ETV Bharat / state

ಸಿಎಂ ದೊಡ್ಡವರೋ ಅಥವಾ ಮಾಧುಸ್ವಾಮಿ ದೊಡ್ಡವರೋ? ಜನರೇ ತೀರ್ಮಾನಿಸಲಿ: ಹೆಚ್​.ಎಂ. ರೇವಣ್ಣ - ಮಾಧುಸ್ವಾಮಿ ಹೇಳಿಕೆಗೆ ಹೆಚ್.ಎಂ.ರೇವಣ್ಣ ಪ್ರತಿಕ್ರಿಯೆ

ಡಾ.ಕೆ.ಸುಧಾಕರ್​​​ ರಾಜಕೀಯ ಜೀವನಕ್ಕೆ ಜೀವಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಉತ್ತಮ ಒಡನಾಟ ಹೊಂದಿದ್ದ ಸುಧಾಕರ್​​, ಪಕ್ಷ ತೊರೆದಿದ್ದಲ್ಲದೆ, ತಾಕತ್ ಇದ್ರೆ ಗೆಲ್ಲಿ ಎಂದು ಸಿದ್ದರಾಮಯ್ಯನವರಿಗೇ ಸವಾಲು ಹಾಕುವುದು ದುರಹಂಕಾರದ ಪರಮಾವಧಿ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಕಿಡಿಕಾರಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ
author img

By

Published : Nov 21, 2019, 10:27 PM IST

Updated : Nov 21, 2019, 11:17 PM IST

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ದೊಡ್ಡವರೋ ಅಥವಾ ಸಚಿವ ಮಾಧುಸ್ವಾಮಿ ದೊಡ್ಡವರೋ ಎಂಬುದನ್ನು ಜನರೇ ತೀರ್ಮಾನ ಮಾಡಬೇಕೆಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಲಿಯಾಳದಲ್ಲಿ ಆಗಿರುವ ಘಟನೆಯನ್ನು ಖಂಡಿಸುತ್ತೇನೆ. ಅಧಿಕಾರಕ್ಕೆ ಬಂದಿದ್ದೇನೆ ಎಂದು ಕನಕ ವೃತ್ತಕ್ಕಿರುವ ಬೋರ್ಡ್ ತೆಗೆಸಿ ಮತ್ತೊಂದು ಹೆಸರನ್ನು ಹಾಕಿಸುವುದು ಸರಿಯಲ್ಲ. ಸಮಾಜದ ಜನರ ಚಿಂತನೆಗಳನ್ನು ಮಾಧುಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕುರುಬ ಸಮಾಜದ ಸ್ವಾಮೀಜಿಗಳ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ

ಇನ್ನು ಕೆ.ಸುಧಾಕರ್​​​ ರಾಜಕೀಯ ಜೀವನಕ್ಕೆ ಜೀವಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಉತ್ತಮ ಒಡನಾಟ ಹೊಂದಿದ್ದ ಸುಧಾಕರ್​​, ಪಕ್ಷ ತೊರೆದಿದ್ದಲ್ಲದೆ, ತಾಕತ್ ಇದ್ರೆ ಗೆಲ್ಲಿ ಎಂದು ಸಿದ್ದರಾಮಯ್ಯನವರಿಗೇ ಸವಾಲು ಕಾಹುವುದು ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದರು.

ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಸಾಲ ಮಾಡಿದ್ದರೆ ಅದು ವ್ಯವಹಾರ. ಅದಕ್ಕೂ ಚುನಾವಣೆಗೂ ಏನು ಸಂಬಂಧ? ನನ್ನ ಪ್ರಕಾರ ನಾಗರಾಜ್ ಇಡಿಗೆ ಹೆದರಿ ಬಿಜೆಪಿಗೆ ಹೋಗಿದ್ದಾರೆಂದು ಟಾಂಗ್ ನೀಡಿದರು.

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ದೊಡ್ಡವರೋ ಅಥವಾ ಸಚಿವ ಮಾಧುಸ್ವಾಮಿ ದೊಡ್ಡವರೋ ಎಂಬುದನ್ನು ಜನರೇ ತೀರ್ಮಾನ ಮಾಡಬೇಕೆಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಲಿಯಾಳದಲ್ಲಿ ಆಗಿರುವ ಘಟನೆಯನ್ನು ಖಂಡಿಸುತ್ತೇನೆ. ಅಧಿಕಾರಕ್ಕೆ ಬಂದಿದ್ದೇನೆ ಎಂದು ಕನಕ ವೃತ್ತಕ್ಕಿರುವ ಬೋರ್ಡ್ ತೆಗೆಸಿ ಮತ್ತೊಂದು ಹೆಸರನ್ನು ಹಾಕಿಸುವುದು ಸರಿಯಲ್ಲ. ಸಮಾಜದ ಜನರ ಚಿಂತನೆಗಳನ್ನು ಮಾಧುಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಕುರುಬ ಸಮಾಜದ ಸ್ವಾಮೀಜಿಗಳ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ

ಇನ್ನು ಕೆ.ಸುಧಾಕರ್​​​ ರಾಜಕೀಯ ಜೀವನಕ್ಕೆ ಜೀವಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಉತ್ತಮ ಒಡನಾಟ ಹೊಂದಿದ್ದ ಸುಧಾಕರ್​​, ಪಕ್ಷ ತೊರೆದಿದ್ದಲ್ಲದೆ, ತಾಕತ್ ಇದ್ರೆ ಗೆಲ್ಲಿ ಎಂದು ಸಿದ್ದರಾಮಯ್ಯನವರಿಗೇ ಸವಾಲು ಕಾಹುವುದು ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದರು.

ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಸಾಲ ಮಾಡಿದ್ದರೆ ಅದು ವ್ಯವಹಾರ. ಅದಕ್ಕೂ ಚುನಾವಣೆಗೂ ಏನು ಸಂಬಂಧ? ನನ್ನ ಪ್ರಕಾರ ನಾಗರಾಜ್ ಇಡಿಗೆ ಹೆದರಿ ಬಿಜೆಪಿಗೆ ಹೋಗಿದ್ದಾರೆಂದು ಟಾಂಗ್ ನೀಡಿದರು.

Intro:ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನೋ ಅಥವಾ ಮಾಧುಸ್ವಾಮಿಯೋ ಜನರೇ ತೀರ್ಮಾನ ಮಾಡಬೇಕೆಂದು ಮಾಜಿ ಸಾರಿಗೆ ಸಚಿವ ಎಚ್ ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.


Body:ಕಾಂಗ್ರೆಸ್ ಮಾಜಿ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಸುಧಾಕರ್ ನಡೆಯನ್ನು ತೀವ್ರವಾಗಿ ಖಂಡಿಸಿ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ಗೆ ಜೀವಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನಡುವೆ ಒಡನಾಟ ಇದ್ರು ಪಕ್ಷ ತೊರೆದು ಬಂದು ತಾಕತ್ ಇದ್ರೆ ಗೆಲ್ಲಲೀ ಎಂದು ಹೇಳುವುದು ಸರಿಯಿಲ್ಲಾ ಎಂದು ಕಿಡಿಕಾರಿದ್ದಾರೆ..


ಇನ್ನೂ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಗ್ಗೆ ಮಾತಾನಾಡಿದ ಸಚಿವ ರೇವಣ್ಣ ಸಾಲ ಮಾಡಿದ್ದರೆ ಅದು ವ್ಯವಹಾರ.ಅದಕ್ಕೂ ಚುನಾವಣೆಗೂ ಏನು ಸಂಬಂಧ? ನನ್ನ ಪ್ರಕಾರ ಇಡಿಗೆ ಹೆದರಿ ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆಂದು ಟಾಂಗ್ ನೀಡಿದ್ದಾರೆ.


ಹುಲಿಯಾಳದಲ್ಲಿ ಆಗಿರುವ ಘಟನೆಯನ್ನು ಕಂಡಿಸುತ್ತೇನೆ,ಅಧಿಕಾರಕ್ಕೆ ಬಂದಿದ್ದೀನಿ ಎಂದು ಕನಕ ವೃತ್ತಕ್ಕಿರುವ ಬೋರ್ಡ್ ತಗೆಸಿ ಮತ್ತೊಂದು ಹೆಸರನ್ನು ಹಾಕಿಸುವುದು ಸರಿಯಲ್ಲಾ.ಮಾಧುಸ್ವಾಮಿ ಸಮಾಜದ ಜನರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕು.ಕುರುಬ ಸಮಾಜದ ಸ್ವಾಮಿಗಳನ್ನು ಈ ರೀತಿಯಾಗಿ ಮಾತಾನಾಡುವುದು ಸರಿಯಲ್ಲಾ..

ರಾಜ್ಯದ ಮುಖ್ಯಮಂತ್ರಿಗಳೆ ಕ್ಷಮೆಯನ್ನು ಕೋರಿದ್ದಾರೆ.ಆದರೆ ಆಧುನಿಕ ದುರ್ಯೋಧನ ಮಾಧುಸ್ವಾಮಿ ಮಾತ್ರ ಮುಖ್ಯಮಂತ್ರಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆಂದು ಹೇಳಿದ್ದಾರೆ.ಇದರಿಂದ ಮುಖ್ಯಮಂತ್ರಿಗಳು ದೊಡ್ಡವರೊ ಅಥವಾ ಮಾಧುಸ್ವಾಮಿ ದೊಡ್ಡವರೋ ಜನರೇ ತೀರ್ಮಾನ ಮಾಡಬೇಕೆಂದು ವಾಗ್ದಾಳಿ ನಡೆಸಿದ್ದಾರೆ.


Conclusion:
Last Updated : Nov 21, 2019, 11:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.