ETV Bharat / state

ರಾಜ್ಯದಲ್ಲಿ ಮೊದಲ ಟ್ರ್ಯಾಕ್ಟರ್ ಲೈಸನ್ಸ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸುಮಂಗಲಮ್ಮ ಇನ್ನಿಲ್ಲ

author img

By

Published : Jun 23, 2021, 11:00 PM IST

ಸುಮಂಗಲಮ್ಮ ಅವರ ಪತಿ ವೀರಭದ್ರಪ್ಪ ಸಹ ತೆಂಗಿನ ಕೃಷಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಸುಮಂಗಲಮ್ಮ ಅಗಲಿದ್ದು, ಅವರ ತೋಟದಲ್ಲಿ ಅಂತ್ಯಸಂಸ್ಕಾರ ನಡೆದಿದೆ..

ರಾಜ್ಯದಲ್ಲಿ ಮೊದಲ ಟ್ರ್ಯಾಕ್ಟರ್ ಲೈಸನ್ಸ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸುಮಂಗಲಮ್ಮ ಇನ್ನಿಲ್ಲ
ರಾಜ್ಯದಲ್ಲಿ ಮೊದಲ ಟ್ರ್ಯಾಕ್ಟರ್ ಲೈಸನ್ಸ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸುಮಂಗಲಮ್ಮ ಇನ್ನಿಲ್ಲ

ಚಿತ್ರದುರ್ಗ: ರಾಜ್ಯದಲ್ಲಿ ಪ್ರಥಮ ಟ್ರ್ಯಾಕ್ಟರ್ ಚಾಲನಾ ಪ್ರಮಾಣಪತ್ರ ಪಡೆದು ಕೃಷಿಯಲ್ಲಿ ಸಾಧನೆ ಮಾಡಿ 2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ರೈತ ಮಹಿಳೆ ಸುಮಂಗಲಮ್ಮ (69) ಹೃದಯಘಾತದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೇಷ್ಮೆ ಕೃಷಿ, ತೆಂಗಿನ ಕೃಷಿ, ತೆಂಗಿನಮರದಿಂದ ನಿರಾ ಇಳಿಸುವುದು, ಅಜೋಲಾ ಸೇರಿದಂತೆ ಸುಮಾರು 70 ಎಕರೆ ಪ್ರದೇಶದ ತೋಟದಲ್ಲಿ ವಿವಿಧ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಕೃಷಿ ವಿಶ್ವವಿದ್ಯಾನಿಲಯ ರೀತಿ ಸಿದ್ದಪಡಿಸಿದ್ದರು. ರಾಜ್ಯದ ಹಲವು ಜಿಲ್ಲೆಗಳಿಂದ ಜನರು ವೀಕ್ಷಿಸಲು ಆಗಮಿಸುತ್ತಿದ್ದರು.

ಸುಮಂಗಲಮ್ಮ ಅವರ ಪತಿ ವೀರಭದ್ರಪ್ಪ ಸಹ ತೆಂಗಿನ ಕೃಷಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಸುಮಂಗಲಮ್ಮ ಅಗಲಿದ್ದು, ಅವರ ತೋಟದಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಓದಿ:ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ಮುಂದಿನ ವಾರ ದಿಲ್ಲಿಗೆ ಪ್ರಯಾಣ ಸಾಧ್ಯತೆ

ಚಿತ್ರದುರ್ಗ: ರಾಜ್ಯದಲ್ಲಿ ಪ್ರಥಮ ಟ್ರ್ಯಾಕ್ಟರ್ ಚಾಲನಾ ಪ್ರಮಾಣಪತ್ರ ಪಡೆದು ಕೃಷಿಯಲ್ಲಿ ಸಾಧನೆ ಮಾಡಿ 2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ರೈತ ಮಹಿಳೆ ಸುಮಂಗಲಮ್ಮ (69) ಹೃದಯಘಾತದಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೇಷ್ಮೆ ಕೃಷಿ, ತೆಂಗಿನ ಕೃಷಿ, ತೆಂಗಿನಮರದಿಂದ ನಿರಾ ಇಳಿಸುವುದು, ಅಜೋಲಾ ಸೇರಿದಂತೆ ಸುಮಾರು 70 ಎಕರೆ ಪ್ರದೇಶದ ತೋಟದಲ್ಲಿ ವಿವಿಧ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಕೃಷಿ ವಿಶ್ವವಿದ್ಯಾನಿಲಯ ರೀತಿ ಸಿದ್ದಪಡಿಸಿದ್ದರು. ರಾಜ್ಯದ ಹಲವು ಜಿಲ್ಲೆಗಳಿಂದ ಜನರು ವೀಕ್ಷಿಸಲು ಆಗಮಿಸುತ್ತಿದ್ದರು.

ಸುಮಂಗಲಮ್ಮ ಅವರ ಪತಿ ವೀರಭದ್ರಪ್ಪ ಸಹ ತೆಂಗಿನ ಕೃಷಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಸುಮಂಗಲಮ್ಮ ಅಗಲಿದ್ದು, ಅವರ ತೋಟದಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಓದಿ:ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ಮುಂದಿನ ವಾರ ದಿಲ್ಲಿಗೆ ಪ್ರಯಾಣ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.