ETV Bharat / state

ಬಿಳಿಗಿರಿ ರಂಗನಬೆಟ್ಟದಲ್ಲಿ ಅಪಾಯವನ್ನು ಆಹ್ವಾನಿಸುವಂತಿದೆ ಯುವಕರ ಸೆಲ್ಫಿ ಹುಚ್ಚು..! - selfie spot in BR hills

ಗಿರಿರಂಗನ ದರ್ಶನ ಪಡೆಯಲು ಬರುವ ಜನರು ಬೆಟ್ಟದ ತುದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದು ರಭಸದಿಂದ ಬೀಸುವ ಗಾಳಿಗೆ ಸ್ವಲ್ಪ ಆಯ ತಪ್ಪಿದರೂ ಜೀವಕ್ಕೆ ಆಪತ್ತು ಬರುವಂತಾಗಿದೆ.

ಬಿಳಿಗಿರಿ ರಂಗನಬೆಟ್ಟದಲ್ಲಿ ಫೋಟೋಗಾಗಿ ಯುವಜನರ ಸಾಹಸ
author img

By

Published : Aug 3, 2019, 7:55 PM IST

ಚಾಮರಾಜನಗರ : ಬಿಳಿಗಿರಿರಂಗನ ದರ್ಶನ ಪಡೆಯಲು ಬರುವ ಜನರು ಬೆಟ್ಟದ ತುದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದು ರಭಸದಿಂದ ಬೀಸುವ ಗಾಳಿಗೆ ಸ್ವಲ್ಪ ಆಯ ತಪ್ಪಿದರೂ ಜೀವಕ್ಕೆ ಆಪತ್ತು ಬರುವಂತಾಗಿದೆ.

ಬಿಳಿಗಿರಿ ರಂಗನಬೆಟ್ಟದಲ್ಲಿ ಫೋಟೋಗಾಗಿ ಯುವಜನರ ಸಾಹಸ

ದೇವಾಲಯದ ಸುತ್ತಲಿನ ಪ್ರದೇಶ ಕಂದಾಯ ಭೂಮಿಯಾದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯೂ ಮಧ್ಯ ಪ್ರವೇಶಿಸುತ್ತಿಲ್ಲ. ದೇಗುಲದ ಸಿಬ್ಬಂದಿ ಯುವ ಜನತೆಯ ಪುಂಡಾಟ ತಿಳಿದರೂ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಮೋಜಿಗೆ ಬರುವ ಪ್ರವಾಸಿಗರು ಕಾಡಿನ ಮಧ್ಯೆ ವಾಹನ ನಿಲ್ಲಿಸಿ ತಡೆಗೋಡೆ ಮೇಲೆ ನಿಲ್ಲುವುದು ಹೆಚ್ಚಾಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.

ಚಾಮರಾಜನಗರ : ಬಿಳಿಗಿರಿರಂಗನ ದರ್ಶನ ಪಡೆಯಲು ಬರುವ ಜನರು ಬೆಟ್ಟದ ತುದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದು ರಭಸದಿಂದ ಬೀಸುವ ಗಾಳಿಗೆ ಸ್ವಲ್ಪ ಆಯ ತಪ್ಪಿದರೂ ಜೀವಕ್ಕೆ ಆಪತ್ತು ಬರುವಂತಾಗಿದೆ.

ಬಿಳಿಗಿರಿ ರಂಗನಬೆಟ್ಟದಲ್ಲಿ ಫೋಟೋಗಾಗಿ ಯುವಜನರ ಸಾಹಸ

ದೇವಾಲಯದ ಸುತ್ತಲಿನ ಪ್ರದೇಶ ಕಂದಾಯ ಭೂಮಿಯಾದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯೂ ಮಧ್ಯ ಪ್ರವೇಶಿಸುತ್ತಿಲ್ಲ. ದೇಗುಲದ ಸಿಬ್ಬಂದಿ ಯುವ ಜನತೆಯ ಪುಂಡಾಟ ತಿಳಿದರೂ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಮೋಜಿಗೆ ಬರುವ ಪ್ರವಾಸಿಗರು ಕಾಡಿನ ಮಧ್ಯೆ ವಾಹನ ನಿಲ್ಲಿಸಿ ತಡೆಗೋಡೆ ಮೇಲೆ ನಿಲ್ಲುವುದು ಹೆಚ್ಚಾಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.

Intro:ಫೋಟೋ ಹುಚ್ಚಿಗೆ ಬಿಆರ್ಟಿಯಲ್ಲಿ ಯುವಜನರ ಸಾಹಸ: ಪ್ರಪಾತದ ಬಳಿ ನಿಲ್ಲುತ್ತಿದ್ದಾರೆ ಪ್ರವಾಸಿಗರು!

ಚಾಮರಾಜನಗರ: ಸದಾ ಹಸಿರಿನಿಂದ ಕಂಗೊಳಿಸುವ, ಮುದ ಕೊಡುವ ತಂಪನೆ ವಾತಾವರಣವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಸೆಲ್ಫಿ ಗೀಳು ಮಿತಿಮೀರಿದೆ.

Body:ಹೌದು, ಬಿಳಿಗಿರಿರಂಗನ ದರ್ಶನ, ಪ್ರಕೃತಿಯ ಅಂದ ನೋಡಲು ಬರುವ ಪ್ರವಾಸಿಗರು ಬೆಟ್ಟದ ತುದಿಗೆ ನಿಂತು ಫೋಟೋ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದು ರಭಸದಿಂದ ಬೀಸುವ ಗಾಳಿಗೆ ಸ್ವಲ್ಪ ಆಯ ತಪ್ಪಿದರೂ ದೇವರಪಾದವೇ ಸೇರುವ ಭಯವೇ ಇಲ್ಲದಂತಾಗಿದೆ.

ದೇಗುಲದ ಜೀರ್ಣೋದ್ಧಾರ ನಡೆಯುತ್ತಿರುವ ಸ್ಥಳದಲ್ಲಿ ಕಾವಲುಗಾರ ನಿಲ್ಲದಿರುವುದು ಹಾಗೂ ತಡೆಗೋಡೆಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸುವುದು ಹೆಚ್ಚಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಇದಕ್ಕೇ ಬ್ರೇಕ್ ಹಾಕಬೇಕಿದೆ.

ದೇವಾಲಯದ ಸುತ್ತಲಿನ ಪ್ರದೇಶ ಕಂದಾಯ ಭೂಮಿಯಾದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯೂ ಮಧ್ಯಪ್ರವೇಶಿಸುತ್ತಿಲ್ಲ, ದೇಗುಲದ ಸಿಬ್ಬಂದಿ ಯುವ ಜನತೆ ಪುಂಡಾಟ ತಿಳಿದರೂ ನಿರ್ಲಕ್ಷ್ಯ ತಾಳಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಮೋಜಿಗೆ ಬರುವ ಪ್ರವಾಸಿಗರು ಕಾಡಿನ ಮಧ್ಯೆ ವಾಹನ ನಿಲ್ಲಿಸಿ ತಡೆಗೋಡೆ ಮೇಲೆ ನಿಲ್ಲುವುದು ಕೆ.ಗುಡಿ ಅರಣ್ಯ ವಲಯದಲ್ಲಿ ಹೆಚ್ಚಾಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.

Conclusion:ಒಟ್ಟಿನಲ್ಲಿ ಪ್ರವಾಸಿಗರು ಸೆಲ್ಫಿ ಹುಚ್ಚಿಗೆ ಜೀವವನ್ನೇ ಅಪಾಯಕ್ಕೊಡ್ಡುತ್ತಿರುವ ವಿಪರ್ಯಾಸವೇ ಸರಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.