ಮಂಗಳೂರು : ಭಾರೀ ಮಳೆಯ ಪರಿಣಾಮ ನಗರದ ಪಡೀಲು ಬಳಿಯ ಬೈಪಾಸ್ ರೈಲು ಮಾರ್ಗದಲ್ಲಿ ಇಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಗುಡ್ಡ ಕುಸಿತವಾಗಿದೆ.
![manglore](https://etvbharatimages.akamaized.net/etvbharat/prod-images/kn-mng-04-lands-slip-railway-road-script-ka10015_20092020195426_2009f_1600611866_489.jpg)
15 ಮೀ. ಉದ್ದ ಹಾಗೂ 15 ಮೀ. ಅಗಲದಲ್ಲಿ ರೈಲು ಹಳಿಯ ಮೇಲೆ ಮಣ್ಣು ಕುಸಿತವಾಗಿದೆ. ಪರಿಣಾಮ ವಯಾ ಮೈಸೂರು ಮಾರ್ಗದ ಕೊಂಕಣ ರೈಲ್ವೆ ಬೈಪಾಸ್ ಮಾರ್ಗದಲ್ಲಿ ಸಂಚಾರ ಅಡಚಣೆ ಸಂಭವಿಸಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ.
ಕಾರವಾರ-ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಸಂಚರಿಸಲಿದೆ ಎಂದು ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.