ಮೂಡುಬಿದಿರೆ: ಗೂಡ್ಸ್ ಟೆಂಪೋ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಶಿರ್ತಾಡಿಯಲ್ಲಿ ನಡೆದಿದೆ.
ಉಜಿರೆಯ ನೇಕಾರಪೇಟೆ ಬಳಿಯ ಲಾಯಿಲ ನಿವಾಸಿ ಭವಿಷ್ ಶೆಟ್ಟಿ ಮೃತ ದುರ್ದೈವಿ. ಮೂಡುಬಿದಿರೆಯಲ್ಲಿ ಉದ್ಯೋಗದಲ್ಲಿರುವ ಭವಿಷ್ ಶೆಟ್ಟಿ ಅಮೆಜಾನ್ ಕಂಪೆನಿಯ ಪಾರ್ಸಲ್ ಡೆಲಿವರಿ ಕೊಟ್ಟು ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಭವಿಷ್ ಶೆಟ್ಟಿ ತಲೆಗೆ ಗಂಭೀರವಾದ ಗಾಯಗಳಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.