ETV Bharat / state

ಸ್ಮಶಾನಕ್ಕಾಗಿ ಸಜ್ಜಲವಾರಿಪಲ್ಲಿ ಗ್ರಾಮಸ್ಥರ ಬೇಡಿಕೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ - ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಹೋಬಳಿ

ಚೇಳೂರು ಹೋಬಳಿಯ ಸಜ್ಜಲವಾರಿಪಲ್ಲಿ ಗ್ರಾಮದ ಸರ್ವೇ ನಂಬರ್.146 ರ 1 ಎಕರೆ 8 ಕುಂಟೆಯ ಸರ್ಕಾರಿ ಖರಾಬು ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸುವಂತೆ ಕೋರಿ ಜನರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದಕ್ಕೆ ಯಾವುದೇ ರೀತಿಯ ಕಾನೂನಿನ ಕ್ರಮಕೈಗೊಂಡಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ.

Demands of Sajjalavaripalli villagers
ಸ್ಮಶಾನಕ್ಕಾಗಿ ಸಜ್ಜಲವಾರಿಪಲ್ಲಿ ಗ್ರಾಮಸ್ಥರ ಬೇಡಿಕೆ
author img

By

Published : Feb 17, 2020, 4:56 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಹೋಬಳಿಯ ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಸರ್ವೇ ನಂಬರ್.146 ರ 1 ಎಕರೆ 8 ಕುಂಟೆಯ ಸರ್ಕಾರಿ ಖರಾಬು ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಕೋರಿ ಸಜ್ಜಲವಾರಿಪಲ್ಲಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಜನರು ಶವಸಂಸ್ಕಾರ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ತಮ್ಮ ಸ್ವಂತ ಹೊಲ-ಗದ್ದೆಗಳಲ್ಲಿ ಶವಗಳನ್ನು ಹೂಳುತ್ತಿದ್ದು, ಇನ್ನೂ ಕೆಲವರಿಗೆ ಜಮೀನಿಲ್ಲದೆ ಶವಸಂಸ್ಕಾರ ಮಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಶಾನಕ್ಕಾಗಿ ಸಜ್ಜಲವಾರಿಪಲ್ಲಿ ಗ್ರಾಮಸ್ಥರ ಬೇಡಿಕೆ

ಸಜ್ಜಲವಾರಿಪಲ್ಲಿ ಗ್ರಾಮದ ಸುಭಾಶ್ ಅವರು ಮಾತನಾಡಿ ಸರ್ಕಾರಿ ಜಮೀನು ಸರ್ವೇ ನಂಬರ್.146 ರಲ್ಲಿ 1 ಎಕರೆ 8 ಕುಂಟೆ ಸರ್ಕಾರಿ ಜಮೀನಿದ್ದು, ಈ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಕಾಯ್ದಿರಿಸುವಂತೆ ಸುಮಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಕೆಲವರು 1 ಎಕರೆ 8 ಕುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡಲು ಸಹ ಯತ್ನಿಸುತ್ತಿದ್ದಾರೆ. ಇನ್ನೂ ಈ ಜಾಗದಲ್ಲಿ ತಮ್ಮ ಪೂರ್ವಜರ ಸಮಾಧಿಗಳು ಸಹ ಕೆಡವಿ ಉಳಿಮೆ ಮಾಡಿರುತ್ತಾರೆ.

ಗ್ರಾಮಲೆಕ್ಕಾಧಿಕಾರಿಗಳಾದ ಅನಿಲ್ ಅವರಿಗೆ ಅರ್ಜಿ ಸಲ್ಲಿಸಿ 2 ವರ್ಷಗಳಾದರೂ ಸಹ ಸಾರ್ವಜನಿಕರ ಸ್ಮಶಾನಕ್ಕಾಗಿ ಯಾವುದೇ ರೀತಿಯ ಕಾನೂನಿನ ಕ್ರಮಕೈಗೊಂಡಿಲ್ಲವೆಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿ ಸುಮಾರು 500 ಕ್ಕಿಂತ ಅಧಿಕ ಜನರು ವಾಸಮಾಡಲಾಗುತ್ತಿದ್ದು ಶವಸಂಸ್ಕಾರಕ್ಕಾಗಿ ಬಡವರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.

ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಹೋಬಳಿಯ ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಸರ್ವೇ ನಂಬರ್.146 ರ 1 ಎಕರೆ 8 ಕುಂಟೆಯ ಸರ್ಕಾರಿ ಖರಾಬು ಜಮೀನನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಲು ಕೋರಿ ಸಜ್ಜಲವಾರಿಪಲ್ಲಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಸಜ್ಜಲವಾರಿಪಲ್ಲಿ ಗ್ರಾಮದಲ್ಲಿ ಜನರು ಶವಸಂಸ್ಕಾರ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ತಮ್ಮ ಸ್ವಂತ ಹೊಲ-ಗದ್ದೆಗಳಲ್ಲಿ ಶವಗಳನ್ನು ಹೂಳುತ್ತಿದ್ದು, ಇನ್ನೂ ಕೆಲವರಿಗೆ ಜಮೀನಿಲ್ಲದೆ ಶವಸಂಸ್ಕಾರ ಮಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಶಾನಕ್ಕಾಗಿ ಸಜ್ಜಲವಾರಿಪಲ್ಲಿ ಗ್ರಾಮಸ್ಥರ ಬೇಡಿಕೆ

ಸಜ್ಜಲವಾರಿಪಲ್ಲಿ ಗ್ರಾಮದ ಸುಭಾಶ್ ಅವರು ಮಾತನಾಡಿ ಸರ್ಕಾರಿ ಜಮೀನು ಸರ್ವೇ ನಂಬರ್.146 ರಲ್ಲಿ 1 ಎಕರೆ 8 ಕುಂಟೆ ಸರ್ಕಾರಿ ಜಮೀನಿದ್ದು, ಈ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಕಾಯ್ದಿರಿಸುವಂತೆ ಸುಮಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಕೆಲವರು 1 ಎಕರೆ 8 ಕುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡಲು ಸಹ ಯತ್ನಿಸುತ್ತಿದ್ದಾರೆ. ಇನ್ನೂ ಈ ಜಾಗದಲ್ಲಿ ತಮ್ಮ ಪೂರ್ವಜರ ಸಮಾಧಿಗಳು ಸಹ ಕೆಡವಿ ಉಳಿಮೆ ಮಾಡಿರುತ್ತಾರೆ.

ಗ್ರಾಮಲೆಕ್ಕಾಧಿಕಾರಿಗಳಾದ ಅನಿಲ್ ಅವರಿಗೆ ಅರ್ಜಿ ಸಲ್ಲಿಸಿ 2 ವರ್ಷಗಳಾದರೂ ಸಹ ಸಾರ್ವಜನಿಕರ ಸ್ಮಶಾನಕ್ಕಾಗಿ ಯಾವುದೇ ರೀತಿಯ ಕಾನೂನಿನ ಕ್ರಮಕೈಗೊಂಡಿಲ್ಲವೆಂದು ಸಜ್ಜಲವಾರಿಪಲ್ಲಿ ಗ್ರಾಮಸ್ಥರು ಆರೋಪಿಸಿದರು. ಗ್ರಾಮದಲ್ಲಿ ಸುಮಾರು 500 ಕ್ಕಿಂತ ಅಧಿಕ ಜನರು ವಾಸಮಾಡಲಾಗುತ್ತಿದ್ದು ಶವಸಂಸ್ಕಾರಕ್ಕಾಗಿ ಬಡವರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.