ETV Bharat / state

ಟೀಕೆ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ: ಕಾಂಗ್ರೆಸ್​​ ನಾಯಕರಿಗೆ ಸಚಿವ ಸಿ.ಟಿ. ರವಿ ಆಹ್ವಾನ - adopting villages

ಎಲ್ಲವನ್ನೂ ಪ್ರಶ್ನಿಸುವ ಬದಲು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಿ. ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ನೀವು ಗ್ರಾಮ ದತ್ತು ತೆಗೆದುಕೊಂಡರೆ ಉಳಿದ ಪಕ್ಷಗಳ ನಾಯಕರು ಕೂಡಾ ಆ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಸಚಿವ ಸಿ.ಟಿ. ರವಿ ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ್ದಾರೆ.

ct ravi
author img

By

Published : Sep 20, 2019, 4:47 PM IST

ಚಿಕ್ಕಮಗಳೂರು: ಕಾಂಗ್ರೆಸ್ಸಿಗರೇ ನೀವೆಲ್ಲಾ ಆರ್ಥಿಕವಾಗಿ ತಾಕತ್ತು ಹೊಂದಿದವರು. ನಿಮ್ಮ ಆಸ್ತಿಗಳು ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿವೆ. ಅದು ಸದುಪಯೋಗ ಆಗಬೇಕಾದರೆ, ಪುಣ್ಯದ ಕೆಲಸ ಮಾಡಬೇಕು. ಟ್ವೀಟ್​ ಮಾಡೋ ಬದಲು, 5-10 ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ಹೇಳಿದ್ದಾರೆ.

ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ ಸಿ ಟಿ ರವಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ನಿಮ್ಮ ರಾಜಕೀಯ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದ್ರೆ, ಬಿಜೆಪಿಯವರು 20 ಗ್ರಾಮ ಪಡೆಯುತ್ತೇವೆ. ನಾವೇನಾದರೂ ಮಾಡಬೇಕೆಂದು ಆಗ ಜೆಡಿಎಸ್‍ನವರು 8-10 ಗ್ರಾಮಗಳನ್ನು ದತ್ತು ಪಡೆಯುತ್ತಾರೆ ಎಂದರು.

ಇನ್ನು, ವಿಜಯನಗರ ಜಿಲ್ಲೆ ಮಾಡಬೇಕು ಎಂಬುದು ಅಲ್ಲಿನ ಶಾಸಕರ ಒತ್ತಡ. ಅದು ಇನ್ನೂ ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸೋಣ. ಸಿಎಂ ಯಡಿಯೂರಪ್ಪ ಅವರು ಆ ಭಾಗದ ಜನರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು: ಕಾಂಗ್ರೆಸ್ಸಿಗರೇ ನೀವೆಲ್ಲಾ ಆರ್ಥಿಕವಾಗಿ ತಾಕತ್ತು ಹೊಂದಿದವರು. ನಿಮ್ಮ ಆಸ್ತಿಗಳು ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿವೆ. ಅದು ಸದುಪಯೋಗ ಆಗಬೇಕಾದರೆ, ಪುಣ್ಯದ ಕೆಲಸ ಮಾಡಬೇಕು. ಟ್ವೀಟ್​ ಮಾಡೋ ಬದಲು, 5-10 ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ಹೇಳಿದ್ದಾರೆ.

ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ ಸಿ ಟಿ ರವಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರೇ ನಿಮ್ಮ ರಾಜಕೀಯ ಬಿಟ್ಟು ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಆಗ ಆರೋಗ್ಯಕರ ಸ್ಪರ್ಧೆ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದ್ರೆ, ಬಿಜೆಪಿಯವರು 20 ಗ್ರಾಮ ಪಡೆಯುತ್ತೇವೆ. ನಾವೇನಾದರೂ ಮಾಡಬೇಕೆಂದು ಆಗ ಜೆಡಿಎಸ್‍ನವರು 8-10 ಗ್ರಾಮಗಳನ್ನು ದತ್ತು ಪಡೆಯುತ್ತಾರೆ ಎಂದರು.

ಇನ್ನು, ವಿಜಯನಗರ ಜಿಲ್ಲೆ ಮಾಡಬೇಕು ಎಂಬುದು ಅಲ್ಲಿನ ಶಾಸಕರ ಒತ್ತಡ. ಅದು ಇನ್ನೂ ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸೋಣ. ಸಿಎಂ ಯಡಿಯೂರಪ್ಪ ಅವರು ಆ ಭಾಗದ ಜನರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

Intro:Kn_ckm_03_ct Ravi_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಕಾಂಗ್ರೆಸ್ ಮುಖಂಡರ ಕಾಲು ಎಳೆದಿದ್ದಾರೆ. ಕಾಂಗ್ರೆಸ್ಸಿಗರೇ ನೀವೆಲ್ಲಾ ತಾಕತ್ತಿರೋ ಜನರೇ ಇದ್ದೀರಾ. ನಿಮ್ಮ ಆಸ್ತಿ ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಸದುಪಯೋಗ ಆಗಬೇಕಾದರೆ, ಪುಣ್ಯದ ಕೆಲಸ ಮಾಡಬೇಕು. ಟ್ವಿಟ್ ಮಾಡೋ ಬದಲು, 5-10-20 ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್ಸಿಗರಿಗೆ ಕಾಲು ಎಳೆದು ಕಿವಿ ಮಾತು ಹೇಳಿದ್ದಾರೆ. ಚಿಕ್ಕಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ ಕಾಂಗ್ರೆಸ್ಸಿಗರೇ ನಿಮ್ಮದು ರಾಜಕೀಯ ಅದನ್ನ ಬಿಟ್ಟು. ಕಷ್ಟದಲ್ಲಿರುವವರ ನೆರವಿಗೆ ಬನ್ನಿ.ಆಗ ಹೆಲ್ದಿ ಕಾಂಪಿಟೇಶನ್ ಬೆಳೆಯುತ್ತದೆ. ನೀವು 10 ಗ್ರಾಮ ಪಡೆದ್ರೆ, ಬಿಜೆಪಿಯವರು 20 ಗ್ರಾಂ ಪಡೆಯುತ್ತಾರೆ. ನಾವೇನಾದರೂ ಮಾಡಬೇಕೆಂದು ಆ ಜೆಡಿಎಸ್‍ನವರು 8-10 ಗ್ರಾಮ ಪಡೆಯುತ್ತಾರೆ. ಆಗ ಕಾಂಪಿಟೇಶನ್ ಬೆಳೆಯುತ್ತೆ. ನಮ್ಮೆಲ್ಲರ ಸಹನೆ, ಸಿಟ್ಟನ್ನು ಕನ್ಟ್ರಷ್ಷನ್ ಆಗಿ ನಿಮಾರ್ಣ ಮಾಡೋಣ. ಕ್ವಷನ್ ಮಾಡೋ ಬದಲು ಆ ರೀತಿ ಹೆಲ್ತಿ ಕಾಂಪಿಟೇಶನ್ ಮಾಡಿ ಎಂದು ಮನವಿ ಮಾಡಿದರು. ವಿಜಯನಗರ ಜಿಲ್ಲೆ ಮಾಡಬೇಕು ಎಂಬುದು ಅಲ್ಲಿನ ಶಾಸಕರ ಒತ್ತಡ. ಅದಿನ್ನು ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕ ಚರ್ಚಿಸೋಣ. ಸಿಎಂ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದೂ ಚಿಕ್ಕಮಗಳೂರಿನಲ್ಲಿ ಹೇಳಿದರು...

Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.