ETV Bharat / state

ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ: ಸಂಸದೆ ಕರಂದ್ಲಾಜೆ

author img

By

Published : Apr 27, 2021, 10:15 PM IST

ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ. ನನ್ನ ಗಮನಕ್ಕೆ ಬಂದ ವಿಚಾರವನ್ನ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Shobha karandalje
Shobha karandalje

ಚಿಕ್ಕಮಗಳೂರು: ಕೋವಿಡ್ ನಿರ್ವಹಣೆ ಸರಿಯಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಮಾತನಾಡಿದ್ದಾರೆ.

ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ. ನನ್ನ ಗಮನಕ್ಕೆ ಬಂದ ವಿಚಾರವನ್ನ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದೇನೆ.

ಹೆಲ್ಫ್ ಲೈನ್ ಜಾಸ್ತಿ ಮಾಡಬೇಕು, ರೆಮ್ಡೆಸಿವಿರ್​, ಆಕ್ಸಿಜನ್ ಎಷ್ಟಿದೆ ಎಂದು ಸರ್ಕಾರ ಹೇಳಬೇಕು. ಬೆಡ್ ಎಷ್ಟು ಖಾಲಿ ಇದೆ ಎಂದು ಆಸ್ಪತ್ರೆ ಮುಂದೆ ಹೆಲ್ಪ್ ಡೆಸ್ಕ್ ಹಾಕಬೇಕು. ಈ ಎಲ್ಲಾ ಸೌಲಭ್ಯ ಇರಬೇಕು ಎಂಬ ಸಲಹೆಯನ್ನ ಸರ್ಕಾರಕ್ಕೆ ಕೊಟ್ಟಿದ್ದೇನೆ.

ಇದರಲ್ಲೂ ಲೋಪ ಹುಡುಕುವವರನ್ನ ದೇವರೇ ಕಾಪಾಡಬೇಕು. ಕಾಯಿಲೆಗೆ ಬಿಜೆಪಿ - ಜೆಡಿಎಸ್-ಕಾಂಗ್ರೆಸ್ ಅಂತಿಲ್ಲ, ಎಲ್ಲರಿಗೂ ಬರುತ್ತಿದೆ. ನಾವು ಕೂಡ ಪಕ್ಷ - ಧರ್ಮ ನೋಡದೇ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಇಂತಹ ದುಃಖದ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾತನಾಡುವವರನ್ನ ದೇವರೇ ಕಾಪಾಡಲಿ ಎಂದು ಹೇಳಿದರು.

ಚಿಕ್ಕಮಗಳೂರು: ಕೋವಿಡ್ ನಿರ್ವಹಣೆ ಸರಿಯಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಮಾತನಾಡಿದ್ದಾರೆ.

ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ. ನನ್ನ ಗಮನಕ್ಕೆ ಬಂದ ವಿಚಾರವನ್ನ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದೇನೆ.

ಹೆಲ್ಫ್ ಲೈನ್ ಜಾಸ್ತಿ ಮಾಡಬೇಕು, ರೆಮ್ಡೆಸಿವಿರ್​, ಆಕ್ಸಿಜನ್ ಎಷ್ಟಿದೆ ಎಂದು ಸರ್ಕಾರ ಹೇಳಬೇಕು. ಬೆಡ್ ಎಷ್ಟು ಖಾಲಿ ಇದೆ ಎಂದು ಆಸ್ಪತ್ರೆ ಮುಂದೆ ಹೆಲ್ಪ್ ಡೆಸ್ಕ್ ಹಾಕಬೇಕು. ಈ ಎಲ್ಲಾ ಸೌಲಭ್ಯ ಇರಬೇಕು ಎಂಬ ಸಲಹೆಯನ್ನ ಸರ್ಕಾರಕ್ಕೆ ಕೊಟ್ಟಿದ್ದೇನೆ.

ಇದರಲ್ಲೂ ಲೋಪ ಹುಡುಕುವವರನ್ನ ದೇವರೇ ಕಾಪಾಡಬೇಕು. ಕಾಯಿಲೆಗೆ ಬಿಜೆಪಿ - ಜೆಡಿಎಸ್-ಕಾಂಗ್ರೆಸ್ ಅಂತಿಲ್ಲ, ಎಲ್ಲರಿಗೂ ಬರುತ್ತಿದೆ. ನಾವು ಕೂಡ ಪಕ್ಷ - ಧರ್ಮ ನೋಡದೇ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಇಂತಹ ದುಃಖದ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾತನಾಡುವವರನ್ನ ದೇವರೇ ಕಾಪಾಡಲಿ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.