ETV Bharat / state

ಕೊರೊನಾ ಎಫೆಕ್ಟ್: ಆನ್​ಲೈನ್​ ಹೋಟೆಲ್ ಆರಂಭಿಸಿ ಯಶಸ್ವಿಯಾದ ತುಳು ಕಾಮಿಡಿ ಆ್ಯಕ್ಟರ್​ - Tulu Comedy Artist vismaya vinayak opened online hotel

ಕೊರೊನಾ ವೈರಸ್ ಹಾವಳಿಯ ಬಳಿಕ ಸಿನಿಮಾ ರಂಗದ ಕಲೆಗಳಿಗೆ ದುಷ್ಪರಿಣಾಮ ಬೀರಿದೆ. ಬಡ ಮತ್ತು ಮಧ್ಯಮ ವರ್ಗದ ಕಲಾವಿದರು ಸಿನಿಮಾ ಶೂಟಿಂಗ್ ಇಲ್ಲದೇ ತೀವ್ರ ಆರ್ಥಿಕ ಮುಗ್ಗಟ್ಟಿಗೊಳಗಾಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿಯೂ ಕೋಸ್ಟಲ್ ವುಡ್​ನಲ್ಲಿ ನೂರಾರು ಕಲಾವಿದರು ಸಿನಿಮಾ ರಂಗವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್​ಡೌನ್​ ಸಮಯದಲ್ಲಿ ಶೂಟಿಂಗ್ ಇಲ್ಲದೇ ಇವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ..

tulu-comedy-artist-vismaya-vinayak-opened-online-hotel
ಖ್ಯಾತ ಕಲಾವಿದ ವಿಸ್ಮಯ ವಿನಾಯಕ್
author img

By

Published : Jun 16, 2021, 6:45 PM IST

Updated : Jun 16, 2021, 8:11 PM IST

ಮಂಗಳೂರು: ಕೊರೊನಾ ವೈರಸ್​ನಿಂದಾಗಿ ಎಲ್ಲ ರಂಗದ ಮೇಲೂ ದುಷ್ಪರಿಣಾಮ ಬೀರಿದೆ. ಅದರಲ್ಲಿಯೂ ಸಿನಿಮಾ ಮತ್ತು ರಂಗಕಲಾವಿದರ ಬದುಕು ಬೀದಿಗೆ ಬಂದಿದೆ. ಈ ಸಂಕಷ್ಟದ ಸಂದರ್ಭದಲ್ಲಿ ತುಳು ಕಲಾವಿದರೊಬ್ಬರು ಆನ್​ಲೈನ್​ ಹೋಟೆಲ್ ವ್ಯಾಪಾರ ಆರಂಭಿಸಿ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ.

ಕೊರೊನಾ ವೈರಸ್ ಹಾವಳಿಯ ಬಳಿಕ ಸಿನಿಮಾ ರಂಗದ ಕಲೆಗಳಿಗೆ ದುಷ್ಪರಿಣಾಮ ಬೀರಿದೆ. ಬಡ ಮತ್ತು ಮಧ್ಯಮ ವರ್ಗದ ಕಲಾವಿದರು ಸಿನಿಮಾ ಶೂಟಿಂಗ್ ಇಲ್ಲದೇ ತೀವ್ರ ಆರ್ಥಿಕ ಮುಗ್ಗಟ್ಟಿಗೊಳಗಾಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿಯೂ ಕೋಸ್ಟಲ್ ವುಡ್​ನಲ್ಲಿ ನೂರಾರು ಕಲಾವಿದರು ಸಿನಿಮಾ ರಂಗವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್​ಡೌನ್​ ಸಮಯದಲ್ಲಿ ಶೂಟಿಂಗ್ ಇಲ್ಲದೇ ಇವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ. ಇದರ ನಡುವೆ ತುಳು ಸಿನಿರಂಗದ ಖ್ಯಾತ ಕಲಾವಿದ ವಿಸ್ಮಯ ವಿನಾಯಕ್ ಅವರು ಮಾಡಿದ ಹೊಸಪ್ರಯತ್ನ ಅವರನ್ನು ಈ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದಿದೆ.

ವೈರಸ್​ ಹಾವಳಿ ಆರಂಭವಾದ ಬಳಿಕ ಮುಂದಿನ ಸಂಕಷ್ಟದ ಪರಿಸ್ಥಿತಿ ಊಹಿಸಿ ಬೈಯದ ಬಡವು ( ಸಂಜೆಯ ಹಸಿವು) ಎಂಬ ಹೆಸರಿನಲ್ಲಿ ಆನ್​ಲೈನ್​ ಹೋಟೆಲ್ ಆರಂಭಿಸಿದ್ದರು. ಇದು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಬಂದ ಕೊರೊನಾ 2ನೇ ಅಲೆಯಿಂದಾಗಿ ಸಂಪೂರ್ಣ ಲಾಕ್​ಡೌನ್​ ಜಾರಿಯಾಯಿತು. ಈ ಸಂದರ್ಭದಲ್ಲಿ ಅವರು ಆನ್​ಲೈನ್​ ಹೋಟೆಲ್ ಆರಂಭಿಸಿದರು. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಪೋನ್​ನಲ್ಲಿ ಬರುವ ಆರ್ಡರ್​ಗಳಿಗೆ ತಕ್ಕಂತೆ ಹೋಂ ಡೆಲಿವರಿ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಖ್ಯಾತ ಕಲಾವಿದ ವಿಸ್ಮಯ ವಿನಾಯಕ್ ಮಾತನಾಡಿದ್ದಾರೆ

ಇವರ ಪ್ರಯತ್ನ ಇತರ ಕಲಾವಿದರಿಗೂ ಮಾದರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇದೇ ರೀತಿಯ ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಪ್ರಯತ್ನಿಸಿದರೆ ಸಮಸ್ಯೆಯಲ್ಲಿರುವ ಕಲಾವಿದರಿಗೆ ತಕ್ಕಮಟ್ಟಿನ ಸಹಾಯವಾಗಬಹುದು ಎನ್ನುತ್ತಾರೆ ಇವರೊಂದಿಗೆ ಕೈಜೋಡಿಸಿರುವ ಕಲಾವಿದ ಗುರುಪ್ರಸಾದ್.

ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್​​ಗೆ ಅರುಣ್ ಸಿಂಗ್ ಆಗಮನ

ಮಂಗಳೂರು: ಕೊರೊನಾ ವೈರಸ್​ನಿಂದಾಗಿ ಎಲ್ಲ ರಂಗದ ಮೇಲೂ ದುಷ್ಪರಿಣಾಮ ಬೀರಿದೆ. ಅದರಲ್ಲಿಯೂ ಸಿನಿಮಾ ಮತ್ತು ರಂಗಕಲಾವಿದರ ಬದುಕು ಬೀದಿಗೆ ಬಂದಿದೆ. ಈ ಸಂಕಷ್ಟದ ಸಂದರ್ಭದಲ್ಲಿ ತುಳು ಕಲಾವಿದರೊಬ್ಬರು ಆನ್​ಲೈನ್​ ಹೋಟೆಲ್ ವ್ಯಾಪಾರ ಆರಂಭಿಸಿ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ.

ಕೊರೊನಾ ವೈರಸ್ ಹಾವಳಿಯ ಬಳಿಕ ಸಿನಿಮಾ ರಂಗದ ಕಲೆಗಳಿಗೆ ದುಷ್ಪರಿಣಾಮ ಬೀರಿದೆ. ಬಡ ಮತ್ತು ಮಧ್ಯಮ ವರ್ಗದ ಕಲಾವಿದರು ಸಿನಿಮಾ ಶೂಟಿಂಗ್ ಇಲ್ಲದೇ ತೀವ್ರ ಆರ್ಥಿಕ ಮುಗ್ಗಟ್ಟಿಗೊಳಗಾಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿಯೂ ಕೋಸ್ಟಲ್ ವುಡ್​ನಲ್ಲಿ ನೂರಾರು ಕಲಾವಿದರು ಸಿನಿಮಾ ರಂಗವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್​ಡೌನ್​ ಸಮಯದಲ್ಲಿ ಶೂಟಿಂಗ್ ಇಲ್ಲದೇ ಇವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ. ಇದರ ನಡುವೆ ತುಳು ಸಿನಿರಂಗದ ಖ್ಯಾತ ಕಲಾವಿದ ವಿಸ್ಮಯ ವಿನಾಯಕ್ ಅವರು ಮಾಡಿದ ಹೊಸಪ್ರಯತ್ನ ಅವರನ್ನು ಈ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದಿದೆ.

ವೈರಸ್​ ಹಾವಳಿ ಆರಂಭವಾದ ಬಳಿಕ ಮುಂದಿನ ಸಂಕಷ್ಟದ ಪರಿಸ್ಥಿತಿ ಊಹಿಸಿ ಬೈಯದ ಬಡವು ( ಸಂಜೆಯ ಹಸಿವು) ಎಂಬ ಹೆಸರಿನಲ್ಲಿ ಆನ್​ಲೈನ್​ ಹೋಟೆಲ್ ಆರಂಭಿಸಿದ್ದರು. ಇದು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಬಂದ ಕೊರೊನಾ 2ನೇ ಅಲೆಯಿಂದಾಗಿ ಸಂಪೂರ್ಣ ಲಾಕ್​ಡೌನ್​ ಜಾರಿಯಾಯಿತು. ಈ ಸಂದರ್ಭದಲ್ಲಿ ಅವರು ಆನ್​ಲೈನ್​ ಹೋಟೆಲ್ ಆರಂಭಿಸಿದರು. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಪೋನ್​ನಲ್ಲಿ ಬರುವ ಆರ್ಡರ್​ಗಳಿಗೆ ತಕ್ಕಂತೆ ಹೋಂ ಡೆಲಿವರಿ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಖ್ಯಾತ ಕಲಾವಿದ ವಿಸ್ಮಯ ವಿನಾಯಕ್ ಮಾತನಾಡಿದ್ದಾರೆ

ಇವರ ಪ್ರಯತ್ನ ಇತರ ಕಲಾವಿದರಿಗೂ ಮಾದರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇದೇ ರೀತಿಯ ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಪ್ರಯತ್ನಿಸಿದರೆ ಸಮಸ್ಯೆಯಲ್ಲಿರುವ ಕಲಾವಿದರಿಗೆ ತಕ್ಕಮಟ್ಟಿನ ಸಹಾಯವಾಗಬಹುದು ಎನ್ನುತ್ತಾರೆ ಇವರೊಂದಿಗೆ ಕೈಜೋಡಿಸಿರುವ ಕಲಾವಿದ ಗುರುಪ್ರಸಾದ್.

ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್​​ಗೆ ಅರುಣ್ ಸಿಂಗ್ ಆಗಮನ

Last Updated : Jun 16, 2021, 8:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.