ETV Bharat / state

ಅಷ್ಟಮಧಗಳನ್ನು ಬಿಟ್ಟು ಹೊರಬಂದಾಗ ಜೀವನ ಸಾರ್ಥಕ: ಸ್ವಾಮೀಜಿ

author img

By

Published : Sep 4, 2020, 2:04 AM IST

ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ ಹಾಗೂ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

belthangadi
ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ

ಬೆಳ್ತಂಗಡಿ: ದ್ವೇಷ, ಮತ್ಸರ, ಅಪನಂಬಿಕೆಯಿಂದ ದೂರವಿದ್ದು ಅಷ್ಟಮಧಗಳನ್ನು ಬಿಟ್ಟು ಹೊರಬಂದಾಗ ಜೀವನ ಸಾರ್ಥಕ. ನಮ್ಮ ಬದುಕನ್ನು ಇನ್ನೊಬ್ಬರ ಬದುಕಿನ ಜೊತೆ ತುಲನೆ ಮಾಡಬೇಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ

ಗುರುವಾರ ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ ಹಾಗೂ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸುಖ, ಶಾಂತಿ, ನೆಮ್ಮದಿಯನ್ನು ಭಗವಂತ ಎಲ್ಲರಿಗೂ ನೀಡುತ್ತಾನೆ. ಆದರೆ ಅದನ್ನು ಅನುಭವಿಸುವ ಮಾರ್ಗಗಳು ವಿಭಿನ್ನವಾಗಿದೆ. ಕೇವಲ ಇಂದ್ರೀಯಗಳ ಸುಖ ಶಾಶ್ವತ ಎಂಬ ಭ್ರಮೆಯನ್ನು ಹಲವು ಮಂದಿ ಇಟ್ಟುಕೊಳ್ಳುತ್ತಾರೆ. ಇದು ತಪ್ಪು. ಬಾಹ್ಯ ಧರ್ಮಕ್ಕಿಂತ ಆಂತರಿಕ ಕ್ರಿಯೆ ಪ್ರಾಮಾಣಿಕವಾಗಿರಬೇಕು ಎಂದರು.

ಉತ್ತಮ ಸಮಾಜ ನಿರ್ಮಾಣವಾಗಲು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕು. ಅಂತಹ ಸಂಸ್ಕಾರವನ್ನು ನೀಡಬೇಕಾದರೆ ಪ್ರತಿಯೊಬ್ಬರೂ ರಾಮನ ಜಪ ಮಾಡಿದಾಗ ಸಂಸ್ಕಾರ ಸಿಗಲು ಸಾಧ್ಯ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಭಗವಂತನು ಶ್ರೀಮಂತ, ಬಡವ ಎಂಬುದನ್ನು ನೋಡದೆ ಎಲ್ಲರಿಗೂ ಒಂದೇ ರೀತಿಯ ಸಮಯವನ್ನು ನೀಡಿದ್ದಾನೆ. ಅದನ್ನು ಸದ್ಬಳಕೆ ಮಾಡಿದವ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ದುರ್ಬಳಕೆ ಮಾಡಿದವ ಸಮಾಜದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಗೋಪಾಲಾಚಾರ್ಯ ಮತ್ತು ಮಹೇಶ್‌ಶಾಂತಿ ತಂಡದವರಿಂದ ವಿವಿಧ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ನಡೆಯಿತು. ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ನಂತರ ಸ್ವಾಮಿಗಳಿಗೆ ಭಕ್ತರು ವಿಶೇಷ ರೀತಿಯಲ್ಲಿ ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟ್ ಚಿತ್ತರಂಜನ್ ಗರೋಡಿ, ತಾ.ಪಂ ಸದಸ್ಯ ಲಕ್ಷ್ಮೀ ನಾರಾಯಣ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಸುವರ್ಣ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ತಂಗಡಿ: ದ್ವೇಷ, ಮತ್ಸರ, ಅಪನಂಬಿಕೆಯಿಂದ ದೂರವಿದ್ದು ಅಷ್ಟಮಧಗಳನ್ನು ಬಿಟ್ಟು ಹೊರಬಂದಾಗ ಜೀವನ ಸಾರ್ಥಕ. ನಮ್ಮ ಬದುಕನ್ನು ಇನ್ನೊಬ್ಬರ ಬದುಕಿನ ಜೊತೆ ತುಲನೆ ಮಾಡಬೇಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ

ಗುರುವಾರ ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ ಹಾಗೂ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸುಖ, ಶಾಂತಿ, ನೆಮ್ಮದಿಯನ್ನು ಭಗವಂತ ಎಲ್ಲರಿಗೂ ನೀಡುತ್ತಾನೆ. ಆದರೆ ಅದನ್ನು ಅನುಭವಿಸುವ ಮಾರ್ಗಗಳು ವಿಭಿನ್ನವಾಗಿದೆ. ಕೇವಲ ಇಂದ್ರೀಯಗಳ ಸುಖ ಶಾಶ್ವತ ಎಂಬ ಭ್ರಮೆಯನ್ನು ಹಲವು ಮಂದಿ ಇಟ್ಟುಕೊಳ್ಳುತ್ತಾರೆ. ಇದು ತಪ್ಪು. ಬಾಹ್ಯ ಧರ್ಮಕ್ಕಿಂತ ಆಂತರಿಕ ಕ್ರಿಯೆ ಪ್ರಾಮಾಣಿಕವಾಗಿರಬೇಕು ಎಂದರು.

ಉತ್ತಮ ಸಮಾಜ ನಿರ್ಮಾಣವಾಗಲು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕು. ಅಂತಹ ಸಂಸ್ಕಾರವನ್ನು ನೀಡಬೇಕಾದರೆ ಪ್ರತಿಯೊಬ್ಬರೂ ರಾಮನ ಜಪ ಮಾಡಿದಾಗ ಸಂಸ್ಕಾರ ಸಿಗಲು ಸಾಧ್ಯ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಭಗವಂತನು ಶ್ರೀಮಂತ, ಬಡವ ಎಂಬುದನ್ನು ನೋಡದೆ ಎಲ್ಲರಿಗೂ ಒಂದೇ ರೀತಿಯ ಸಮಯವನ್ನು ನೀಡಿದ್ದಾನೆ. ಅದನ್ನು ಸದ್ಬಳಕೆ ಮಾಡಿದವ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ದುರ್ಬಳಕೆ ಮಾಡಿದವ ಸಮಾಜದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಗೋಪಾಲಾಚಾರ್ಯ ಮತ್ತು ಮಹೇಶ್‌ಶಾಂತಿ ತಂಡದವರಿಂದ ವಿವಿಧ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ನಡೆಯಿತು. ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ನಂತರ ಸ್ವಾಮಿಗಳಿಗೆ ಭಕ್ತರು ವಿಶೇಷ ರೀತಿಯಲ್ಲಿ ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟ್ ಚಿತ್ತರಂಜನ್ ಗರೋಡಿ, ತಾ.ಪಂ ಸದಸ್ಯ ಲಕ್ಷ್ಮೀ ನಾರಾಯಣ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಹರೀಶ್ ಸುವರ್ಣ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.