ETV Bharat / state

ಲಾಕ್​ಡೌನ್ ಬಳಿಕ ಕೆಎಸ್​ಆರ್​ಟಿಸಿಗೆ ₹1500 ಕೋಟಿ ನಷ್ಟ.. KSRTC ಅಧ್ಯಕ್ಷ ಚಂದ್ರಪ್ಪ

author img

By

Published : Sep 18, 2020, 6:08 PM IST

Updated : Sep 18, 2020, 7:25 PM IST

ಲಾಕ್​ಡೌನ್​ ವೇಳೆ ಮೂರು ತಿಂಗಳು ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಭಾರೀ ನಷ್ಟ ಸಂಭವಿಸಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ಕಾರಣದಿಂದ ಸಂಬಳ ನೀಡಲು ಸಾಧ್ಯವಾಗಿದೆ. ಈ ತಿಂಗಳ ವೇತನ ಕೊಡಲು ಕಷ್ಟವಾಗಿದೆ. ಉತ್ತಮ ಸೇವೆ ಜನರಿಗೆ ನೀಡುವುದಷ್ಟೇ ನಮ್ಮ ಉದ್ದೇಶ..

1500 crores loss to KSRTC after lockdown: Chandrappa
ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ

ದಾವಣಗೆರೆ : ಕೊರೊನಾ ಸೋಂಕು ಬಂದಾಗಿನಿಂದ ಈವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1500 ಕೋಟಿ ರೂ. ನಷ್ಟವಾಗಿದೆ. ರಾಜ್ಯ ಸರ್ಕಾರ ₹1350 ಕೋಟಿ ಬಿಡುಗಡೆ ಮಾಡಿದ್ದರಿಂದಾಗಿ ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ವೇತನ ನೀಡಲಾಗಿದೆ. ಈ ಹಿಂದೆ "ನೋ ಲಾಸ್ ನೋ ಪ್ರಾಫಿಟ್'' ಆಗಿತ್ತು. ಆದರೆ, ಈಗ ನಷ್ಟದಲ್ಲಿ ನಡೆಯುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗ ಸಾರಿಗೆ ಬಸ್​ಗಳ ಓಡಾಟ ಆರಂಭವಾಗಿದ್ದರೂ ಡೀಸೆಲ್​ಗೆ ಮಾತ್ರ ಆಗುತ್ತಿದೆ. ನೌಕರರ ಸಂಬಳ, ಇತರೆ ಖರ್ಚು ಭರಿಸಲು ಸಾಕಾಗುತ್ತಿಲ್ಲ. ಹೊಸ ರೂಟ್ ಹಾಗೂ ಹೊಸ ಬಸ್​ಗಳ ಖರೀದಿ ಸದ್ಯಕ್ಕೆ ಮಾಡುವುದಿಲ್ಲ. ಶೇ. 50ರಷ್ಟು ಆದಾಯ ಬರುತ್ತಿದ್ದು, ಇನ್ನು ಮುಂದೆ ಬಸ್​ಗಳಲ್ಲಿ ಜನರ ಓಡಾಟಕ್ಕೆ ಮಿತಿ ಇರಲ್ಲ ಎಂದು ಹೇಳಿದರು.

ಲಾಕ್​ಡೌನ್​ ವೇಳೆ ಮೂರು ತಿಂಗಳು ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಭಾರೀ ನಷ್ಟ ಸಂಭವಿಸಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ಕಾರಣದಿಂದ ಸಂಬಳ ನೀಡಲು ಸಾಧ್ಯವಾಗಿದೆ. ಈ ತಿಂಗಳ ವೇತನ ಕೊಡಲು ಕಷ್ಟವಾಗಿದೆ. ಉತ್ತಮ ಸೇವೆ ಜನರಿಗೆ ನೀಡುವುದಷ್ಟೇ ನಮ್ಮ ಉದ್ದೇಶ. ಖಾಸಗಿ ಬಸ್​ಗಳ ರೀತಿ ಲಾಭದ ದೃಷ್ಟಿಕೋನ ಇಟ್ಟುಕೊಂಡು ಮಾಡಲಾಗುತ್ತಿಲ್ಲ. ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಪ್ರಯಾಣಿಕರು ಪ್ರಯಾಣಿಸಬೇಕು ಎಂದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ

ರಾಜ್ಯದಲ್ಲಿ‌ ಕೆಲವೆಡೆ ಹೊರತುಪಡಿಸಿದ್ರೆ ಎಲ್ಲಾ ಕಡೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಆ ಭಾಗಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರೈತರು, ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಲೇ, ಆಂಧ್ರಪ್ರದೇಶ, ತಮಿಳುನಾಡಿಗೆ ಬಸ್​ಗಳ ಸಂಚಾರ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯದಿಂದ ಮಹಾರಾಷ್ಟ್ರಕ್ಕೂ ಬಸ್​ಗಳ ಸಂಚಾರ ಆರಂಭವಾಗಲಿದೆ ಎಂದರು.

ದಾವಣಗೆರೆ : ಕೊರೊನಾ ಸೋಂಕು ಬಂದಾಗಿನಿಂದ ಈವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1500 ಕೋಟಿ ರೂ. ನಷ್ಟವಾಗಿದೆ. ರಾಜ್ಯ ಸರ್ಕಾರ ₹1350 ಕೋಟಿ ಬಿಡುಗಡೆ ಮಾಡಿದ್ದರಿಂದಾಗಿ ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ವೇತನ ನೀಡಲಾಗಿದೆ. ಈ ಹಿಂದೆ "ನೋ ಲಾಸ್ ನೋ ಪ್ರಾಫಿಟ್'' ಆಗಿತ್ತು. ಆದರೆ, ಈಗ ನಷ್ಟದಲ್ಲಿ ನಡೆಯುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗ ಸಾರಿಗೆ ಬಸ್​ಗಳ ಓಡಾಟ ಆರಂಭವಾಗಿದ್ದರೂ ಡೀಸೆಲ್​ಗೆ ಮಾತ್ರ ಆಗುತ್ತಿದೆ. ನೌಕರರ ಸಂಬಳ, ಇತರೆ ಖರ್ಚು ಭರಿಸಲು ಸಾಕಾಗುತ್ತಿಲ್ಲ. ಹೊಸ ರೂಟ್ ಹಾಗೂ ಹೊಸ ಬಸ್​ಗಳ ಖರೀದಿ ಸದ್ಯಕ್ಕೆ ಮಾಡುವುದಿಲ್ಲ. ಶೇ. 50ರಷ್ಟು ಆದಾಯ ಬರುತ್ತಿದ್ದು, ಇನ್ನು ಮುಂದೆ ಬಸ್​ಗಳಲ್ಲಿ ಜನರ ಓಡಾಟಕ್ಕೆ ಮಿತಿ ಇರಲ್ಲ ಎಂದು ಹೇಳಿದರು.

ಲಾಕ್​ಡೌನ್​ ವೇಳೆ ಮೂರು ತಿಂಗಳು ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಭಾರೀ ನಷ್ಟ ಸಂಭವಿಸಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ಕಾರಣದಿಂದ ಸಂಬಳ ನೀಡಲು ಸಾಧ್ಯವಾಗಿದೆ. ಈ ತಿಂಗಳ ವೇತನ ಕೊಡಲು ಕಷ್ಟವಾಗಿದೆ. ಉತ್ತಮ ಸೇವೆ ಜನರಿಗೆ ನೀಡುವುದಷ್ಟೇ ನಮ್ಮ ಉದ್ದೇಶ. ಖಾಸಗಿ ಬಸ್​ಗಳ ರೀತಿ ಲಾಭದ ದೃಷ್ಟಿಕೋನ ಇಟ್ಟುಕೊಂಡು ಮಾಡಲಾಗುತ್ತಿಲ್ಲ. ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಪ್ರಯಾಣಿಕರು ಪ್ರಯಾಣಿಸಬೇಕು ಎಂದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ

ರಾಜ್ಯದಲ್ಲಿ‌ ಕೆಲವೆಡೆ ಹೊರತುಪಡಿಸಿದ್ರೆ ಎಲ್ಲಾ ಕಡೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಆ ಭಾಗಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರೈತರು, ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಲೇ, ಆಂಧ್ರಪ್ರದೇಶ, ತಮಿಳುನಾಡಿಗೆ ಬಸ್​ಗಳ ಸಂಚಾರ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯದಿಂದ ಮಹಾರಾಷ್ಟ್ರಕ್ಕೂ ಬಸ್​ಗಳ ಸಂಚಾರ ಆರಂಭವಾಗಲಿದೆ ಎಂದರು.

Last Updated : Sep 18, 2020, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.