ETV Bharat / state

ಸಂಸದರ ಈ ಆದರ್ಶ ಗ್ರಾಮದಲ್ಲಿ ಕನಿಷ್ಠ ಸೌಲಭ್ಯಗಳೇ ಮರೀಚಿಕೆ... ಕಣ್ತೆರೆದು ನೋಡ್ತಾರಾ ಕಟೀಲ್​? - ದಕ್ಷಿಣ ಕನ್ನಡ ಜಿಲ್ಲೆ

ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್​ಕುಮಾರ್ ಕಟೀಲ್​ ಅವರು ದತ್ತು ತೆಗೆದುಕೊಂಡಿದ್ದ ಆದರ್ಶ ಗ್ರಾಮ ಈಗ ಸೌಲಭ್ಯಗಳ ಕೊರತೆಯಿಂದ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ರಸ್ತೆ ಸಂಪರ್ಕವಿಲ್ಲದೇ ಈಗಲೂ ಗರ್ಭಿಣಿಯರು, ವೃದ್ಧರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಂಸದರ ದತ್ತು ಗ್ರಾಮ ಬಳ್ಪಾದಿಂದ ವೃದ್ಧರನ್ನು ಆಸ್ಪತ್ರಗೆ ಸಾಗುತ್ತಿರುವುದು
author img

By

Published : Sep 24, 2019, 10:36 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್​ ಅವರು ಆದರ್ಶ ಗ್ರಾಮಯೋಜಯಡಿ ದತ್ತು ಪಡೆದಿದ್ದಾರೆ. ಆದ್ರೆ, ಇಂದಿಗೂ ಇಲ್ಲಿನ ಜನರಿಗೆ ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕಾಡು ದಾರಿಯಾದ ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್​ನಂತಹ ಕನಿಷ್ಠ ಸೌಲಭ್ಯಗಳು ಗಗನಕುಸುಮವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.

Lack of facilities for the adopted village of MPs
ಸಂಸದರ ದತ್ತು ಗ್ರಾಮ ಬಳ್ಪದಿಂದ ವೃದ್ಧರನ್ನು ಆಸ್ಪತ್ರೆಗೆ ಸಾಗುತ್ತಿರುವುದು

ಇಲ್ಲಿನ ಪಡಿಕ್ಕಲಾಯ ಗ್ರಾಮದ ನಿವಾಸಿ ರಾಮಣ್ಣ ಪೂಜಾರಿಯವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು‌ ಆಸ್ಪತ್ರೆಗೆ ಕರೆದೊಯ್ಯಲು ಮನೆವರೆಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಕುಟುಂಬಸ್ಥರು, ಸ್ಥಳೀಯರು ಕಾಡು ದಾರಿಯಲ್ಲಿ ಹೊತ್ತುಕೊಂಡೇ ಸಾಗಿದ್ದಾರೆ. ನಂತರ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಮುಖ್ಯ ಪೇಟೆಯಿಂದ 3 ಕಿ.ಮೀ ದೂರದಲ್ಲಿದೆ. ಗರ್ಭಿಣಿಯರು, ರೋಗಿಗಳು ಮುಂತಾದವರು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಇನ್ನಾದರೂ ಸಂಸದ ನಳಿನ್ ಕುಮಾರ್ ಅವರು ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್​ ಅವರು ಆದರ್ಶ ಗ್ರಾಮಯೋಜಯಡಿ ದತ್ತು ಪಡೆದಿದ್ದಾರೆ. ಆದ್ರೆ, ಇಂದಿಗೂ ಇಲ್ಲಿನ ಜನರಿಗೆ ಮೂಲ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕಾಡು ದಾರಿಯಾದ ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್​ನಂತಹ ಕನಿಷ್ಠ ಸೌಲಭ್ಯಗಳು ಗಗನಕುಸುಮವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.

Lack of facilities for the adopted village of MPs
ಸಂಸದರ ದತ್ತು ಗ್ರಾಮ ಬಳ್ಪದಿಂದ ವೃದ್ಧರನ್ನು ಆಸ್ಪತ್ರೆಗೆ ಸಾಗುತ್ತಿರುವುದು

ಇಲ್ಲಿನ ಪಡಿಕ್ಕಲಾಯ ಗ್ರಾಮದ ನಿವಾಸಿ ರಾಮಣ್ಣ ಪೂಜಾರಿಯವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು‌ ಆಸ್ಪತ್ರೆಗೆ ಕರೆದೊಯ್ಯಲು ಮನೆವರೆಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಕುಟುಂಬಸ್ಥರು, ಸ್ಥಳೀಯರು ಕಾಡು ದಾರಿಯಲ್ಲಿ ಹೊತ್ತುಕೊಂಡೇ ಸಾಗಿದ್ದಾರೆ. ನಂತರ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಮುಖ್ಯ ಪೇಟೆಯಿಂದ 3 ಕಿ.ಮೀ ದೂರದಲ್ಲಿದೆ. ಗರ್ಭಿಣಿಯರು, ರೋಗಿಗಳು ಮುಂತಾದವರು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಇನ್ನಾದರೂ ಸಂಸದ ನಳಿನ್ ಕುಮಾರ್ ಅವರು ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Intro:ಮಂಗಳೂರು: ದ.ಕ.ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಅವರ ಆದರ್ಶ ಗ್ರಾಮದಡಿ ದತ್ತು ಪಡೆದಿದ್ದಾರೆ. ಆದರೆ ಈಗಲೂ ಇಲ್ಲಿನ ಜನರು ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಕಾಡು ದಾರಿಯಾದ ಈ ಬಳ್ಪ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಸರಿಯಾದ ವಿದ್ಯುತ್ ವ್ಯವಸ್ಥೆಗಳಿಲ್ಲ.

ಇತ್ತೀಚಿಗೆ ಈ ಗ್ರಾಮದ ಪಡಿಕ್ಕಲಾಯ ಎಂಬಲ್ಲಿನ ರಾಮಣ್ಣ ಪೂಜಾರಿಯವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು‌ ಆಸ್ಪತ್ರೆಗೆ ಸಾಗಿಸಲು ಮನೆತನಕ ವಾಹನ ತರಲು ರಸ್ತೆ ಸಂಪರ್ಕದ ವ್ಯವಸ್ಥೆ ಇಲ್ಲದಿರುವುದರಿಂದ ಅವರ ಕುಟುಂಬಸ್ಥರು, ಸ್ಥಳೀಯರು ಕಾಡು ದಾರಿಯಲ್ಲಿ ಹೊತ್ತುಕೊಂಡೇ ಸಾಗಿದ ಘಟನೆ ನಡೆದಿದೆ. ಆ ಬಳಿಕ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

Body:ಈ ಗ್ರಾಮದಲ್ಲಿ ಸುಮಾರು 30ರಷ್ಟು ಮನೆಗಳಿದ್ದು, ಮುಖ್ಯ ಪೇಟೆವರೆಗೂ 3ಕಿ.ಮೀ.ವರೆಗೆ ಯಾರಿಗೂ ಸರಿಯಾದ ರಸ್ತೆಸಂಪರ್ಕಗಳಿಲ್ಲ. ಗರ್ಭಿಣಿಯರು, ರೋಗಿಗಳು ಮುಂತಾದವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಇದೇ ರೀತಿಯ ಸಂಕಷ್ಟ ಇಲ್ಲಿನ ಜನರಿಗೆ ಎದುರಾಗುತ್ತದೆ.

ಇನ‌್ನಾದರೂ ಸಂಸದ ನಳಿನ್ ಕುಮಾರ್ ಈ ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡುವತ್ತ ಗಮನ ಹರಿಸಲಿ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.