ETV Bharat / state

22ನೇ ತೀರ್ಥಂಕರ ನೇಮಿನಾಥ ಭಗವಾನ್ ಜನ್ಮದಿನ: ನಿರ್ಗತಿಕರಿಗೆ ಯುವಕರಿಂದ ನೆರವು - Jain community youths helped needy in Davanagere

ಅಹಿಂಸೆಯ ತತ್ವ ಸಾರುವ ಜೈನ ಧರ್ಮದ ಯುವಕರು, ಸುಮಾರು ನೂರಕ್ಕೂ ಹೆಚ್ಚು ನಿರ್ಗತಿಕರಿಗೆ ಆಟೋ ಮೂಲಕ ಕರೆತಂದು ಬೆಂಗಳೂರು ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಕ್ಷೌರ, ಸ್ನಾನ, ಹೊಸ ಬಟ್ಟೆ ತೊಡಿಸಿ, ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದರು.

ನಿರ್ಗತಿಕರಿಗೆ ನೆರವಾದ ಯುವಕರು
ನಿರ್ಗತಿಕರಿಗೆ ನೆರವಾದ ಯುವಕರು
author img

By

Published : Aug 16, 2021, 8:02 AM IST

Updated : Aug 16, 2021, 10:33 AM IST

ದಾವಣಗೆರೆ: ಅಹಿಂಸೆಯ ತತ್ವ ಸಾರುವ ಜೈನ ಧರ್ಮದ ಯುವಕರು ನಿರ್ಗತಿಕರಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಜೈನ ಧರ್ಮದ 24 ತೀರ್ಥಂಕರರಲ್ಲಿ ಇಪ್ಪತ್ತರಡನೇ ತೀರ್ಥಂಕರರಾದ ನೇಮಿನಾಥ ಭಗವಾನ್ ಜನ್ಮದಿನದ ಪ್ರಯುಕ್ತ ನಿರ್ಗತಿಕರು, ಕಡುಬಡವರಿಗೆ ಜೈನ ಸಮುದಾಯದವರು ಸಹಾಯ ಮಾಡಿದರು.

ನಿರ್ಗತಿಕರಿಗೆ ಯುವಕರಿಂದ ನೆರವು

ಸುಮಾರು ನೂರಕ್ಕು ಹೆಚ್ಚು ನಿರ್ಗತಿಕರನ್ನು ಕರೆತಂದು ಬೆಂಗಳೂರು ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಕ್ಷೌರ, ಸ್ನಾನ, ಹೊಸ ಬಟ್ಟೆ ತೊಡಿಸಿದ ಯುವಕರು, ಆರ್ಥಿಕ ಸಹಾಯ ಮಾಡಿದರು.

ನಿರ್ಗತಿಕರಿಗಲ್ಲದೆ ಬಡವರ್ಗದ ಜನರಿಗೂ ಊಟ ನೀಡುವ ಮೂಲಕ ಹಸಿವು ನೀಗಿಸಿದ್ದಾರೆ. ಜೈನ ಸಮುದಾಯದ ಯುವಕರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ದಾವಣಗೆರೆ: ಅಹಿಂಸೆಯ ತತ್ವ ಸಾರುವ ಜೈನ ಧರ್ಮದ ಯುವಕರು ನಿರ್ಗತಿಕರಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಜೈನ ಧರ್ಮದ 24 ತೀರ್ಥಂಕರರಲ್ಲಿ ಇಪ್ಪತ್ತರಡನೇ ತೀರ್ಥಂಕರರಾದ ನೇಮಿನಾಥ ಭಗವಾನ್ ಜನ್ಮದಿನದ ಪ್ರಯುಕ್ತ ನಿರ್ಗತಿಕರು, ಕಡುಬಡವರಿಗೆ ಜೈನ ಸಮುದಾಯದವರು ಸಹಾಯ ಮಾಡಿದರು.

ನಿರ್ಗತಿಕರಿಗೆ ಯುವಕರಿಂದ ನೆರವು

ಸುಮಾರು ನೂರಕ್ಕು ಹೆಚ್ಚು ನಿರ್ಗತಿಕರನ್ನು ಕರೆತಂದು ಬೆಂಗಳೂರು ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಕ್ಷೌರ, ಸ್ನಾನ, ಹೊಸ ಬಟ್ಟೆ ತೊಡಿಸಿದ ಯುವಕರು, ಆರ್ಥಿಕ ಸಹಾಯ ಮಾಡಿದರು.

ನಿರ್ಗತಿಕರಿಗಲ್ಲದೆ ಬಡವರ್ಗದ ಜನರಿಗೂ ಊಟ ನೀಡುವ ಮೂಲಕ ಹಸಿವು ನೀಗಿಸಿದ್ದಾರೆ. ಜೈನ ಸಮುದಾಯದ ಯುವಕರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

Last Updated : Aug 16, 2021, 10:33 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.