ETV Bharat / state

ಕಸದಿಂದ ತುಂಬಿ ತುಳುಕುತ್ತಿರುವ ಗುಡಿಬಂಡೆ ಪಟ್ಟಣ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ - Officers Negligence Gudibande town is overflowing garbage

ಗುಡಿಬಂಡೆ ಪಟ್ಟಣದ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದ್ರೂ ಕಸ. ಪಟ್ಟಣ ಸ್ವಚ್ಛಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.

Gudibande  town
ಕಸದಿಂದ ತುಂಬಿದ ಗುಡಿಬಂಡೆ ಪಟ್ಟಣ
author img

By

Published : Dec 25, 2019, 9:46 AM IST

ಗುಡಿಬಂಡೆ(ಚಿಕ್ಕಬಳ್ಳಾಪುರ): ಪಟ್ಟಣದ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದ್ರೂ ಕಸದ ರಾಶಿ. ಸಾಂಕ್ರಾಮಿಕ ರೋಗದ ಭೀತಿ ಈ ಪಟ್ಟಣದವರನ್ನು ದಿನಂಪ್ರತಿ ಕಾಡುತ್ತಿರುತ್ತದೆ. ಇಲ್ಲಿ ಸ್ವಚ್ಛತೆ ಭಾಗ್ಯ ಕಣ್ಮೆರೆಯಾಗಿದೆ. ಪಟ್ಟಣ ಸ್ವಚ್ಛಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.

ರಸ್ತೆ ಪಕ್ಕದಲ್ಲೆಲ್ಲಾ ಕಸವೋ ಕಸ, ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ

ಇಲ್ಲಿಯ ಪ್ರಮುಖ ವೃತ್ತ ಹಾಗೂ ರಸ್ತೆ ಪಕ್ಕದ ಚರಂಡಿಗಳು ಕಸದಿಂದ ತುಂಬಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ನಾಗರಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಇನ್ನೊಂದೆಡೆ ಸಂಗ್ರಹಿಸಿದ ಕಸವನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡದ ಕಾರಣ ರಸ್ತೆ ಬದಿಯಲ್ಲಿ ಕಸ ತುಂಬಿ ತುಳುಕುತ್ತಿದೆ.

ಕೆಲ ವಾರ್ಡ್​ಗಳಲ್ಲಿ ಚರಂಡಿಗಳೇ ಇಲ್ಲ. ಇದ್ದರೂ ಸಂಪೂರ್ಣ ಮಣ್ಣಿನಿಂದ ತುಂಬಿ ಕಣ್ಮರೆಯಾಗಿದೆ. ಚರಂಡಿ ಯಾವುದೋ, ರಸ್ತೆ ಯಾವುದೋ ಎನ್ನುವುದು ತಿಳಿಯುತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಡಿಬಂಡೆ(ಚಿಕ್ಕಬಳ್ಳಾಪುರ): ಪಟ್ಟಣದ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದ್ರೂ ಕಸದ ರಾಶಿ. ಸಾಂಕ್ರಾಮಿಕ ರೋಗದ ಭೀತಿ ಈ ಪಟ್ಟಣದವರನ್ನು ದಿನಂಪ್ರತಿ ಕಾಡುತ್ತಿರುತ್ತದೆ. ಇಲ್ಲಿ ಸ್ವಚ್ಛತೆ ಭಾಗ್ಯ ಕಣ್ಮೆರೆಯಾಗಿದೆ. ಪಟ್ಟಣ ಸ್ವಚ್ಛಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.

ರಸ್ತೆ ಪಕ್ಕದಲ್ಲೆಲ್ಲಾ ಕಸವೋ ಕಸ, ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ

ಇಲ್ಲಿಯ ಪ್ರಮುಖ ವೃತ್ತ ಹಾಗೂ ರಸ್ತೆ ಪಕ್ಕದ ಚರಂಡಿಗಳು ಕಸದಿಂದ ತುಂಬಿದ್ದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ನಾಗರಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಇನ್ನೊಂದೆಡೆ ಸಂಗ್ರಹಿಸಿದ ಕಸವನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡದ ಕಾರಣ ರಸ್ತೆ ಬದಿಯಲ್ಲಿ ಕಸ ತುಂಬಿ ತುಳುಕುತ್ತಿದೆ.

ಕೆಲ ವಾರ್ಡ್​ಗಳಲ್ಲಿ ಚರಂಡಿಗಳೇ ಇಲ್ಲ. ಇದ್ದರೂ ಸಂಪೂರ್ಣ ಮಣ್ಣಿನಿಂದ ತುಂಬಿ ಕಣ್ಮರೆಯಾಗಿದೆ. ಚರಂಡಿ ಯಾವುದೋ, ರಸ್ತೆ ಯಾವುದೋ ಎನ್ನುವುದು ತಿಳಿಯುತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಗುಡಿಬಂಡೆ ಪಟ್ಟಣದವರಿಗಿಲ್ಲ ಸ್ವಚ್ಚತೆ ಭಾಗ್ಯ Body:ಗುಡಿಬಂಡೆ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದ್ರು ಕಸ ಸಾಕ್ರಾಮಿಕ ರೋಗದ ಭಯ ಈ ಪಟ್ಟಣದವರಿಗೆ ಸ್ವಚ್ಛತೆ ಭಾಗ್ಯ ಕಣ್ಮೆರೆಯಾಗಿದೆConclusion:ಪಟ್ಟಣ ಸ್ವಚ್ಛಗೊಳಿಸುವಲ್ಲಿ ಇಲ್ಲಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.
ಇಲ್ಲಿಯ ಪ್ರಮುಖ ವೃತ್ತ ಹಾಗೂ ರಸ್ತೆ ಪಕ್ಕದ ಚರಂಡಿಗಳು ಕಸಗಳಿಂದ ತುಂಬಿದ್ದು, ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ನಾಗರಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಕೆಲ ವಾರ್ಡ್ಗಳಲ್ಲಿ ಚರಂಡಿಗಳೇ ಇಲ್ಲದ ಕಾರಣ ಸಾಂಕ್ರಾಮಿ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ

ಇನ್ನು ತ್ಯಾಜ್ಯ ಕಸ ಸಂಗ್ರಹಣಾ ಕಸವನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡದ ಕಾರಣ ರಸ್ತೆ ಬದಿಯಲ್ಲಿ ತುಂಬಿ ಸುತ್ತಲೂ ಕಸ ಬಿಳುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗರು, ಪಕ್ಕದ ಅಂಗಡಿಕಾರರಿಗೆ ತುಂಬಾ ತೊಂದರೆಯಾಗುತ್ತಿದೆ.

ಸಂಪೂರ್ಣ ಮಣ್ಣಿನಿಂದ ತುಂಬಿ ಕಣ್ಮರೆಯಾಗಿದೆ. ಚರಂಡಿ ಯಾವುದೋ, ರಸ್ತೆ ಯಾವುದೋ ಎನ್ನುವುದೂ ತಿಳಿಯುತ್ತಿಲ್ಲ. ಆದರೆ ಯಾವುದೇ ಅಧಿಕಾರಿಗಳು ಮಾತ್ರ ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.