ಕುಕ್ಕೆ ಸುಬ್ರಮಣ್ಯ: ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲದ 18 ವರ್ಷ ವಯಸ್ಸಿನ ಆನೆ ಯಶಸ್ವಿನಿಗೆ ಅರಣ್ಯ ಇಲಾಖೆಯಿಂದ ದೇವಸ್ಥಾನದ ಹೆಸರಿಗೆ ಮಾಲೀಕತ್ವ ಪ್ರಮಾಣ ಪತ್ರ ದೊರೆತಿರುವುದಾಗಿ ತಿಳಿದು ಬಂದಿದೆ.
![Yashasvini elephant Ownership Certificate Kukke Subrahmanya temple Karnataka forest department ಕುಕ್ಕೆ ಸುಬ್ರಹ್ಮಣ್ಯದ ಯಶಸ್ವಿನಿ ಆನೆ ಮಾಲಿಕತ್ವ ಪ್ರಮಾಣ ಪತ್ರ ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಅರಣ್ಯ ಇಲಾಖೆಯ ಆದೇಶ ಪತ್ರ](https://etvbharatimages.akamaized.net/etvbharat/prod-images/kn-dk-04-kukkeelephant-av-pho-kac10008_14102022234748_1410f_1665771468_795.jpg)
ಕಳೆದ ಸುಮಾರು 18 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಈ ಆನೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳವರೆಗೆ ಮಾಲೀಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
![Yashasvini elephant Ownership Certificate Kukke Subrahmanya temple Karnataka forest department ಕುಕ್ಕೆ ಸುಬ್ರಹ್ಮಣ್ಯದ ಯಶಸ್ವಿನಿ ಆನೆ ಮಾಲಿಕತ್ವ ಪ್ರಮಾಣ ಪತ್ರ ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಅರಣ್ಯ ಇಲಾಖೆಯ ಆದೇಶ ಪತ್ರ](https://etvbharatimages.akamaized.net/etvbharat/prod-images/kn-dk-04-kukkeelephant-av-pho-kac10008_14102022234748_1410f_1665771468_233.jpg)
ಕೆಲ ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ ಆನಂದ ಸಿಂಗ್ ಅವರು ಈ ಆನೆಯನ್ನು ಕೊಡಮಾಡಿದ್ದರು. ಅರಣ್ಯ ಇಲಾಖೆಯಿಂದ ಲಭ್ಯವಾಗುವ ಈ ಅನುಮತಿ ಪತ್ರಕ್ಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಅವರು ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ.
ಓದಿ: ಕಾಡಿನಿಂದ ಬಂದ ಆನೆಯೊಂದನ್ನು ಮರಳಿ ಕಾಡಿಗಟ್ಟಿದ ನಾಯಿಗಳು.. ವಿಡಿಯೋ