ETV Bharat / state

ಮಂಗಳೂರು ಹನಿಟ್ರ್ಯಾಪ್ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

author img

By

Published : Jan 12, 2020, 4:58 PM IST

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಹನಿಟ್ರ್ಯಾಪ್ ಪ್ರಕರಣ, Manglore Honey trap case
ಹನಿಟ್ರ್ಯಾಪ್ ಪ್ರಕರಣ

ಮಂಗಳೂರು: ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕಡಂಬು ನೆತ್ತರಕೆರೆ ನಿವಾಸಿ ಜಮಾಲುದ್ದೀನ್ ಅಲಿಯಾಸ್ ಜಮಾಲ್ (36) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ:

ಜನವರಿ 7 ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ದಿಲೀಪ್ ಟಿ. ಎಂಬುವವರಿಗೆ ಯುವತಿಯೋರ್ವಳು ಕರೆ ಮಾಡಿದ ಕಾರಣ ಅವರು ತಮ್ಮ ಸ್ನೇಹಿತರಾದ ಜನಾರ್ದನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಪುತ್ತೂರು ಬೈಪಾಸ್ ರಸ್ತೆಗೆ ಬಂದಿದ್ದರು. ಈ ಸಂದರ್ಭ ಆ ಯುವತಿ ಅವರನ್ನು ಅಲ್ಲಿಯೇ ಹತ್ತಿರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಮತ್ತೋರ್ವಳು ಯುವತಿಯಿದ್ದಳು‌. ಇದೇ ವೇಳೆ ಏಕಾಏಕಿ ಇಬ್ಬರು ಗಂಡಸರು ದಾಳಿ ನಡೆಸಿ, ದಿಲೀಪ್ ಹಾಗೂ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಕೋಣೆಯೊಂದರಲ್ಲಿ ಬಂಧನದಲ್ಲಿರಿಸಿದ್ದರು. ಬಳಿಕ ಯುವತಿಯರೊಂದಿಗೆ ಫೋಟೋ ತೆಗಿಸಿ ಇದನ್ನು ಪೊಲೀಸರಿಗೆ ಹಾಗೂ ಟಿವಿ ಚಾನಲ್​ನವರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಈ ವೇಳೆ ಪೊಲೀಸರು ಎಂಬುದಾಗಿ ಹೇಳಿಕೊಂಡು ಬಂದ ಮೂವರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ತೆಗೆದ ಫೋಟೋಗಳನ್ನು ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ‌. ಈ ಸಂದರ್ಭ ಹನಿಟ್ರ್ಯಾಪ್​ಗೊಳಗಾದವರು ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ ಅವರಲ್ಲಿರುವ ಮೊಬೈಲ್, ನಗದು ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು, ಪೇಪರ್​ ಒಂದರಲ್ಲಿ ಸಹಿ ಮತ್ತು ಬೆರಳಚ್ಚು ತೆಗೆಕೊಂಡಿದ್ದಾರೆ.

ಮರುದಿನ ಪೊಲೀಸ್ ಎಂದು ಹೇಳಿಕೊಂಡಿದ್ದಾತ ಬಂದು ಠಾಣೆಗೆ ಕರೆದೊಯ್ಯಲಾಗುವುದು ಎಂದು ಹೇಳಿ ಅವರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿದ್ದಾರೆ. ವಿಷಯ ತಿಳಿದು ಪೊಲೀಸರು ರೆಸಾರ್ಟ್​ ಮೇಲೆ ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಲೋಹಿತ್ ಬಿ.ಬಿ ಮತ್ತು ಮಹಮ್ಮದ್ ಶರೀಫ್ ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳೂರು: ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕಡಂಬು ನೆತ್ತರಕೆರೆ ನಿವಾಸಿ ಜಮಾಲುದ್ದೀನ್ ಅಲಿಯಾಸ್ ಜಮಾಲ್ (36) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ:

ಜನವರಿ 7 ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ದಿಲೀಪ್ ಟಿ. ಎಂಬುವವರಿಗೆ ಯುವತಿಯೋರ್ವಳು ಕರೆ ಮಾಡಿದ ಕಾರಣ ಅವರು ತಮ್ಮ ಸ್ನೇಹಿತರಾದ ಜನಾರ್ದನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಪುತ್ತೂರು ಬೈಪಾಸ್ ರಸ್ತೆಗೆ ಬಂದಿದ್ದರು. ಈ ಸಂದರ್ಭ ಆ ಯುವತಿ ಅವರನ್ನು ಅಲ್ಲಿಯೇ ಹತ್ತಿರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಮತ್ತೋರ್ವಳು ಯುವತಿಯಿದ್ದಳು‌. ಇದೇ ವೇಳೆ ಏಕಾಏಕಿ ಇಬ್ಬರು ಗಂಡಸರು ದಾಳಿ ನಡೆಸಿ, ದಿಲೀಪ್ ಹಾಗೂ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾರೆ. ಆ ಬಳಿಕ ಕೋಣೆಯೊಂದರಲ್ಲಿ ಬಂಧನದಲ್ಲಿರಿಸಿದ್ದರು. ಬಳಿಕ ಯುವತಿಯರೊಂದಿಗೆ ಫೋಟೋ ತೆಗಿಸಿ ಇದನ್ನು ಪೊಲೀಸರಿಗೆ ಹಾಗೂ ಟಿವಿ ಚಾನಲ್​ನವರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಈ ವೇಳೆ ಪೊಲೀಸರು ಎಂಬುದಾಗಿ ಹೇಳಿಕೊಂಡು ಬಂದ ಮೂವರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ತೆಗೆದ ಫೋಟೋಗಳನ್ನು ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ‌. ಈ ಸಂದರ್ಭ ಹನಿಟ್ರ್ಯಾಪ್​ಗೊಳಗಾದವರು ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ ಅವರಲ್ಲಿರುವ ಮೊಬೈಲ್, ನಗದು ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು, ಪೇಪರ್​ ಒಂದರಲ್ಲಿ ಸಹಿ ಮತ್ತು ಬೆರಳಚ್ಚು ತೆಗೆಕೊಂಡಿದ್ದಾರೆ.

ಮರುದಿನ ಪೊಲೀಸ್ ಎಂದು ಹೇಳಿಕೊಂಡಿದ್ದಾತ ಬಂದು ಠಾಣೆಗೆ ಕರೆದೊಯ್ಯಲಾಗುವುದು ಎಂದು ಹೇಳಿ ಅವರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿದ್ದಾರೆ. ವಿಷಯ ತಿಳಿದು ಪೊಲೀಸರು ರೆಸಾರ್ಟ್​ ಮೇಲೆ ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಲೋಹಿತ್ ಬಿ.ಬಿ ಮತ್ತು ಮಹಮ್ಮದ್ ಶರೀಫ್ ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಮಂಗಳೂರು: ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್‌ ಠಾಣಾ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕಡಂಬು ನೆತ್ತರಕೆರೆ ನಿವಾಸಿ ಜಮಾಲುದ್ದೀನ್ ಅಲಿಯಾಸ್ ಜಮಾಲ್(36) ಬಂಧಿತ ಆರೋಪಿ.

Body:ಪ್ರಕರಣಕ್ಕೆ ಸಂಬಂಧಿಸಿ ಈ ಗಾಗಲೇ ಲೋಹಿತ್ ಬಿ.ಬಿ., ಮಹಮ್ಮದ್ ಶರೀಫ್ ಎಂಬವರನ್ನು ಬಂಧಿಸಿದ್ದಾರೆ‌. ಈ ಪ್ರಕರಣ ಕ್ಕೆ ಸಂಬಂಧಿಸಿ ಮತ್ತಿಬ್ಬರು ಪರಾರಿಯಾಗಿದ್ದಾರೆ‌. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.