ETV Bharat / state

ದಾನಿಗಳ ಸಹಕಾರದಿಂದ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಸಾಧ್ಯ: ನಾರಾಯಣಸ್ವಾಮಿ

author img

By

Published : Dec 21, 2019, 10:52 PM IST

ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಲಾಯಿತು.

Development of rural schools is possible with the cooperation of donors : Narayanaswamy
ದಾನಿಗಳ ಸಹಕಾರದಿಂದ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಸಾಧ್ಯ : ನಾರಾಯಣಸ್ವಾಮಿ

ಹರಿಹರ: ದಾನಿಗಳು ಸಹಕಾರ ನೀಡಿದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಅಬಿವೃದ್ಧಿ ಸಾಧಿಸಲು ಸಾಧ್ಯ ಎಂದು ದಾವಣಗೆರೆ ರೋಟರಿ ಕ್ಲಬ್ ಹಿರಿಯ ಸದಸ್ಯ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು, ಶಾಲೆಯ ಭೌತಿಕ ಕಟ್ಟಡ, ಸೌಲಭ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಎಂದರು.

ಈಗಿನ ಸರ್ಕಾರಿ ಶಾಲೆಗಳು ಸೌಲಭ್ಯ ಪೂರ್ಣವಾಗುತ್ತಿವೆ. ಇದರ ಜೊತೆಗೆ ದಾನಿಗಳು ಸಹಕಾರ ನೀಡಿದರೆ ಪರಿಪೂರ್ಣತೆ ಹೊಂದುತ್ತವೆ. ಆರ್ಥಿಕ ಶಕ್ತಿ ಇರುವವರು, ಹಳೆಯ ವಿದ್ಯಾರ್ಥಿ, ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು. ರೋಟರಿ ಸಂಸ್ಥೆಯಿಂದ ಆರಂಭಿಸಿದ ಪೊಲಿಯೋ ಲಸಿಕೆ ಕಾರ್ಯಕ್ರಮ ಇಂದು ದೊಡ್ಡ ಅಭಿಯಾನವಾಗಿ ಬೆಳೆದಿದ್ದು, ಭಾರತ ಪೊಲಿಯೋ ಮುಕ್ತವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಮಾರಕವಾದ ಈ ಕಾಯಿಲೆ ಜೀವಂತವಾಗಿದೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಜೀವನ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರು ಆದ್ಯತೆ ನೀಡಬೇಕೆಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಿ.ರಾಮಕೃಷ್ಣ ಮಾತನಾಡಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಲ್ಲದ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಕಾಣಬಹುದು. ಜೀವಂತಿಕೆ, ಜೀವನ ಕೌಶಲ್ಯ, ಬದುಕಿಗೆ ಹತ್ತಿರವಾಗುವ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಬೆಳೆಯುತ್ತದೆ ಎಂದರು.

ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ, ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಪ್ರವೀಣ್ ಹನಗವಾಡಿ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಟ್ರಸ್ಟ್‌ನ ವೈದೇಹಿ, ಪತ್ರಕರ್ತರಾದ ಮಂಜುನಾಥ ಪೂಜಾರ್, ಚಂದ್ರಶೇಖರ್ ಬಿ.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಗ್ರಾಪಂ ಸದಸ್ಯರಾದ ಪರಶುರಾಮ, ವೀರೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕಟ್ಯಪ್ಪ, ಕವಿತಾ ಪರಶುರಾಮ, ಕೊಟ್ರಮ್ಮ, ಕೆ.ಜಿ.ಪ್ರಕಾಶ್, ಕೆ.ಜಿ.ಶಿವಣ್ಣ, ಡಿ.ಕೆ.ಹಾಲನಗೌಡ, ನಿಂಗಪ್ಪ, ಪಟೇಲ್ ರುದ್ರಗೌಡ, ಸದಾಶಿವಪ್ಪ, ಮುಖ್ಯ ಶಿಕ್ಷಕ ಶರಣ ಕುಮಾರ್ ಹೆಗಡೆ, ಶಿಕ್ಷಕರಾದ ಲೈಖಬಾನು, ಹೇಮಾ, ಪ್ರಭುಗೌಡ ಪಾಟೀಲ್, ಉಮೇಶಯ್ಯ, ಸೌಮ್ಯ ಇತರರಿದ್ದರು.

ಹರಿಹರ: ದಾನಿಗಳು ಸಹಕಾರ ನೀಡಿದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಅಬಿವೃದ್ಧಿ ಸಾಧಿಸಲು ಸಾಧ್ಯ ಎಂದು ದಾವಣಗೆರೆ ರೋಟರಿ ಕ್ಲಬ್ ಹಿರಿಯ ಸದಸ್ಯ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು, ಶಾಲೆಯ ಭೌತಿಕ ಕಟ್ಟಡ, ಸೌಲಭ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಎಂದರು.

ಈಗಿನ ಸರ್ಕಾರಿ ಶಾಲೆಗಳು ಸೌಲಭ್ಯ ಪೂರ್ಣವಾಗುತ್ತಿವೆ. ಇದರ ಜೊತೆಗೆ ದಾನಿಗಳು ಸಹಕಾರ ನೀಡಿದರೆ ಪರಿಪೂರ್ಣತೆ ಹೊಂದುತ್ತವೆ. ಆರ್ಥಿಕ ಶಕ್ತಿ ಇರುವವರು, ಹಳೆಯ ವಿದ್ಯಾರ್ಥಿ, ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಬೇಕು. ರೋಟರಿ ಸಂಸ್ಥೆಯಿಂದ ಆರಂಭಿಸಿದ ಪೊಲಿಯೋ ಲಸಿಕೆ ಕಾರ್ಯಕ್ರಮ ಇಂದು ದೊಡ್ಡ ಅಭಿಯಾನವಾಗಿ ಬೆಳೆದಿದ್ದು, ಭಾರತ ಪೊಲಿಯೋ ಮುಕ್ತವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಮಾರಕವಾದ ಈ ಕಾಯಿಲೆ ಜೀವಂತವಾಗಿದೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಜೀವನ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರು ಆದ್ಯತೆ ನೀಡಬೇಕೆಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಿ.ರಾಮಕೃಷ್ಣ ಮಾತನಾಡಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಲ್ಲದ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಕಾಣಬಹುದು. ಜೀವಂತಿಕೆ, ಜೀವನ ಕೌಶಲ್ಯ, ಬದುಕಿಗೆ ಹತ್ತಿರವಾಗುವ ಅಂಶಗಳು ಸರ್ಕಾರಿ ಶಾಲೆ ಮಕ್ಕಳಲ್ಲಿ ಬೆಳೆಯುತ್ತದೆ ಎಂದರು.

ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ, ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಪ್ರವೀಣ್ ಹನಗವಾಡಿ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಟ್ರಸ್ಟ್‌ನ ವೈದೇಹಿ, ಪತ್ರಕರ್ತರಾದ ಮಂಜುನಾಥ ಪೂಜಾರ್, ಚಂದ್ರಶೇಖರ್ ಬಿ.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಗ್ರಾಪಂ ಸದಸ್ಯರಾದ ಪರಶುರಾಮ, ವೀರೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕಟ್ಯಪ್ಪ, ಕವಿತಾ ಪರಶುರಾಮ, ಕೊಟ್ರಮ್ಮ, ಕೆ.ಜಿ.ಪ್ರಕಾಶ್, ಕೆ.ಜಿ.ಶಿವಣ್ಣ, ಡಿ.ಕೆ.ಹಾಲನಗೌಡ, ನಿಂಗಪ್ಪ, ಪಟೇಲ್ ರುದ್ರಗೌಡ, ಸದಾಶಿವಪ್ಪ, ಮುಖ್ಯ ಶಿಕ್ಷಕ ಶರಣ ಕುಮಾರ್ ಹೆಗಡೆ, ಶಿಕ್ಷಕರಾದ ಲೈಖಬಾನು, ಹೇಮಾ, ಪ್ರಭುಗೌಡ ಪಾಟೀಲ್, ಉಮೇಶಯ್ಯ, ಸೌಮ್ಯ ಇತರರಿದ್ದರು.

Intro:ದಾನಿಗಳ ಸಹಕಾರದಿಂದ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಸಾಧ್ಯ : ನಾರಾಯಣಸ್ವಾಮಿ

intro:
ಹರಿಹರ: ದಾನಿಗಳು ಸಹಕಾರ ನೀಡಿದರೆ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ದಾವಣಗೆರೆ ರೋಟರಿ ಕ್ಲಬ್ ಹಿರಿಯ ಸದಸ್ಯ ನಾರಾಯಣಸ್ವಾಮಿ ಹೇಳಿದರು.

body:
ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶ್ರೀಮತಿ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು, ಶಾಲೆಯ ಭೌತಿಕ ಕಟ್ಟಡ, ಸೌಲಭ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಎಂದರು.
ಈಗಿನ ಸರಕಾರಿ ಶಾಲೆಗಳು ಸೌಲಭ್ಯ ಪೂರ್ಣವಾಗುತ್ತಿವೆ. ಇದರ ಜೊತೆಗೆ ದಾನಿಗಳು ಸಹಕಾರ ನೀಡಿದರೆ ಪರಿಪೂರ್ಣತೆ ಹೊಂದುತ್ತವೆ. ಆರ್ಥಿಕ ಶಕ್ತಿ ಇರುವವರು, ಹಳೆಯ ವಿದ್ಯಾರ್ಥಿ, ಉದ್ಯಮಿಗಳು ಸರಕಾರಿ ಶಾಲೆಗಳನ್ನು ದತ್ತು ಪಡೆಯಬೇಕೆಂದರು.
ರೋಟರಿ ಸಂಸ್ಥೆಯಿಂದ ಆರಂಭಿಸಿದ ಪೊಲಿಯೊ ಲಸಿಕೆ ಕಾರ್ಯಕ್ರಮ ಇಂದು ದೊಡ್ಡ ಅಭಿಯಾನವಾಗಿ ಬೆಳೆದಿದೆ. ಇಂದು ಭಾರತ ಪೊಲಿಯೊ ಮುಕ್ತವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಮಾರಕವಾದ ಈ ಕಾಯಿಲೆ ಜೀವಂತವಾಗಿದೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಜೀವನ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರು ಆಧ್ಯತೆ ನೀಡಬೇಕೆಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ.ರಾಮಕೃಷ್ಣ ಮಾತನಾಡಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಲ್ಲದ ಅಂಶಗಳು ಸರಕಾರಿ ಶಾಲೆ ಮಕ್ಕಳಲ್ಲಿ ಕಾಣಬಹುದು. ಜೀವಂತಿಕೆ, ಜೀವನ ಕೌಶಲ್ಯ, ಬದುಕಿಗೆ ಹತ್ತಿರವಾಗುವ ಅಂಶಗಳು ಸರಕಾರಿ ಶಾಲೆ ಮಕ್ಕಳಲ್ಲಿ ಬೆಳೆಯುತ್ತದೆ ಎಂದರು.
ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ. ಮಾತನಾಡಿ, ಧೂಳೆಹೊಳೆಯ ಈ ಸರಕಾರಿ ಶಾಲೆ ತಾಲೂಕಿನಲ್ಲಿ ವಿಭಿನ್ನವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ಇಲ್ಲಿನ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಮಾದರಿಯಾಗಿದೆ ಎಂದರು.
ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ., ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಪ್ರವೀಣ್ ಹನಗವಾಡಿ ಅವರನ್ನು ಸತ್ಕರಿಸಲಾಯಿತು.

conclusion:
ಟ್ರಸ್ಟ್‌ನ ವೈದೇಹಿ, ಪತ್ರಕರ್ತರಾದ ಮಂಜುನಾಥ ಪೂಜಾರ್, ಚಂದ್ರಶೇಖರ್ ಬಿ.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಗ್ರಾಪಂ ಸದಸ್ಯರಾದ ಪರಶುರಾಮ, ವೀರೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕಟ್ಯಪ್ಪ, ಕವಿತಾ ಪರಶುರಾಮ, ಕೊಟ್ರಮ್ಮ, ಕೆ.ಜಿ.ಪ್ರಕಾಶ್, ಕೆ.ಜಿ.ಶಿವಣ್ಣ, ಡಿ.ಕೆ.ಹಾಲನಗೌಡ, ನಿಂಗಪ್ಪ, ಪಟೇಲ್ ರುದ್ರಗೌಡ, ಸದಾಶಿವಪ್ಪ, ಮುಖ್ಯ ಶಿಕ್ಷಕ ಶರಣ ಕುಮಾರ್ ಹೆಗಡೆ, ಶಿಕ್ಷಕರಾದ ಲೈಖಬಾನು, ಹೇಮಾ, ಪ್ರಭುಗೌಡ ಪಾಟೀಲ್, ಉಮೇಶಯ್ಯ, ಸೌಮ್ಯ ಇತರರಿದ್ದರು.



Body:ದಾನಿಗಳ ಸಹಕಾರದಿಂದ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಸಾಧ್ಯ : ನಾರಾಯಣಸ್ವಾಮಿ

intro:
ಹರಿಹರ: ದಾನಿಗಳು ಸಹಕಾರ ನೀಡಿದರೆ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ದಾವಣಗೆರೆ ರೋಟರಿ ಕ್ಲಬ್ ಹಿರಿಯ ಸದಸ್ಯ ನಾರಾಯಣಸ್ವಾಮಿ ಹೇಳಿದರು.

body:
ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶ್ರೀಮತಿ ವೈದೇಹಿ ನಾರಾಯಣಸ್ವಾಮಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ಬೆಲ್ಟ್, ಟೈ, ಬ್ಯಾಡ್ಜ್ ವಿತರಿಸಿ ಮಾತನಾಡಿದ ಅವರು, ಶಾಲೆಯ ಭೌತಿಕ ಕಟ್ಟಡ, ಸೌಲಭ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ ಎಂದರು.
ಈಗಿನ ಸರಕಾರಿ ಶಾಲೆಗಳು ಸೌಲಭ್ಯ ಪೂರ್ಣವಾಗುತ್ತಿವೆ. ಇದರ ಜೊತೆಗೆ ದಾನಿಗಳು ಸಹಕಾರ ನೀಡಿದರೆ ಪರಿಪೂರ್ಣತೆ ಹೊಂದುತ್ತವೆ. ಆರ್ಥಿಕ ಶಕ್ತಿ ಇರುವವರು, ಹಳೆಯ ವಿದ್ಯಾರ್ಥಿ, ಉದ್ಯಮಿಗಳು ಸರಕಾರಿ ಶಾಲೆಗಳನ್ನು ದತ್ತು ಪಡೆಯಬೇಕೆಂದರು.
ರೋಟರಿ ಸಂಸ್ಥೆಯಿಂದ ಆರಂಭಿಸಿದ ಪೊಲಿಯೊ ಲಸಿಕೆ ಕಾರ್ಯಕ್ರಮ ಇಂದು ದೊಡ್ಡ ಅಭಿಯಾನವಾಗಿ ಬೆಳೆದಿದೆ. ಇಂದು ಭಾರತ ಪೊಲಿಯೊ ಮುಕ್ತವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಮಾರಕವಾದ ಈ ಕಾಯಿಲೆ ಜೀವಂತವಾಗಿದೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಜೀವನ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರು ಆಧ್ಯತೆ ನೀಡಬೇಕೆಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ.ರಾಮಕೃಷ್ಣ ಮಾತನಾಡಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಇಲ್ಲದ ಅಂಶಗಳು ಸರಕಾರಿ ಶಾಲೆ ಮಕ್ಕಳಲ್ಲಿ ಕಾಣಬಹುದು. ಜೀವಂತಿಕೆ, ಜೀವನ ಕೌಶಲ್ಯ, ಬದುಕಿಗೆ ಹತ್ತಿರವಾಗುವ ಅಂಶಗಳು ಸರಕಾರಿ ಶಾಲೆ ಮಕ್ಕಳಲ್ಲಿ ಬೆಳೆಯುತ್ತದೆ ಎಂದರು.
ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ. ಮಾತನಾಡಿ, ಧೂಳೆಹೊಳೆಯ ಈ ಸರಕಾರಿ ಶಾಲೆ ತಾಲೂಕಿನಲ್ಲಿ ವಿಭಿನ್ನವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ಇಲ್ಲಿನ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಮಾದರಿಯಾಗಿದೆ ಎಂದರು.
ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ., ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತ ಪ್ರವೀಣ್ ಹನಗವಾಡಿ ಅವರನ್ನು ಸತ್ಕರಿಸಲಾಯಿತು.

conclusion:
ಟ್ರಸ್ಟ್‌ನ ವೈದೇಹಿ, ಪತ್ರಕರ್ತರಾದ ಮಂಜುನಾಥ ಪೂಜಾರ್, ಚಂದ್ರಶೇಖರ್ ಬಿ.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ನಿಜಲಿಂಗಪ್ಪ, ಗ್ರಾಪಂ ಸದಸ್ಯರಾದ ಪರಶುರಾಮ, ವೀರೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕಟ್ಯಪ್ಪ, ಕವಿತಾ ಪರಶುರಾಮ, ಕೊಟ್ರಮ್ಮ, ಕೆ.ಜಿ.ಪ್ರಕಾಶ್, ಕೆ.ಜಿ.ಶಿವಣ್ಣ, ಡಿ.ಕೆ.ಹಾಲನಗೌಡ, ನಿಂಗಪ್ಪ, ಪಟೇಲ್ ರುದ್ರಗೌಡ, ಸದಾಶಿವಪ್ಪ, ಮುಖ್ಯ ಶಿಕ್ಷಕ ಶರಣ ಕುಮಾರ್ ಹೆಗಡೆ, ಶಿಕ್ಷಕರಾದ ಲೈಖಬಾನು, ಹೇಮಾ, ಪ್ರಭುಗೌಡ ಪಾಟೀಲ್, ಉಮೇಶಯ್ಯ, ಸೌಮ್ಯ ಇತರರಿದ್ದರು.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.