ETV Bharat / state

ಆಹಾರ ಖಾದ್ಯದಲ್ಲಿ ಜೀವಂತ ಹುಳು ಪತ್ತೆ: ಚಿಕ್ ಕಿಂಗ್​ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

author img

By

Published : Feb 2, 2021, 4:45 PM IST

'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆ ಮೇಲೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ರು. ಅಲ್ಲದೆ ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲಾಯಿತು‌.

ಚಿಕ್ ಕಿಂಗ್​ಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಚಿಕ್ ಕಿಂಗ್​ಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಮಂಗಳೂರು: ಮಹಿಳೆಯರು ಖರೀದಿಸಿರುವ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿರುವ ಹಿನ್ನೆಲೆ ನಗರದ 'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆ ಮೇಲೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ ಕಿಂಗ್​ ಸಂಸ್ಥೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಆರು ಮಂದಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಯಿತು. ಅಲ್ಲದೆ ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲಾಯಿತು‌.

ಓದಿ: ಸಿಸಿಬಿ ವಶದಲ್ಲಿದ್ದ ಐಷಾರಾಮಿ ಕಾರು ನಾಪತ್ತೆ: ಅಧಿಕಾರಿಯೇ ಮಾರಾಟ ಮಾಡಿರುವ ಶಂಕೆ!

‘ಚಿಕ್‌ ಕಿಂಗ್ ಇಟ್ಸ್ ಮೈ ಚಾಯ್ಸ್​​’ ಆಹಾರ ಸಂಸ್ಥೆಯಿಂದ ಲೇಡಿಹಿಲ್‌ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬುವರು ಶನಿವಾರ ಸಂಜೆ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಿಮ್ರಾನ್​​ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ದಿಢೀರ್ ಜೀವಂತ ಹುಳುವೊಂದು ಗೋಚರಿಸಿದೆ. ಇದರಿಂದ ಇಡೀ ಕುಟುಂಬವೇ ಆತಂಕ್ಕೀಡಾಗಿದೆ. ಈ ಬಗ್ಗೆ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರು: ಮಹಿಳೆಯರು ಖರೀದಿಸಿರುವ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿರುವ ಹಿನ್ನೆಲೆ ನಗರದ 'ಚಿಕ್ ಕಿಂಗ್ ಇಟ್ಸ್ ಮೈ ಚಾಯ್ಸ್' ಸಂಸ್ಥೆ ಮೇಲೆ ಇಂದು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ ಕಿಂಗ್​ ಸಂಸ್ಥೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಆರು ಮಂದಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಯಿತು. ಅಲ್ಲದೆ ಸಂಸ್ಥೆಯಲ್ಲಿದ್ದ ಕಳಪೆ ಗುಣಮಟ್ಟದ, ಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮುಟ್ಟುಗೋಲು ಹಾಕಲಾಯಿತು‌.

ಓದಿ: ಸಿಸಿಬಿ ವಶದಲ್ಲಿದ್ದ ಐಷಾರಾಮಿ ಕಾರು ನಾಪತ್ತೆ: ಅಧಿಕಾರಿಯೇ ಮಾರಾಟ ಮಾಡಿರುವ ಶಂಕೆ!

‘ಚಿಕ್‌ ಕಿಂಗ್ ಇಟ್ಸ್ ಮೈ ಚಾಯ್ಸ್​​’ ಆಹಾರ ಸಂಸ್ಥೆಯಿಂದ ಲೇಡಿಹಿಲ್‌ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬುವರು ಶನಿವಾರ ಸಂಜೆ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಿಮ್ರಾನ್​​ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದ್ದಾರೆ. ಈ ಸಂದರ್ಭ ಚಿಕನ್ ಖಾದ್ಯದಲ್ಲಿ ದಿಢೀರ್ ಜೀವಂತ ಹುಳುವೊಂದು ಗೋಚರಿಸಿದೆ. ಇದರಿಂದ ಇಡೀ ಕುಟುಂಬವೇ ಆತಂಕ್ಕೀಡಾಗಿದೆ. ಈ ಬಗ್ಗೆ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.