ETV Bharat / state

ಮರವೂರು ಅಣೆಕಟ್ಟಿಗೆ ಕಲುಷಿತ ನೀರು : ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ - ಮರವೂರು ಅಣೆಕಟ್ಟು

ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಮಂಗಳೂರು ಮನಪಾ ಆಯುಕ್ತರಿಗೆ ಸಿಎಂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಆದೇಶಿದ್ದಾರೆ..

ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
author img

By

Published : Jun 19, 2021, 9:56 PM IST

ಮಂಗಳೂರು : ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಗರದ ಮೂಡುಶೆಡ್ಡೆ, ವಾಮಂಜೂರು, ಬಜ್ಪೆ, ಸುಂಕದಕಟ್ಟೆ, ಕಳವಾರು, ಪೆರ್ಮುದೆ, ಗುರುಪುರ ಸೇರಿದಂತೆ 12 ಗ್ರಾಮ ಪಂಚಾಯತ್‌ಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮಂಗಳೂರು ಮನಪಾ ಆಡಳಿತ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಕಾರ್ಯದರ್ಶಿ ಗರಂ ಆಗಿ ಪಾಲಿಕೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮರವೂರಿನಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮೂಡುಶೆಡ್ಡೆ-ಪಡುಶೆಡ್ಡೆ ಜನರು ಮನಪಾ, ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ‌. ಆದರೆ, ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಪರಿಣಾಮ 12 ಗ್ರಾಪಂ ಜನರು ಇದೇ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನಪಾದ ನಿರ್ಲಕ್ಷ್ಯದ ಬಗ್ಗೆ ಈಶ್ವರ್ ರಾಜ್ ಎಂಬುವರು ಸಿಎಂ ಕಚೇರಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಮಂಗಳೂರು ಮನಪಾ ಆಯುಕ್ತರಿಗೆ ಆದೇಶಿದ್ದಾರೆ.

ಮಂಗಳೂರು : ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಗರದ ಮೂಡುಶೆಡ್ಡೆ, ವಾಮಂಜೂರು, ಬಜ್ಪೆ, ಸುಂಕದಕಟ್ಟೆ, ಕಳವಾರು, ಪೆರ್ಮುದೆ, ಗುರುಪುರ ಸೇರಿದಂತೆ 12 ಗ್ರಾಮ ಪಂಚಾಯತ್‌ಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಮರವೂರು ಡ್ಯಾಂಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮಂಗಳೂರು ಮನಪಾ ಆಡಳಿತ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಿಎಂ ಕಾರ್ಯದರ್ಶಿ ಗರಂ ಆಗಿ ಪಾಲಿಕೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.

ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮಂಗಳೂರು ಪಾಲಿಕೆ ವಿರುದ್ಧ ಸಿಎಂ ಕಚೇರಿ ಗರಂ
ಮರವೂರಿನಲ್ಲಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿಗೆ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಮೂಡುಶೆಡ್ಡೆ-ಪಡುಶೆಡ್ಡೆ ಜನರು ಮನಪಾ, ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ‌. ಆದರೆ, ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಪರಿಣಾಮ 12 ಗ್ರಾಪಂ ಜನರು ಇದೇ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮನಪಾದ ನಿರ್ಲಕ್ಷ್ಯದ ಬಗ್ಗೆ ಈಶ್ವರ್ ರಾಜ್ ಎಂಬುವರು ಸಿಎಂ ಕಚೇರಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಂಡು ವರದಿ ನೀಡುವಂತೆ ಮಂಗಳೂರು ಮನಪಾ ಆಯುಕ್ತರಿಗೆ ಆದೇಶಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.