ETV Bharat / state

ಭಾಷೆ ಹೆಸರಿನಲ್ಲಿ ಗಲಭೆ ಎಬ್ಬಿಸುವ ಸಂಘಟನೆಗಳ ವಿರುದ್ಧ ಸಚಿವ ಸಿ.ಟಿ. ರವಿ ಕಿಡಿ

ಭಾಷೆ ಹೆಸರಿನಲ್ಲಿ ಗಲಭೆಯನ್ನು ಎಬ್ಬಿಸುವಂತಹ ಸಂಘಟನೆಗಳ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.

author img

By

Published : Jan 5, 2020, 4:53 PM IST

chikkamagaluru
ಸಿ.ಟಿ ರವಿ

ಚಿಕ್ಕಮಗಳೂರು: ಭಾಷೆ ಹೆಸರಿನಲ್ಲಿ ಗಲಭೆ ಎಬ್ಬಿಸುವಂತಹ ಸಂಘಟನೆಗಳ ವಿರುದ್ಧ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ ರವಿ

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಮೇಲೆ ನನ್ನ ಯಾವುದೇ ತಕರಾರು ಇಲ್ಲ. ಕನ್ನಡದ ಬಗ್ಗೆ ಅಭಿಮಾನ ಕನ್ನಡಿಗನಿಗೆ ಇರೋದು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಪ್ರತಿ ಸಂದರ್ಭದಲ್ಲಿ ಗಲಭೆ ಹುಟ್ಟುಹಾಕುವ ಸಂಚು ಮಾಡುವ ಜನರಿದ್ದಾರೆ. ಅದಕ್ಕೆ ತುಕಡೇ ಗ್ಯಾಂಗ್​ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಸೌಹಾರ್ದತೆ ಕೆಡಿಸುವ ಜನರನ್ನು ನಾವು ಹೊರಗಿಡಬೇಕು. ಸೌಹಾರ್ದತೆ ಉಳಿಸಿಕೊಂಡು ಹೋಗಬೇಕು. ಭಾಷವಾರು ಪ್ರಾಂತ್ಯಕ್ಕೆ ಮುಂಚೆ ನೂರಾರು ಸಂಸ್ಥಾನಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದವು. ಚೋಳರ ಆಳ್ವಿಕೆ ಶತಮಾನಗಳ ಕಾಲ ಕರ್ನಾಟಕದಲ್ಲಿ ನಡೆದಿದೆ. ಆದರೆ ಅವರು ತಮಿಳು ಭಾಷೆಯನ್ನು ಕರ್ನಾಟಕದ ಮೇಲೆ ಹೇರಿಲ್ಲ ಎಂದು ತಿಳಿಸಿದರು.

ಇನ್ನು, ಭಾಷೆಗಾಗಿ ಯುದ್ಧ ನಡೆದಿಲ್ಲ. ಹಾಗೆಯೇ ಒಂದು ಭಾಷೆ ಇನ್ನೊಂದು ಭಾಷೆಯನ್ನು ಕೊಂದಿಲ್ಲ. ಒಂದು ಭಾಷೆ ಇನ್ನೊಂದು ಭಾಷೆಯನ್ನು ಸಹೋದರ ಭಾಷೆ ಎಂದು ತಿಳಿದು ಬೆಳೆಸುವ ಕೆಲಸ ಮಾಡಿ ಜೊತೆಗೆ ತಾನು ಬೆಳೆದಿದೆ ಎಂದು ಸಚಿವ ಸಿ ಟಿ ರವಿ ಹೇಳಿದರು.

ಚಿಕ್ಕಮಗಳೂರು: ಭಾಷೆ ಹೆಸರಿನಲ್ಲಿ ಗಲಭೆ ಎಬ್ಬಿಸುವಂತಹ ಸಂಘಟನೆಗಳ ವಿರುದ್ಧ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ ರವಿ

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಮೇಲೆ ನನ್ನ ಯಾವುದೇ ತಕರಾರು ಇಲ್ಲ. ಕನ್ನಡದ ಬಗ್ಗೆ ಅಭಿಮಾನ ಕನ್ನಡಿಗನಿಗೆ ಇರೋದು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಪ್ರತಿ ಸಂದರ್ಭದಲ್ಲಿ ಗಲಭೆ ಹುಟ್ಟುಹಾಕುವ ಸಂಚು ಮಾಡುವ ಜನರಿದ್ದಾರೆ. ಅದಕ್ಕೆ ತುಕಡೇ ಗ್ಯಾಂಗ್​ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಸೌಹಾರ್ದತೆ ಕೆಡಿಸುವ ಜನರನ್ನು ನಾವು ಹೊರಗಿಡಬೇಕು. ಸೌಹಾರ್ದತೆ ಉಳಿಸಿಕೊಂಡು ಹೋಗಬೇಕು. ಭಾಷವಾರು ಪ್ರಾಂತ್ಯಕ್ಕೆ ಮುಂಚೆ ನೂರಾರು ಸಂಸ್ಥಾನಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದವು. ಚೋಳರ ಆಳ್ವಿಕೆ ಶತಮಾನಗಳ ಕಾಲ ಕರ್ನಾಟಕದಲ್ಲಿ ನಡೆದಿದೆ. ಆದರೆ ಅವರು ತಮಿಳು ಭಾಷೆಯನ್ನು ಕರ್ನಾಟಕದ ಮೇಲೆ ಹೇರಿಲ್ಲ ಎಂದು ತಿಳಿಸಿದರು.

ಇನ್ನು, ಭಾಷೆಗಾಗಿ ಯುದ್ಧ ನಡೆದಿಲ್ಲ. ಹಾಗೆಯೇ ಒಂದು ಭಾಷೆ ಇನ್ನೊಂದು ಭಾಷೆಯನ್ನು ಕೊಂದಿಲ್ಲ. ಒಂದು ಭಾಷೆ ಇನ್ನೊಂದು ಭಾಷೆಯನ್ನು ಸಹೋದರ ಭಾಷೆ ಎಂದು ತಿಳಿದು ಬೆಳೆಸುವ ಕೆಲಸ ಮಾಡಿ ಜೊತೆಗೆ ತಾನು ಬೆಳೆದಿದೆ ಎಂದು ಸಚಿವ ಸಿ ಟಿ ರವಿ ಹೇಳಿದರು.

Intro:Kn_Ckm_02_Ct Ravi_av_7202347
Body:ಚಿಕ್ಕಮಗಳೂರು :-

ಭಾಷೆ ಹೆಸರಿನಲ್ಲಿ ಗಲಭೆಯನ್ನು ಎಬ್ಬಿಸುವಂತಹ ಸಂಘಟನೆಗಳ ವಿರುದ್ದ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಕಿಡಿ ಕಾರಿದ್ದಾರೆ.ಎಕ್ಸ್ಟ್ರೀ ಮಿಸ್ಟ್ ಗಳು ಎಲ್ಲಾ ಸಂಘಟನೆಗಳು ಹಾಗೂ ಸಮುದಾಯಗಳಲ್ಲೂ ಇರುತ್ತಾರೆ ಅಭಿಮಾನಿಗಳು ಬೇರೆ.ಅಭಿಮಾನಿಗಳ ಮೇಲೆ ನನ್ನ ಯಾವುದೇ ತಕರಾರು ಇಲ್ಲ.ಕನ್ನಡದ ಬಗ್ಗೆ ಅಭಿಮಾನ ಕನ್ನಡಿಗನಿಗೆ ಇರೋದು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಪ್ರತಿ ಸಂದರ್ಭದಲ್ಲಿ ಗಲಭೆ ಹುಟ್ಟು ಹಾಕುವ ಸಂಚು ಮಾಡುವ ಜನರು ಇದ್ದಾರೆ. ಅದಕ್ಕೆ ತುಕಡೇ ಗ್ಯಾಂಗ್ ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ತುಕಡೇ ಗ್ಯಾಂಗ್ ಗಳ ಬೆಂಬಲದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ಸಮಾಜವನ್ನು ಛಿದ್ರ ಛಿದ್ರ ಮಾಡಬೇಕು.ಈ ರೀತಿ ಮಾಡಿದರೇ ತಮ್ಮ ಬೆಳೆ ಬೇಯಿಸಿಕೊಳ್ಳೋದು ಸುಲಭಾ ಅಂತಾ ಮಾನಸಿಕ ಸ್ಥಿತಿಯ ಜನ ಗಲಾಟೆಗೆ ಪ್ರಚೋದನೆ ಕೊಡುತ್ತಾರೆ. ನಾವು ಹೆಚ್ಚು ಜವಾದ್ದಾರಿ ಯುತವಾಗಿ ವರ್ತಿಸಬೇಕು. ಶೇ.99 ರಷ್ಟು ಕನ್ನಡ ಹಾಗೂ ತಮಿಳರಲ್ಲಿ ಸೌಹರ್ಧತೆ ಇದೆ.ಶೇ.99 ಮರಾಠಿಗರು ಹಾಗೂ ಕನ್ನಡಿಗರಲ್ಲಿ ಸೌಹರ್ದತೆ ಇದೆ. ಸೌಹರ್ಧ ಕೆಡಿಸುವ ಜನರನ್ನು ನಾವು ಹೊರಗೆ ಇಡಬೇಕು. ಸೌಹರ್ದತೆ ಉಳಿಸಿಕೊಂಡು ಹೋಗಬೇಕು. ಭಾಷವಾರು ಪ್ರಾಂತ್ಯಕ್ಕೆ ಮುಂಚೇ ನೂರಾರು ಸಂಸ್ಥಾನಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಚೋಳಕ ಆಳ್ವಿಕೆ ಶತಮಾನಗಳ ಕಾಲ ಕರ್ನಾಟಕದಲ್ಲಿ ನಡೆದಿದೆ. ಆದರೇ ಅವರು ತಮಿಳು ಭಾಷೆಯನ್ನು ಕರ್ನಾಟಕದ ಮೇಲೆ ಹೇರಿಲ್ಲ. ವಿಜಯನಗರ ಸಾಮ್ರಾಜ್ಯದಲ್ಲಿ ಕನ್ನಡ ಹಾಗೂ ತೆಲಗು ಬಾಷೆಗೆ ಸಾಮಾನ ಆದ್ಯತೆ ಇತ್ತು. ಆದರೇ ಯಾರೂ ಬಾಷೆಯನ್ನು ತಿನ್ನಲಿಲ್ಲ. ಭಾಷವಾರು ಪ್ರಾಂತ್ಯದ ರಚನೆಯ ನಂತರ ಜಗಳ ಶುರುವಾಗಿದೆ.ಇತಿಹಾಸ ತೆಗೆದು ನೋಡಿದರೇ ಹೆಣ್ಣಿಗಾಗಿ ಯುದ್ದ ನಡೆದಿದೆ. ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ದ ನಡೆದಿದೆ. ಸೇಡಿಗಾಗಿ ಯುದ್ದ ನಡೆದಿದೆ. ಆದರೇ ಭಾಷೆಗಾಗಿ ಯುದ್ದ ನಡೆದಿಲ್ಲ. ಒಂದು ಭಾಷೆ ಇನ್ನೋಂದು ಭಾಷೆಯನ್ನು ಕೊಂದಿಲ್ಲ. ಒಂದು ಭಾಷೆ ಇನ್ನೋಂದು ಭಾಷೆಯನ್ನು ಸಹೋದರ ಭಾಷೆ ಎಂದೂ ತಿಳಿದು ಬೆಳೆಸುವ ಕೆಲಸ ಮಾಡಿದೆ. ಜೊತೆಗೆ ತಾನು ಬೆಳೆದಿದೆ. ಇಲ್ಲಿ ಗಲಾಟೆ ಹುಟ್ಟು ಹಾಕಬೇಕು. ಅಲ್ಲಿ ಗಲಾಟೆ ಮಾಡಿದರೇ ಇಲ್ಲಿ ಪ್ರತಿಕ್ರಿಯೆ ಆಗುತ್ತದೆ.ಪ್ರತಿಕ್ರಿಯೆ ಆದರೇ ತುಕಡೇ ಗ್ಯಾಂಗ್ ಗಳಿಗೆ ಲಾಭ ಆಗುತ್ತೆ ಇದು ತುಕಡೇ ಗ್ಯಾಂಗ್ ಗಳ ಸಂಚು ಎಂದೂ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದರು.....


Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.