು ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರಂತೆ.

ಸುಮಾರು 6500 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿತ್ತು. ಇದನ್ನು ಉಳಿಸುವ ಸಲುವಾಗಿ ಖಡ್ಗಾ ಎಂಬ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಇವರ ಹೋರಾಟದ ಫಲವಾಗಿ, ಸರ್ಕಾರ ಸರ್ವೇಗೆ ಆದೇಶ ಮಾಡಿದ್ದು, ಹೋರಾಟಗಾರರಿಗೆ ತಾತ್ಕಾಲಿಕ ಜಯ ಸಿಕ್ಕಿತ್ತು. ಆದರೆ, ಸರ್ಕಾರದ ಆದೇಶ ಕೆರೆ ಒತ್ತುವರಿದಾರರಲ್ಲಿ ಆತಂಕ ಮೂಡಿಸಿದ್ದು, ಸಂಘದ ಮುಖಂಡರಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಕರೆಗಳಿಂದ ಆತಂಕಗೊಂಡ ಸಂಘದ ಕಾರ್ಯಕರ್ತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಖಡ್ಗ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು ಬರ್ತಿವೆಯಂತೆ..

ಚಿತ್ರದುರ್ಗಕ್ಕೆ ಹೆಚ್ಚಿನ ನೀರು ಆರೋಪ: ಇದರ ಜೊತೆ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ವರ್ಷಕ್ಕೆ 0.2 ಟಿಎಂಸಿ ನೀರು ಕೊಂಡೊಯ್ಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇದನ್ನು ಮೀರಿ ಚಿತ್ರದುರ್ಗಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ನೀರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುತ್ತಿದೆ. ಇದೇ ರೀತಿ ನೀರನ್ನು ಕೊಂಡೊಯ್ದರೆ ಮುಂದಿನ ದಿನಗಳಲ್ಲಿ ಚನ್ನಗಿರಿ ತಾಲೂಕಿಗೆ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ನಿಗದಿಯಂತೆ 0.2 ಟಿಎಂಸಿ ನೀರು ಮಾತ್ರ ಬಿಡಬೇಕು, ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.

ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆ ಜಾಗ ಒತ್ತುವಾರಿಯಾಗಿದ್ದಕ್ಕೆ ಅದನ್ನು ಸರ್ವೇ ಮಾಡಿಸುವಂತೆ ಸಂಘವೊಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು. ಇದರಿಂದ ವಿಚಲಿತರಾದ ಒತ್ತುವರಿದಾರರು ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರಂತೆ.

ಸುಮಾರು 6500 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸಾವಿರಾರು ಎಕರೆ ಒತ್ತುವರಿಯಾಗಿತ್ತು. ಇದನ್ನು ಉಳಿಸುವ ಸಲುವಾಗಿ ಖಡ್ಗಾ ಎಂಬ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಇವರ ಹೋರಾಟದ ಫಲವಾಗಿ, ಸರ್ಕಾರ ಸರ್ವೇಗೆ ಆದೇಶ ಮಾಡಿದ್ದು, ಹೋರಾಟಗಾರರಿಗೆ ತಾತ್ಕಾಲಿಕ ಜಯ ಸಿಕ್ಕಿತ್ತು. ಆದರೆ, ಸರ್ಕಾರದ ಆದೇಶ ಕೆರೆ ಒತ್ತುವರಿದಾರರಲ್ಲಿ ಆತಂಕ ಮೂಡಿಸಿದ್ದು, ಸಂಘದ ಮುಖಂಡರಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಕರೆಗಳಿಂದ ಆತಂಕಗೊಂಡ ಸಂಘದ ಕಾರ್ಯಕರ್ತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಖಡ್ಗ ಕಾರ್ಯಕರ್ತರಿಗೆ ಬೆದರಿಕೆ ಕರೆಗಳು ಬರ್ತಿವೆಯಂತೆ..

ಚಿತ್ರದುರ್ಗಕ್ಕೆ ಹೆಚ್ಚಿನ ನೀರು ಆರೋಪ: ಇದರ ಜೊತೆ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ವರ್ಷಕ್ಕೆ 0.2 ಟಿಎಂಸಿ ನೀರು ಕೊಂಡೊಯ್ಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇದನ್ನು ಮೀರಿ ಚಿತ್ರದುರ್ಗಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ನೀರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗುತ್ತಿದೆ. ಇದೇ ರೀತಿ ನೀರನ್ನು ಕೊಂಡೊಯ್ದರೆ ಮುಂದಿನ ದಿನಗಳಲ್ಲಿ ಚನ್ನಗಿರಿ ತಾಲೂಕಿಗೆ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ನಿಗದಿಯಂತೆ 0.2 ಟಿಎಂಸಿ ನೀರು ಮಾತ್ರ ಬಿಡಬೇಕು, ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.

Intro:(*STRINGER_ಮಧುದಾವಣಗೆರೆ)

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಏಷ್ಯಾದ ಎರಡನೇ ಅತಿದೊಡ್ಡ ಕೆರೆ. ಆ ಕೆರೆ ಜಾಗ ಸಾವಿರಾರು ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಅದನ್ನು ಸರ್ವೇ ಮಾಡಿಸುವಂತೆ ಸಂಘವೊಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ ಸವೇಗೆ ಸರ್ಕಾರ ಅಸ್ತು ಎಂದಿದೆ. ಇದರ ಬೆನ್ನಲೇ ಇದೀಗ ಸಂಘದ ಕಾರ್ಯಕರ್ತರಿಗೆ ಒತ್ತುವರಿದಾರರು ಬೆದರಿಕೆ ಹಾಕುತ್ತಿದ್ದು ಸಂಘದ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಹೀಗೆ ವಿಶಾಲವಾಗಿರುವ ಈ ಕೆರೆಯ ಹೆಸರು ಸೂಳೆಕರೆ. ಶಾಂತಿ ಸಾಗರ ಎಂದು ಕರೆಸಿಕೊಳ್ಳುವ ಈ ಕೆರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿದೆ. ಸುಮಾರು ೬,೫೦೦ ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಸಾವಿರಾರು ಎಕರೆ ಒತ್ತುವರಿಯಾಗಿದ್ದು ಇದನ್ನು ಉಳಿಸುವ ಸಲುವಾಗಿ ಖಡ್ಗಾ ಎಂಬ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಇವರ ಹೋರಾಟದ ಫಲವಾಗಿ, ಇದೀಗ ಸರ್ಕಾರ ಸರ್ವೇಗೆ ಆದೇಶ ಮಾಡಿದ್ದು, ಹೋರಾಟಗಾರರಿಗೆ ತಾತ್ಕಾಲಿಕ ಜಯ ಸಿಕ್ಕಿತ್ತು, ಆದರೇ ಸರ್ಕಾರದ ಆದೇಶ ಕೆರೆ ಒತ್ತುವರಿದಾರರಲ್ಲಿ ಆತಂಕ ಮೂಡಿಸಿದ್ದು, ಸಂಘದ ಮುಖಂಡರಿಗೆ ಪೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದು, ಸಂಘದ ಕಾರ್ಯಕರ್ತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಚಿತ್ರದುರ್ಗಕ್ಕೆ ಹೆಚ್ಚಿನ ನೀರು ಆರೋಪ

ಇದರ ಜೊತೆ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ವರ್ಷಕ್ಕೆ ೦.೨ ಟಿಎಂಸಿ ನೀರು ಕೊಂಡಯ್ಯಲು ಸರ್ಕಾರ ಅನುಮತಿ ನೀಡಿದೆ. ಆದರೇ ಇದನ್ನು ಮೀರಿ ಚಿತ್ರದುರ್ಗಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ನೀರನ್ನು ಚಿತ್ರದುರ್ಗಕ್ಕೆ ಕೊಂಡಯ್ಯಲಾಗುತ್ತಿದೆ. ಇದೇ ರೀತಿಯ ನೀರನ್ನು ಕೊಂಡೊಯ್ದರೆ ಮುಂದಿನ ದಿನಗಳಲ್ಲಿ ಚನ್ನಗಿರಿ ತಾಲೂಕಿಗೆ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ನಿಗಧಿಪಡಿಸಿದಂತೆ ೦.೨ ಟಿಎಂಸಿ ನೀರು ಮಾತ್ರ ತೆಗೆದುಕೊಂಡು ಹೋಗ ಬೇಕು, ಇಲ್ಲದೇ ಇದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.
ಕೆರೆ ಉಳಿಸಲು ಟೊಂಕಕಟ್ಟಿ ನಿಂತ ಖಡ್ಗ ಸ್ವಯಂ ಸೇವಕರ ಸಂಘದ ಕಾರ್ಯಕರ್ತರಿಗೆ ಇದೀಗ ಜೀವ ಬೆದರಿಕೆ ಬರುತಿರುವುದು ಮಾತ್ರ ವಿಪರ್ಯಾಸ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸ್ವಯಂ ಸೇವಕರ ಸಂಘದ ಯುವಕರಿಗೆ ರಕ್ಷಣೆ ನೀಡುವ ಜೊತೆಗೆ, ಆದಷ್ಟು ಬೇರೆ ಕೆರೆ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗ ಬೇಕಿದೆ.

ಬೈಟ್ ೦೧ : ಷಣ್ಮುಖ ಸ್ವಾಮೀ, ಖಡ್ಗ ಸಂಘದ ಮುಖಂಡ
ಬೈಟ್ ೦೨ : ರಾಘು, ಖಡ್ಗ ಸ್ವಯಂ ಸೇವಕರ ಸಂಘದ ಅಧ್ಯಕ್ಷ
Body:(*STRINGER_ಮಧುದಾವಣಗೆರೆ)

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಏಷ್ಯಾದ ಎರಡನೇ ಅತಿದೊಡ್ಡ ಕೆರೆ. ಆ ಕೆರೆ ಜಾಗ ಸಾವಿರಾರು ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಅದನ್ನು ಸರ್ವೇ ಮಾಡಿಸುವಂತೆ ಸಂಘವೊಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ ಸವೇಗೆ ಸರ್ಕಾರ ಅಸ್ತು ಎಂದಿದೆ. ಇದರ ಬೆನ್ನಲೇ ಇದೀಗ ಸಂಘದ ಕಾರ್ಯಕರ್ತರಿಗೆ ಒತ್ತುವರಿದಾರರು ಬೆದರಿಕೆ ಹಾಕುತ್ತಿದ್ದು ಸಂಘದ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಹೀಗೆ ವಿಶಾಲವಾಗಿರುವ ಈ ಕೆರೆಯ ಹೆಸರು ಸೂಳೆಕರೆ. ಶಾಂತಿ ಸಾಗರ ಎಂದು ಕರೆಸಿಕೊಳ್ಳುವ ಈ ಕೆರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿದೆ. ಸುಮಾರು ೬,೫೦೦ ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ ಸಾವಿರಾರು ಎಕರೆ ಒತ್ತುವರಿಯಾಗಿದ್ದು ಇದನ್ನು ಉಳಿಸುವ ಸಲುವಾಗಿ ಖಡ್ಗಾ ಎಂಬ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಇವರ ಹೋರಾಟದ ಫಲವಾಗಿ, ಇದೀಗ ಸರ್ಕಾರ ಸರ್ವೇಗೆ ಆದೇಶ ಮಾಡಿದ್ದು, ಹೋರಾಟಗಾರರಿಗೆ ತಾತ್ಕಾಲಿಕ ಜಯ ಸಿಕ್ಕಿತ್ತು, ಆದರೇ ಸರ್ಕಾರದ ಆದೇಶ ಕೆರೆ ಒತ್ತುವರಿದಾರರಲ್ಲಿ ಆತಂಕ ಮೂಡಿಸಿದ್ದು, ಸಂಘದ ಮುಖಂಡರಿಗೆ ಪೋನ್ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದು, ಸಂಘದ ಕಾರ್ಯಕರ್ತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಚಿತ್ರದುರ್ಗಕ್ಕೆ ಹೆಚ್ಚಿನ ನೀರು ಆರೋಪ

ಇದರ ಜೊತೆ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ವರ್ಷಕ್ಕೆ ೦.೨ ಟಿಎಂಸಿ ನೀರು ಕೊಂಡಯ್ಯಲು ಸರ್ಕಾರ ಅನುಮತಿ ನೀಡಿದೆ. ಆದರೇ ಇದನ್ನು ಮೀರಿ ಚಿತ್ರದುರ್ಗಕ್ಕೆ ಹೆಚ್ಚಿಗೆ ಪ್ರಮಾಣದಲ್ಲಿ ನೀರನ್ನು ಚಿತ್ರದುರ್ಗಕ್ಕೆ ಕೊಂಡಯ್ಯಲಾಗುತ್ತಿದೆ. ಇದೇ ರೀತಿಯ ನೀರನ್ನು ಕೊಂಡೊಯ್ದರೆ ಮುಂದಿನ ದಿನಗಳಲ್ಲಿ ಚನ್ನಗಿರಿ ತಾಲೂಕಿಗೆ ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಕ್ಕೆ ನಿಗಧಿಪಡಿಸಿದಂತೆ ೦.೨ ಟಿಎಂಸಿ ನೀರು ಮಾತ್ರ ತೆಗೆದುಕೊಂಡು ಹೋಗ ಬೇಕು, ಇಲ್ಲದೇ ಇದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.
ಕೆರೆ ಉಳಿಸಲು ಟೊಂಕಕಟ್ಟಿ ನಿಂತ ಖಡ್ಗ ಸ್ವಯಂ ಸೇವಕರ ಸಂಘದ ಕಾರ್ಯಕರ್ತರಿಗೆ ಇದೀಗ ಜೀವ ಬೆದರಿಕೆ ಬರುತಿರುವುದು ಮಾತ್ರ ವಿಪರ್ಯಾಸ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸ್ವಯಂ ಸೇವಕರ ಸಂಘದ ಯುವಕರಿಗೆ ರಕ್ಷಣೆ ನೀಡುವ ಜೊತೆಗೆ, ಆದಷ್ಟು ಬೇರೆ ಕೆರೆ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗ ಬೇಕಿದೆ.

ಬೈಟ್ ೦೧ : ಷಣ್ಮುಖ ಸ್ವಾಮೀ, ಖಡ್ಗ ಸಂಘದ ಮುಖಂಡ
ಬೈಟ್ ೦೨ : ರಾಘು, ಖಡ್ಗ ಸ್ವಯಂ ಸೇವಕರ ಸಂಘದ ಅಧ್ಯಕ್ಷ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.